AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಒಂದೇ ಮಂಟಪದಲ್ಲಿ ಮೂವರಿಗೆ ತಾಳಿ ಕಟ್ಟಿದ ವ್ಯಕ್ತಿ; ಅಪ್ಪ-ಅಮ್ಮಂದಿರ ಮದುವೆ ಕಣ್ತುಂಬಿಕೊಂಡ 6 ಮಕ್ಕಳು!

ಒಂದೇ ಮನೆಯಲ್ಲಿ ಮೂವರು ಮಹಿಳೆಯರೊಂದಿಗೆ ವಾಸವಾಗಿದ್ದ ಮೌರ್ಯ ಅವರಿಗೆ 6 ಮಕ್ಕಳೂ ಜನಿಸಿದ್ದರು. ಇದೀಗ ಮಕ್ಕಳ ಸಮ್ಮುಖದಲ್ಲಿ ಬುಡಕಟ್ಟು ಸಂಪ್ರದಾಯದಂತೆ ಒಂದೇ ಮಂಟಪದಲ್ಲಿ ಅವರು ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ.

Viral News: ಒಂದೇ ಮಂಟಪದಲ್ಲಿ ಮೂವರಿಗೆ ತಾಳಿ ಕಟ್ಟಿದ ವ್ಯಕ್ತಿ; ಅಪ್ಪ-ಅಮ್ಮಂದಿರ ಮದುವೆ ಕಣ್ತುಂಬಿಕೊಂಡ 6 ಮಕ್ಕಳು!
ಬುಡಕಟ್ಟು ಸಂಪ್ರದಾಯದಂತೆ ಮೂವರನ್ನು ಮದುವೆಯಾದ ವ್ಯಕ್ತಿ
TV9 Web
| Edited By: |

Updated on: May 03, 2022 | 4:31 PM

Share

ಇಂದೋರ್: ಕೆಲವೊಂದು ಜನಾಂಗದ ಸಂಪ್ರದಾಯಗಳು ವಿಚಿತ್ರವಾಗಿರುತ್ತವೆ. ಈ ಸಂಪ್ರದಾಯಗಳನ್ನು ಆಚರಿಸುವಾಗ ಸಂಪ್ರದಾಯವನ್ನು ಪಾಲಿಸಬೇಕಾ? ಅಥವಾ ಕಾನೂನನ್ನು ಪಾಲಿಸಬೇಕಾ? ಎಂಬ ಚರ್ಚೆ, ವಿವಾದಗಳು ಏಳುವುದು ಸಾಮಾನ್ಯ. ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಬುಡಕಟ್ಟು ಸಂಪ್ರದಾಯಗಳ (Tribal Culture) ಪ್ರಕಾರ ಒಂದೇ ಸಮಾರಂಭದಲ್ಲಿ ತನ್ನ ಮೂವರು ಲಿವ್-ಇನ್ ಪಾರ್ಟನರ್​ಗಳನ್ನು ವಿವಾಹವಾಗಿದ್ದಾರೆ.

ಈ ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದ ಆ ವ್ಯಕ್ತಿ ಆರು ಮಕ್ಕಳಿಗೆ ತಂದೆಯಾಗಿದ್ದರು. ತಮ್ಮ ತಂದೆ-ತಾಯಿಯ ಮದುವೆಯಲ್ಲಿ ಆ 6 ಮಂದಿ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೋರಿ ಫಾಲಿಯಾ ಗ್ರಾಮದಲ್ಲಿ ನಡೆದ ಈ ಸಮಾರಂಭದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್‌ಗಳು ಹಂಚಿಕೊಳ್ಳುವ ಮೂಲಕ ಈ ಮದುವೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. (Source)

ಭೋಪಾಲ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ನಾನ್‌ಪುರ್ ಗ್ರಾಮದ ಮಾಜಿ ಸರಪಂಚ್ ಮೌರ್ಯ ಅವರು 2003ರಲ್ಲಿ ತಮ್ಮ ಮೊದಲ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಇತರ ಇಬ್ಬರು ಪಾರ್ಟನರ್​ಗಳು ಸಹ ಕಳೆದ 15 ವರ್ಷಗಳಿಂದ ಅವರೊಂದಿಗೆ ವಾಸಿಸುತ್ತಿದ್ದರು. ಒಂದೇ ಮನೆಯಲ್ಲಿ ಮೂವರು ಮಹಿಳೆಯರೊಂದಿಗೆ ವಾಸವಾಗಿದ್ದ ಮೌರ್ಯ ಅವರಿಗೆ 6 ಮಕ್ಕಳೂ ಜನಿಸಿದ್ದರು.

ಮೌರ್ಯ ಅವರು ನಾಣಬಾಯಿ, ಮೇಳ ಮತ್ತು ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ವಿವಾಹವಾದರು. ಬುಡಕಟ್ಟು ಪದ್ಧತಿಯಂತೆ ಮೂರು ದಿನಗಳ ಕಾಲ ಬುಡಕಟ್ಟು ಜನಾಂಗದವರ ಡೋಲು ಬಾರಿಸುವುದು ಸೇರಿದಂತೆ ಮದುವೆ ವಿಜೃಂಭಣೆಯಿಂದ ನಡೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ