Viral: ‘ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?’

Romance : 'ನಮ್ಮ ದೇಶದ ರೈಲು ವ್ಯವಸ್ಥೆ ಶೀಘ್ರವೇ ಸುಧಾರಿಸಿ ಮುಂದಿನ ದಿನಗಳಲ್ಲಿ ಯುವಜನತೆಗೆ ಇಂಥ ಅವಕಾಶಗಳು ದಕ್ಕಲಿ' ಎಂದು ಕೆಲ ನೆಟ್​ಮಂದಿ ಮನಸಾರೆ ಹಾರೈಸುತ್ತಿದೆ. ಇನ್ನೂ ಕೆಲವರು ಏನೆನ್ನುತ್ತಿದ್ದಾರೆ ಎಂದು ಓದಿ ನೋಡಿ.

Viral: 'ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?'
ಆಹಾ ಎಂಥಾ ರೋಮಾಂಚನ!
Follow us
|

Updated on:Jul 03, 2023 | 7:31 PM

Love : ಸುತ್ತಲೂ ಹಸಿರಿರುವ ಒಂದು ರಮ್ಯ ತಾಣ. ಟೀ ತೋಟಗಳ (Tea Estate) ಪಕ್ಕದಲ್ಲಿ ಸಾಗುತ್ತಿರುವ ರೈಲು. ರೈಲಿನ ಬಾಗಿಲ ಹಿಡಿಕೆಗಳನ್ನು ಹಿಡಿದುಕೊಂಡು ಹೊರಬಾಗಿರುವ ಒಬ್ಬ ಯುವತಿ. ಪಾದಗಳ ತುದಿಯ ಆಸರೆಯನ್ನಷ್ಟೇ ಪಡೆದು ಅವಳಿಗೆ ಮುಖ ಮಾಡಿ ಜೋತು ಬಿದ್ದಿರುವ ಸಾಹಸಿ ಯುವಕ. ಈ ಭಂಗಿಯಲ್ಲಿ ಒಬ್ಬರನ್ನೊಬ್ಬರು ಮುದ್ದಿಸುತ್ತಿರುವ ಫೋಟೋ, “ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?” ಎಂಬ ಪ್ರಚೋದನಕಾರಿ ಒಕ್ಕಣೆಯೊಂದಿಗೆ ಟ್ವಿಟರ್​ನಲ್ಲಿ ಹರಿದಾಡುತ್ತಿದೆ.

ಇದು ನಿಜಕ್ಕೂ ಈ ಮೂರ್ಖ ಜೋಡಿಯ ದುಸ್ಸಾಹಸವೋ ಫೋಟೋಶಾಪ್ ಕೆಲಸವೋ ಯಾರಿಗೂ ಗೊತ್ತಿಲ್ಲ. ಆದರೆ ಇದನ್ನು ನೋಡಿದ ಲಕ್ಷಾಂತರ ಜನ ಹುಚ್ಚೆದ್ದು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. “ನನ್ನ ತಲೆಯಲ್ಲಿ ಕೆಲಸ ಮಾಡುತ್ತಿರುವ ಮಿದುಳಿರುವುದೇ ನನಗೆ ಅಡ್ಡಿ,” “ಮುಂದಿನ ಫ್ರೇಮ್‌ನಲ್ಲಿ ಅಡ್ಡ ಬರುವ ಕರೆಂಟ್ ಕಂಬ,” “ಪಕ್ಕದ ಬೋಗಿಯಲ್ಲಿ ತಂಬಾಕು ತಿಂದು ಬಾಯಿ ಮುಕ್ಕಳಿಸಿ ಕಿಟಕಿಯಿಂದ ಉಗುಳುವ ಅಂಕಲ್‌ಗಳು”, “ಹಳಿಯ ಪಕ್ಕದಲ್ಲಿ ಕಕ್ಕಸ್ ಮಾಡಲು ಕೂತಿರುವ ಹೈಕಳು,” “ರೈಲು ನಿಧಾನವಾಗುವುದನ್ನು ಕಾಯುತ್ತ ಬಾಗಿಲಲ್ಲೇ ಕುಳಿತಿರುವ ಚುರುಮುರಿ ಮಾರುವವನು,” ಹೀಗೆ ತರಹೇವಾರಿ ಕಟಕಿಗಳು ಪುಂಖಾನುಪುಂಖವಾಗಿ ಹರಿದು ಬರುತ್ತಿವೆ.

ಇದನ್ನೂ ಓದಿ : Viral Video: ದ್ವೇಷ ಹರಡುವುದನ್ನೇ ಧ್ಯೇಯ ಎಂದು ಭಾವಿಸಿರುವ ವಾಟ್ಸ್ಯಾಪ್ ಆಂಟೀ ಅಂಕಲ್​​ಗಳು; ರವೀಶ್ ಕುಮಾರ್ ಹೊತ್ತಿಸಿದ ಕಿಡಿ

“ನಮ್ಮ ದೇಶದ ರೈಲು ವ್ಯವಸ್ಥೆ ಶೀಘ್ರವೇ ಸುಧಾರಿಸಿ ಮುಂದಿನ ದಿನಗಳಲ್ಲಿ ಯುವಜನತೆಗೆ ಇಂಥ ಅವಕಾಶಗಳು ದಕ್ಕಲಿ,” ಎಂದೊಬ್ಬರು ಹಾರೈಸಿದ್ದಾರೆ. “ರೈಲ್ವೇ ಮಾರ್ಗದಲ್ಲಿ ಗುಂಡಿಗಳಿರೋದೇ ನನಗೆ ಇಂಥ ಸಾಹಸಕ್ಕೆ ಅಡ್ಡಿ,” ಎಂದು ಉಗಾಂಡಾದ ಒಬ್ಬರು ಅಲ್ಲಿಯ ರೈಲು ವ್ಯವಸ್ಥೆಯ ದುಸ್ಥಿತಿಯನ್ನು ಬಣ್ಣಿಸಿದ್ದಾರೆ. “ಅಯ್ಯೋ ಆ ರೈಲು ನಿಂತಲ್ಲೇ ನಿಂತಿದೆ. ಹುಡುಗಿಯ ಕೂದಲು ಹಾರಾಡುತ್ತಲೇ ಇಲ್ಲ,” ಎಂದೊಬ್ಬರು ತಾಂತ್ರಿಕ ಪ್ರಶ್ನೆಯೆತ್ತಿದ್ದಾರೆ. ಒಟ್ಟಿನಲ್ಲಿ ಈ ದೃಶ್ಯವನ್ನು ನೋಡಿದವರಿಗೆಲ್ಲ ನಾನಾ ಕಾರಣಗಳಿಗೆ ಅದು ಕಚಗುಳಿ ಕೊಟ್ಟಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 7:27 pm, Mon, 3 July 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ