AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಯುವರಾಜ್​ ಸಿಂಗ್​ ಪತ್ನಿ ಹೆಝೆಲ್ ಕೀಚ್​ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ

Cancer Patients : 'ಕತ್ತರಿಸಿದ ಕೂದಲು ವ್ಯರ್ಥವಾಗದೇ ಕ್ಯಾನ್ಸರ್ ರೋಗಿಗಳಿಗೆ ವಿಗ್​ ತಯಾರಿಸಲು ಸಹಾಯವಾಗಲಿ ಎಂದು ದಾನ ಮಾಡಿದೆ. ಇದು ಪೇಡ್​ ಪ್ರೊಮೋಷನ್​ ಅಲ್ಲ, ಈ ಚಾರಿಟಿಗೂ ನನಗೂ ಸಂಬಂಧವಿಲ್ಲ. ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಬೇಕೆಂದು ಗೂಗಲ್​ ಸರ್ಚ್​ಗೆ ಕೇಳಿದೆ. ಅದು ತೋರಿದ ಹಾದಿಯಲ್ಲಿ ನಡೆದೆ' ಎಂದಿದ್ದಾರೆ ಯುವರಾಜ್​ ಸಿಂಗ್​ ಪತ್ನಿ ಹೆಝೆಲ್​ ಕೀಚ್​.

Viral: ಯುವರಾಜ್​ ಸಿಂಗ್​ ಪತ್ನಿ ಹೆಝೆಲ್ ಕೀಚ್​ ಕೂದಲು ದಾನ ಮಾಡಿದ್ದು ಈ ಕಾರಣಕ್ಕೆ
1. ಎರಡನೇ ಮಗಳು ಔರಾಳೊಂದಿಗೆ ಯುವರಾಜ್​ ಸಿಂಗ್. 2. ಹೆಝೆಲ್​ ಕೀಚ್​ ಸಿಂಗ್​ ಕ್ಯಾನ್ಸರ್​ ರೋಗಿಗಳಿಗಾಗಿ ಕೂದಲು ದಾನ ಮಾಡಿರುವುದು.
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Oct 16, 2023 | 4:08 PM

Share

Donate Hair: ಕ್ರಿಕೆಟಿಗ ಯುವರಾಜ್​ ಸಿಂಗ್​ ಪತ್ನಿ (Yuvraj Singh) ಹೆಝೆಲ್​ ಕೀಚ್​ ಸಿಂಗ್ (Hazel Keech) ಎರಡನೇ​ ಪ್ರಸವಾನಂತರ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗುವಾಗ ರೋಗಿಗಳು ಕೂದಲು ಕಳೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ವಿಗ್​ ಧರಿಸುವುದು ಅನಿವಾರ್ಯವಾಗುತ್ತದೆ. ಈ ವಿಗ್​ ತಯಾರಿಸಲು ಸಹಾಯವಾಗಲೆಂದು ಹೆಝೆಲ್​ ಈ ನಿರ್ಧಾರ ತೆಗೆದುಕೊಂಡರು. 2022ರಲ್ಲಿ ಯುವರಾಜ್​ ಮತ್ತು ಹೆಝೆಲ್​ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಈ ಆಗಸ್ಟ್​ನಲ್ಲಿ ಎರಡನೇ ಮಗು ಔರಾ ಅವರ ಮಡಿಲನ್ನು ತುಂಬಿದ್ದಾಳೆ.

ಇದನ್ನೂ ಓದಿ : Viral​; ಸೆಕೆಂಡಿನಲ್ಲಿ ನಿಮ್ಮ ವಯಸ್ಸನ್ನು ತಿಳಿದುಕೊಳ್ಳಬೇಕೆ, ಈ ಚಾರ್ಟ್​ ನೋಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪ್ರಸವಾನಂತರ ಕೂದಲು ಉದುರುವಿಕೆ ಅತ್ಯಂತ ಸಹಜ. ಅದನ್ನು ಚಿಕಿತ್ಸೆಯ ಮೂಲಕ ನಿಭಾಯಿಸುವುದರ ಬದಲಾಗಿ ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಲು ಹೆಝೆಲ್​ ನಿರ್ಧರಿಸಿದರು. ತಮ್ಮ ಈ ನಿರ್ಧಾರವು ಒಳ್ಳೆಯ ಕಾರ್ಯಕ್ಕೆ ಸದುಪಯೋಗವಾಗಲಿ ಎಂದು ಕ್ಯಾನ್ಸರ್​ ರೋಗಿಗಳ ವಿಗ್​ ತಯಾರಿಕೆಗೆ ಕೂದಲನ್ನು ದಾನ ಮಾಡಿದರು.

ಕ್ಯಾನ್ಸರ್​ ರೋಗಿಗಳಿಗೆ ಕೂದಲು ದಾನ ಮಾಡಿದ ಹೆಝೆಲ್​

‘ಮಗು ಹುಟ್ಟಿದ ಮೇಲೆ ಅನೇಕ ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸುತ್ತಾರೆ ಎನ್ನುವುದು ಈ ಮೊದಲು ನನಗೆ ಅರ್ಥವಾಗಿರಲಿಲ್ಲ. ಪ್ರಸವಾನಂತರ ನನಗಿದು ಅರ್ಥವಾಯಿತು. ಬಾತ್ರೂಮಿಗೆ ಹೋಗಲು ಬಿಡದೆ ಸತತ ಅಳುತ್ತಲೇ ಇರುವ ಮುದ್ದು ಕೂಸನ್ನು ಸಂಭಾಳಿಸುವಾಗ ಉದುರುವ ಕೂದಲಿನ ಕಡೆ ಗಮನ ಕೊಡಲು ಸಾಧ್ಯವಾಗುವುದೆ? ಹಾಗಾಗಿ ಮತ್ತೊಮ್ಮೆ ಕೂದಲನ್ನು ಕತ್ತರಿಸಿಕೊಳ್ಳಬೇಕೆಂದು ನಿರ್ಧರಿಸಿದೆ ಮತ್ತು ಕ್ಯಾನ್ಸರ್​ ರೋಗಿಗಳಿಗೆ ದಾನವನ್ನೂ ಮಾಡಿದೆ’ ಎಂದಿದ್ದಾರೆ ಹೆಝೆಲ್​.

ಟಿವಿ9 ಕನ್ನಡ ಡಿಜಿಟಲ್​ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಲು ಕ್ಲಿಕ್ ಮಾಡಿ

ಲಂಡನ್​ನಲ್ಲಿ ವಾಸವಾಗಿರುವ ಹೆಝೆಲ್​, ‘ನನ್ನ ಕೂದಲನ್ನು ಸ್ವೀಕರಿಸಿದ್ದಕ್ಕೆ @officiallittleprincesstrust ಗೆ ಧನ್ಯವಾದ. ದಯವಿಟ್ಟು ಗಮನಿಸಿ, ಇದು ಯಾವುದೇ ರೀತಿಯ ಪೇಡ್​ ಪ್ರೊಮೋಷನ್​ ಅಲ್ಲ. ನನಗೂ ಈ ಚಾರಿಟಿಗೂ ಸಂಬಂಧವಿಲ್ಲ, ಪರಿಚಯವೂ ಇಲ್ಲ. ನಾನು ಕೂದಲನ್ನು ದಾನ ಮಾಡಲು hair donation for wig ಎಂದು ಗೂಗಲ್​ನಲ್ಲಿ ಸರ್ಚ್​ ಕೊಟ್ಟಾಗ ಈ ಚಾರಿಟಿ ಸಿಕ್ಕಿತು’ ಎಂದಿದ್ದಾರೆ

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:04 pm, Mon, 16 October 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!