AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೈಜೀರಿಯನ್​ ಯುವತಿ ಭಾರತೀಯ ವಧುವಿನಂತೆ ಕಂಗೊಳಿಸಿದಾಗ

Make up : ‘ಆಫ್ರಿಕನ್ ಹುಡುಗಿಯನ್ನು ಭಾರತೀಯ ವಧುವಿನ ಝಲಕಿನಲ್ಲಿ ಅಲಂಕರಿಸಿ ನೋಡುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಆಫ್ರಿಕನ್ ಮಾಡೆಲ್ ಹುಡುಕುತ್ತಿದ್ದೆ. ಆದರೆ ನನಗೆ ನಿಜವಾದ ವಧುವೇ ಸಿಕ್ಕಳು.’ ಮೇಕಪ್​ ವಿಡಿಯೋ ನೋಡಿ.

Viral Video: ನೈಜೀರಿಯನ್​ ಯುವತಿ ಭಾರತೀಯ ವಧುವಿನಂತೆ ಕಂಗೊಳಿಸಿದಾಗ
ಮೇಕಪ್​ನ ಮೊದಲು ಮೇಕಪ್​ನ ನಂತರ
TV9 Web
| Edited By: |

Updated on: Aug 12, 2022 | 2:53 PM

Share

Bridal Make up : ಮೇಕಪ್ ಕಲಾವಿದೆ ನೇಹಾ ವಾರೈಚ್ ಗ್ರೋವರ್ ನೈಜೀರಿಯಾದ ವಧುವಿಗೆ ಭಾರತೀಯ ವಧುವಿನಂತೆ ಅಲಂಕರಿಸಿರುವ ವಿಡಿಯೋ ಅನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದೆ. ಭಾರತೀಯ ವಿವಾಹ ಪದ್ಧತಿಯನ್ನು ವಿದೇಶಿಯರು ಮೆಚ್ಚಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು ಅನೇಕ ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಇಂಟರ್​ನೆಟ್​ನ ಕಾಲದಲ್ಲಿ ಇದು ಇನ್ನಷ್ಟು ವ್ಯಾಪಕವಾಗಿ ಮತ್ತು ವೇಗದಲ್ಲಿ ವ್ಯಕ್ತಗೊಳ್ಳುತ್ತಿದೆ. ಅದರಲ್ಲೂ ವಿದೇಶಿ ವಧು ಅಥವಾ ವರ ಇಲ್ಲಿಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ವಿನ್ಯಾಸಕ್ಕಾಗಿ, ವೈಭವಕ್ಕಾಗಿ ಬಹಳ ಆಕರ್ಷಿತರಾಗುತ್ತಾರೆ.

ಈ ವಿಡಿಯೋ ನೋಡಿ…

ಇನ್ನು ಕಲಾವಿದರಿಗೆ ಪ್ರಯೋಗಗಳ ವಿಷಯವಾಗಿ ಅವರದೇ ಆದ ಕನಸುಗಳಿರುತ್ತವೆ. ಅಂತೆಯೇ ನೇಹಾ, ‘ಆಫ್ರಿಕನ್ ಹುಡುಗಿಯನ್ನು ಭಾರತೀಯ ವಧುವಿನ ಝಲಕಿನಲ್ಲಿ ನೋಡುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಆಫ್ರಿಕನ್ ಮಾಡೆಲ್ ಹುಡುಕುತ್ತಿದ್ದೆ. ಆದರೆ ನನಗೆ ನಿಜವಾದ ವಧುವೇ ಸಿಕ್ಕಳು. ಅವಳ ಮದುವೆಯ ದಿನ ಅವಳನ್ನು ಗೊಂಬೆಯಂತೆ ಸಿಂಗರಿಸಲು ನನಗೆ ಅವಕಾಶ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸುವೆ.’ ಎಂದು ಪೋಸ್ಟ್​ನಲ್ಲಿ ಒಕ್ಕಣೆ ಬರೆದುಕೊಂಡಿದ್ದಾರೆ.

ಈ ವಿಡಿಯೋ ಐದು ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. ನೆಟ್ಟಿಗರು ಮೇಕಪ್​ನ ಚಾತುರ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ