AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲಿನ ಸಿಂಕ್​ನಲ್ಲಿ ಸಿಲುಕಿದ್ದ ಕಸವನ್ನು ಕೈಯಿಂದ ತೆಗೆದ ಪ್ರಯಾಣಿಕನಿಗೆ ಭಾರಿ ಮೆಚ್ಚುಗೆ

ಯುವಕನೊಬ್ಬ ರೈಲಿನ ವಾಶ್ ಬೇಸಿನ್​ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ಕೈನಲ್ಲಿ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಹಲವು ಬಾರಿ ರೈಲಿನ ವಾಶ್​ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್​ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್​ನಲ್ಲಿ ಪ್ಲಾಸ್ಟಿಕ್​ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.

Viral Video: ರೈಲಿನ ಸಿಂಕ್​ನಲ್ಲಿ ಸಿಲುಕಿದ್ದ ಕಸವನ್ನು ಕೈಯಿಂದ ತೆಗೆದ ಪ್ರಯಾಣಿಕನಿಗೆ ಭಾರಿ ಮೆಚ್ಚುಗೆ
ಸಿಂಕ್
ನಯನಾ ರಾಜೀವ್
|

Updated on: Jan 09, 2026 | 7:56 AM

Share

ನವದೆಹಲಿ, ಜನವರಿ 09: ಭಾರತೀಯ ರೈಲ್ವೆ(Indian Railways) ನಿಮ್ಮ ಆಸ್ತಿ, ಅದನ್ನು ಹಾನಿ ಮಾಡಬೇಡಿ, ಸ್ವಚ್ಛವಾಗಿಡಲು ಸಹಾಯ ಮಾಡಿ ಎನ್ನುವ ಸಾಲುಗಳನ್ನು ನೀವು ರೈಲಿನಲ್ಲಿ ಪ್ರಯಾಣಿಸಿದ್ದರೆ ನೋಡಿಯೇ ಇರುತ್ತೀರಿ. ಆದರೆ ಹೆಚ್ಚಿನ ಮಂದಿ ರೈಲಿನ ಸ್ವಚ್ಛತೆ ಬಗ್ಗೆ ಗಮನಕೊಡುವುದಿಲ್ಲ. ಇವತ್ತು ಹತ್ತಿ ನಾಳೆ ಬೆಳಗ್ಗೆ ಇಳಿದು ಹೋಗ್ತೀವಿ ನಾವ್ಯಾಕೆ ರೈಲನ್ನು ಸ್ವಚ್ಛವಾಗಿಡಬೇಕು ಎನ್ನುವ ಮನಸ್ಥಿತಿ ಹಲವು ಮಂದಿಗಿರುತ್ತದೆ. ಆದರೆ ಈ ಯುವಕನ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆ ಸಿಕ್ಕಿದೆ.

ಹಲವು ಬಾರಿ ರೈಲಿನ ವಾಶ್​ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್​ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್​ನಲ್ಲಿ ಪ್ಲಾಸ್ಟಿಕ್​ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.

ಮತ್ತಷ್ಟು ಓದಿ: ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ; ವಿಡಿಯೋ ವೈರಲ್

ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸುಂದರವಾದ ವೀಡಿಯೊವನ್ನು @MDAltamashraza ಎಂಬ ಐಡಿಯಿಂದ ಹಂಚಿಕೊಳ್ಳಲಾಗಿದೆ. 33 ಸೆಕೆಂಡುಗಳ ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ವಿಡಿಯೋ

ಭಾರತೀಯರೇ ಭಾರತವನ್ನು ಕೊಳಕು ಮಾಡುತ್ತಾರೆ ಮತ್ತು ನಂತರ ಸರ್ಕಾರಿ ವ್ಯವಸ್ಥೆ ಕೆಟ್ಟದಾಗಿದೆ ಎಂದು ದೂರುತ್ತಾರೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳದ ಹೊರತು ಸ್ವಚ್ಛತೆ ಆಗುವುದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ