AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pumpwell flyover: ಮತ್ತೆ ಟ್ರೋಲ್​​ ಆಗುತ್ತಿದೆ ಪಂಪ್ವೆಲ್​ ಮೇಲ್ಸೇತುವೆ, ಸಖತ್​ ಮೀಮ್ಸ್​ ಇಲ್ಲಿದೆ ನೋಡಿ

ನೆನ್ನೆ ಸುರಿದ ಭಾರಿ ಮಳೆಗೆ ಮಂಗಳೂರಿನ ಹೃದಯ ಭಾಗವಾದ ಪಂಪ್ವೆಲ್​​ ಅಂಡರ್​ ಪಾಸ್​​ ಜಲಾವೃತಗೊಂಡಿದೆ, ಇದೀಗ ಈ ಬಗ್ಗೆ ಅನೇಕ ಮೀಮ್ಸ್​​ಗಳು ವೈರಲ್​ ಆಗುತ್ತಿದೆ.

Pumpwell flyover: ಮತ್ತೆ ಟ್ರೋಲ್​​ ಆಗುತ್ತಿದೆ ಪಂಪ್ವೆಲ್​ ಮೇಲ್ಸೇತುವೆ, ಸಖತ್​ ಮೀಮ್ಸ್​ ಇಲ್ಲಿದೆ ನೋಡಿ
ವೈರಲ್​​ ವೀಡಿಯೊ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 04, 2023 | 6:59 PM

ಕರ್ನಾಟಕದ ಅನೇಕ ಕಡೆ ಮಳೆರಾಯನ ಆರ್ಭಟ ಜೋರಾಗಿದೆ. ಮಳೆ ಬಂದರೆ ಬೆಂಗಳೂರು ಮಾತ್ರ ಮುಳುಗುತ್ತದೆ ಎಂದುಕೊಂಡಿದ್ದೇವು ಆದರೆ ಈಗ ಮಂಗಳೂರು ಕೂಡ ಮುಳುಗುವಂತೆ ದಕ್ಷಿಣ ಕನ್ನಡ ಸಂಸದರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಂಪ್ವೆಲ್ ಮೇಲ್ಸೇತುವೆ ಬಗ್ಗೆ (Pumpwell flyover)  ಮೀಮ್ಸ್​​​​ ಮಾಡುತ್ತಿದ್ದಾರೆ. ಹೌದು ಪಂಪ್​ವೆಲ್​​ ಮಂಗಳೂರಿನ ಹೃದಯ ಭಾಗ, ಒಂದು ಕಡೆಯಿಂದ ಕೇರಳಕ್ಕೆ, ಇನ್ನೊಂದು ಕಡೆಯಿಂದ ಉಡುಪಿಗೆ, ಇನ್ನೂ ಅನೇಕ ರಾಜ್ಯ, ಜಿಲ್ಲೆಗಳಿಗೆ ಸಂಪರ್ಕ ಬೆಳೆಸುವ ಕೇಂದ್ರ ಪಂಪ್​​ವೆಲ್​,

ದಕ್ಷಿಣ ಕನ್ನಡದ ಸಂಸದರು ನಳಿನ್​​ ಕುಮಾರ್​​ ಕಟೀಲ್​​ ಅವರು ಈ ಜಿಲ್ಲೆಯಲ್ಲಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಈಗ ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಆಗಿದ್ದಾರೆ, ಈ ಹಿಂದೆ ಪಂಪ್ವೆಲ್​​ನಲ್ಲಿದ್ದ ಸುಂದರವಾದ ಕಲಶವನ್ನು ತೆಗೆದು ಮಂಗಳೂರಿನ ನಂತೂರು ಕಡೆಯಿಂದ ತಲಪಾಡಿಯ ಕಡೆಗೆ ಸಂಪರ್ಕ ಸಾಧಿಸುವ ಪಂಪ್ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ 10 ವರ್ಷ ತೆಗೆದುಕೊಂಡು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ಭಾರೀ ಟ್ರೋಲ್​​ ಮಾಡಲಾಗಿತ್ತು, ನಂತರ ಮಂಗಳೂರಿನ ಜನರ ಬಾಯಿಯಲ್ಲಿ ಪಂಪ್ವೆಲ್​​ ಮೇಲ್ಸೇತುವೆ ಬಗ್ಗೆಯೇ ಮಾತು, ಇದಕ್ಕೆ ಒಂದು ಹಾಡು ಕೂಡ ರಚನೆಯಾಗಿತ್ತು. “ಪಂಪ್ ವೆಲ್​​ ಗ್​ ಬಲೆ ಪಂಪ್ ವೆಲ್​​ ಗ್ ಬಲೆ” ಎಂದು, ಇದು ಸಂಸದರಿಗೆ ಮುಜುಗರ ತಂದರು, ಈ ಯಾವುದಕ್ಕೂ ಕ್ಯಾರ್​​ ಎನ್ನದೇ ಕೊನೆಗೂ ಪಂಪ್ವೆಲ್​​ ಮೇಲ್ಸೇತುವೆ ಲೋಕರ್ಪಣೆ ಮಾಡಿದರು.

ಆದರೆ ಪಂಪ್ವೆಲ್​​ ಮೇಲ್ಸೇತುವೆ ಉದ್ಘಾಟನೆಗೊಂಡ ನಂತರ ಬಂದ ಮೊದಲ ಮಳೆಗೆ ಪಂಪ್ವೆಲ್ ಅಂಡರ್​ ಪಾಸ್​​​ ಜಲಾವೃತಗೊಂಡಿತ್ತು, ಮತ್ತೆ ಟ್ರೋಲ್​​ ಆಗಿತ್ತು. ಇದೀಗ ಪ್ರತಿ ಮಳೆಗೂ ಈ ಅಂಡರ್​ ಪಾಸ್ ನೀರಿನಿಂದ ತುಂಬುತ್ತದೆ, ಮತ್ತೆ ಅದೇ ಟ್ರೋಲ್, ಆದರೆ ಈ ಅವೈಜ್ಞಾನಿಕ ಕಾರ್ಯದಿಂದ ಸ್ಥಳೀಯ ಜನರು ಮತ್ತು ಬೆಂಗಳೂರು ಕಡೆಗೆ ಹೋಗುವ ಜನರಿಗೆ ತೊಂದರೆಯಾಗುತ್ತಿದೆ, ಇದರಿಂದ 3-4 ತಾಸುಗಳ ಕಾಲ ಇಲ್ಲಿ ಟ್ರಾಪಿಕ್​​ ಜಾವ್ ​ ಆಗುವ ಪರಿಸ್ಥಿತಿ ಬಂದಿದೆ. ಇದರ ಜತೆಗೆ ಸಂಸದರನ್ನು ಕೂಡ ಟ್ರೋಲ್​​ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​​ ಮಾಡುವ ಮೂಲಕ ಪಂಪ್ವೆಲ್​​ ಪರಿಸ್ಥಿತಿಯನ್ನು ಸಂಸದರಿಗೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: Karnataka Rain: ಮಂಗಳೂರಿನಲ್ಲಿ ವರುಣನ ಆರ್ಭಟ; ಕರಾವಳಿ, ಮಲೆನಾಡಿನಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ

ಪಂಪ್ವೆಲ್ ಅಂಡರ್​ ಪಾಸ್​​​ ಸಖತ್​​ ಮೀಮ್ಸ್​​

ನೆನ್ನೆ (ಜುಲೈ 30) ಸುರಿದ ಭಾರೀ ಮಳೆಗೆ ಪಂಪ್ವೆಲ್ ಅಂಡರ್​ ಪಾಸ್​​ನಲ್ಲಿ ನೀರು ತುಂಬಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದಾರೆ. ಇನ್ಸ್ಟಾಗ್ರಾಮ್​​ನಲ್ಲಿ ಕಂಬಳದ ಹಾಡನ್ನು ಬಳಸಿ ಮೀಮ್ಸ್​ ಮಾಡಿದ್ದಾರೆ. ಇಲ್ಲಿದೆ ನೋಡಿ

ಇನ್ನೊಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದು ನಮ್ಮ ಪಂಪ್ವೆಲ್​​ನ ಸದ್ಯದ ಪರಿಸ್ಥಿತಿ ಎಂದು ವೀಡಿಯೊ ಹಾಕಿ ಬರೆದುಕೊಂಡಿದ್ದಾರೆ.

ಇನ್ನೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ, ಇದು ಇತಿಹಾಸ ಪ್ರಸಿದ್ಧಿ ನಮ್ಮ ನಳಿನ್ ಅಣ್ಣನ ಬಹುದಿನದ ಕನಸು, ಪಂಪ್ವೆಲ್ ಉಚಿತ ಬೋಟಿಂಗ್ ವ್ಯವಸ್ಥೆ, ವಿ ಸೂ: ವಾಹನ ನಿಮ್ಮದೇ ಎಂದು ಟ್ರೋಲ್​​ ಮಾಡಿದ್ದಾರೆ.

ಫೇಸ್​​ಬುಕ್​​ನಲ್ಲೂ ಪಂಪ್ವೆಲ್​ ಟ್ರೋಲ್​​ ಆಗಿದ್ದು, ಇಲ್ಲಿ ಅನೇಕರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, WTN ಮೀಡಿಯಾ ಎಂಬ ಪೇಜ್​​ನಲ್ಲಿ ಪಂಪ್ವೆಲ್ ಅಂಡರ್​ ಪಾಸ್​​ನಲ್ಲಿ ತುಂಬಿಕೊಂಡಿರುವ ನೀರಿನಲ್ಲಿ ​​ಈಜುತ್ತಿರುವುದನ್ನು ನೋಡಬಹುದು, ಇದನ್ನೂ ವೀಡಿಯೊ ಮಾಡಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಇದು ಮಂಗಳೂರಿನ ಹೊಸ ಈಜುಕೊಳ ಎಂದು ಬರೆದುಕೊಂಡಿದ್ದಾರೆ.

ಒಬ್ಬ ಆಟೋ ಚಾಲಕ ತನ್ನ ರಿಕ್ಷಾವನ್ನು ನಿಲ್ಲಿಸಿ ಡ್ಯಾನ್ಸ್​​ ಮಾಡುವುದು ಕೂಡ ವೈರಲ್​​ ಆಗಿದೆ, ಒಟ್ಟಿನಲ್ಲಿ ಪಂಪ್ವೆಲ್ ಅಂಡರ್​ ಪಾಸ್​​ ಈಗ​​ ಹ್ಯಾಸಕ್ಕೆ ಕಾರಣವಾಗಿದೆ, ಇದು ಮಂಗಳೂರಿನ ಜನರಿಗೆ ಬೇಸರ ತಂದಿದೆ, ಇಂತಹ ಅವೈಜ್ಞಾನಿಕ ಕೆಲಸದಿಂದ ಜನರು ಕಷ್ಟ ಅನುಭವಿಸುವ ಸ್ಥಿತಿ ಬಂದಿದೆ ಎಂದು ಹೇಳಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:47 pm, Tue, 4 July 23

ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ