AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ತುಂಬಾ ಸಂಬಳವಿದ್ರು ಈ ಉದ್ಯೋಗಿಗೆ ಜಾಬ್ ನಲ್ಲಿ ತೃಪ್ತಿಯೇ ಇಲ್ವಂತೆ, ಅಸಲಿ ಕಾರಣ ಇಲ್ಲಿದೆ ನೋಡಿ

ಈಗಿನ ಕಾಲದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ ಸಿಕ್ಕರೆ ಸಾಕು ಎನ್ನುವವರೇ ಹೆಚ್ಚು. ಆದರೆ ಕೆಲವರು ಕೆಲಸದ ಒತ್ತಡದಿಂದ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸವನ್ನು ತ್ಯಜಿಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಈ ವ್ಯಕ್ತಿಯೂ ತಿಂಗಳಿಗೆ ಲಕ್ಷ ಸಂಬಳ ಗಳಿಸುತ್ತಾನೆ. ಆದರೆ ಕೆಲಸಮಾಡುವುದು ತಿಂಗಳಿಗೆ ಒಂದು ವಾರ ಮಾತ್ರವಂತೆ. ಆದರೆ ಹೆಚ್ಚುವರಿ ಕೆಲಸವಿಲ್ಲದೆ ಹಾಗೂ ತುಂಬಾನೇ ಬಿಡುವು ಇರುವ ಕಾರಣ ಈತನು ಬೇಸರ ಹೊಂದಿದ್ದಾನಂತೆ. ಈ ಬಗ್ಗೆ ಪೋಸ್ಟ್ ಮಾಡಿದ್ದು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೈ ತುಂಬಾ ಸಂಬಳವಿದ್ರು ಈ ಉದ್ಯೋಗಿಗೆ ಜಾಬ್ ನಲ್ಲಿ ತೃಪ್ತಿಯೇ ಇಲ್ವಂತೆ, ಅಸಲಿ ಕಾರಣ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: May 11, 2025 | 5:53 PM

Share

ಕೆಲಸ (job) ದ ಸ್ಥಳದಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಕಷ್ಟ ಒಂದೆರಡಲ್ಲ. ಆದರೆ ಅನಿವಾರ್ಯ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಎಷ್ಟೇ ಒತ್ತಡಭರಿತ ವಾತಾವರಣವಿರಲಿ, ಅನಿವಾರ್ಯಕ್ಕೆ ಕಟ್ಟು ಬಿದ್ದು ಕೆಲಸ ಮಾಡುತ್ತಾರೆ..ಆದರೆ ಈ ಉದ್ಯೋಗಿ (employee)ಕೈ ತುಂಬಾ ಲಕ್ಷ ಲಕ್ಷ ಸಂಪಾದನೆ ಮಾಡಿದರೂ ಕೂಡ ಕೆಲಸ ಕಡಿಮೆಯಿರುವುದೇ ಬೇಸರವಂತೆ. ಈ ಉದ್ಯೋಗಿಯ ಪೋಸ್ಟ್ ವೊಂದು ವೈರಲ್ (viral) ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಗಿದೆ.

agreeable Bat 9722 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಲಕ್ಷ ಲಕ್ಷ ಸಂಬಳ ಗಳಿಸುವ ಉದ್ಯೋಗಿಗೆ ಕೆಲಸದ ಮೇಲೆ ಅಸಮಾಧಾನವಂತೆ. ಈ ಪೋಸ್ಟ್ ನಲ್ಲಿ, ನಾನು ಪ್ರತಿವರ್ಷ 68 ಲಕ್ಷ ರೂಗಳನ್ನು ಗಳಿಸುತ್ತೇನೆ. ಪ್ರತಿ ತಿಂಗಳು ಕೇವಲ ಒಂದು ವಾರ ಮಾತ್ರ ಕೆಲಸ ಮಾಡುತ್ತೇನೆ. ಇನ್ನು ಉಳಿದ ಸಮಯದಲ್ಲಿ, ಅವನು ಟಿವಿ ಕಾರ್ಯಕ್ರಮಗಳನ್ನು ನೋಡುವುದು, ಡ್ರೈವಿಂಗ್ ಮಾಡುವುದು ಅಥವಾ ಪಾಡ್‌ಕಾಸ್ಟ್‌ಗಳನ್ನು ಕೇಳುವುದರಲ್ಲಿಯೇ ಸಮಯ ಕಳೆಯುತ್ತೇನೆ.

ಇದನ್ನೂ ಓದಿ :Brain Teaser : ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್, ಈ ಪ್ರಶ್ನೆಯಲ್ಲೇ ಅಡಗಿದೆ ವೃದ್ಧನ ಹೆಸರು, ಈ ವ್ಯಕ್ತಿಯ ಹೆಸರು ಏನೆಂದು ಹೇಳಬಲ್ಲಿರಾ?

ಇದನ್ನೂ ಓದಿ
Image
ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಇಲ್ಲಿದೆ
Image
ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಿರಿಯಾನಿಗೆ ಈ ಹೆಸರು ಬಂದದ್ದು ಹೇಗೆ?
Image
ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ
Image
ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು

ಆದರೆ ನಾನು ಈ ಕೆಲಸಕ್ಕೆ ಸೇರಿದಾಗ ಈ ಕ್ಷೇತ್ರದಲ್ಲಿ ಯಾವುದೇ ಪದವಿ ಅಥವಾ ವಿಶೇಷ ಶಿಕ್ಷಣವನ್ನು ಪಡೆದಿರಲಿಲ್ಲ. ಆದರೆ ಪ್ರಾರಂಭದಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದ್ದು ಆದರೆ ಇದೀಗ ಎಲ್ಲಾ ಕೆಲಸವನ್ನು ಸುಲಭವಾಗಿಯೇ ಮಾಡಿ ಮುಗಿಸುತ್ತೇನೆ. ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆಯಿದ್ದರೂ ಯಾವುದೇ ಸಮಾಧಾನವಿಲ್ಲ. ಅಂದಹಾಗೆ ನನಗೆ ನಾನು ಕೆಲಸ ಮಾಡುತ್ತಿರುವ ಕಂಪೆನಿಯ ಬಗ್ಗೆ ಯಾವುದೇ ದೂರುಗಳಿಲ್ಲ. ತಾನು ಅತ್ಯುತ್ತಮ ಕೆಲಸ ಗಾರ ಹಾಗೂ ತನ್ನ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕೂಡ ಹೊಂದಿದ್ದೇನೆ.ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತೇನೆ. ಅದಲ್ಲದೇ ಬಿಡುವಿನ ಸಮಯದಲ್ಲಿ ಸಾಕಷ್ಟು ಅಧ್ಯಯನ ನಡೆಸುತ್ತಿದ್ದು, ವರ್ಷಕ್ಕೆ ಸರಿಸುಮಾರು 200 ಓದುತ್ತೇನೆ. ಆದರೆ ನನಗೆ ಬೇಸರವೊಂದು ಕಾಡುತ್ತಿದೆ. ಎಲ್ಲವನ್ನು ಸರಿಯಾಗಿ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದೆ. ನಾನು ಹೆಚ್ಚು ಸಾಧಿಸಿದ್ದೇನೆ, ಆದರೂ ನನಗೆ ಈ ಕೆಲಸದ ಬಗ್ಗೆ ಬೇಸರವಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

I work one week a month and no one has noticed, while on a high salary. byu/Agreeable_Bat9722 inconfession

ಈ ಪೋಸ್ಟ್ ವೊಂದು ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು, ‘ನನಗೆ ಇಂತಹ ಕೆಲಸ ಸಿಕ್ಕಿದರೆ ನನ್ನ ಜೀವನದ ಎಲ್ಲಾ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ. ಇನ್ನೊಬ್ಬರು, ‘ನಾನು ಕೂಡ ತಿಂಗಳಿಗೆ 85 ಸಾವಿರ ಗಳಿಸುತ್ತೇವೆ. ನನಗೆ ವಾರಕ್ಕೆ 32 ರಿಂದ 36 ಗಂಟೆಗಳು ಇದ್ದರೂ ಕೂಡ ವಾರಕ್ಕೆ ಸರಿಯಾಗಿ 4-8 ಗಂಟೆಗಳ ಕಾಲ ಕೆಲಸವಷ್ಟೇ ಮಾಡುತ್ತೇನೆ, ಈ ಬಗ್ಗೆ ನನಗೂ ಕೂಡ ಬೇಸರವಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ನನಗೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೆಲಸವೇ ಸಿಗುತ್ತಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್