AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ವಾರಪೂರ್ತಿ ಕಣ್ಣೀರು ಸುರಿಸಿ ಗಿನ್ನಿಸ್​​ ದಾಖಲೆ ಮಾಡಲು ಹೋಗಿ ಕುರುಡನಾದ ಯುವಕ

ಗಿನ್ನಿಸ್​​ ದಾಖಲೆ ಮಾಡಬೇಕು ಎಂಬ ಹುಚ್ಚುತನದಿಂದ ಯುವಕನೊಬ್ಬ ಕುರುಡನಾಗಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

Viral News: ವಾರಪೂರ್ತಿ ಕಣ್ಣೀರು ಸುರಿಸಿ ಗಿನ್ನಿಸ್​​ ದಾಖಲೆ ಮಾಡಲು ಹೋಗಿ ಕುರುಡನಾದ ಯುವಕ
ವೈರಲ್​​ ನ್ಯೂಸ್​​
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 20, 2023 | 1:42 PM

ಈ ಜಗತ್ತಿನಲ್ಲಿ ಜನಪ್ರಿಯತೆಯನ್ನು ಪಡೆಯಬೇಕು ಎಂದು ಈ ಜನ ಏನೆಲ್ಲ ಮಾಡುತ್ತಾರೆ ಎಂಬುದಕ್ಕೆ ಈ ವೈರಲ್​​ ವರದಿ ಸಾಕ್ಷಿ, ಗಿನ್ನಿಸ್​​ ದಾಖಲೆ ಮಾಡಬೇಕು ಎಂಬ ಹುಚ್ಚುತನದಿಂದ ಯುವಕನೊಬ್ಬ ಕುರುಡನಾಗಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ. ನೈಜೀರಿಯಾದ ತೆಂಬು ಎಬೆರೆ ಎಂಬ ಯುವಕ ಏಳು ದಿನಗಳ ಕಾಲ ಕಣ್ಣೀರು ಹಾಕಲು ಪ್ರಯತ್ನ ಮಾಡಿದ್ದಾನೆ, ಇದರಿಂದ ಆತ ಈಗ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

ಬಿಬಿಸಿ ವರದಿ ಪ್ರಕಾರ ಈ ಯುವಕ ವಿಶ್ವ ದಾಖಲೆ ಮಾಡಲು ಇಡೀ ವಾರ ತಡೆರಹಿತವಾಗಿ ಕಣ್ಣೀರು ಸುರಿಸಲು ಪ್ರಯತ್ನಿಸಿದ್ದಾನೆ, ಇದರಿಂದ ಕಣ್ಣಿಗೆ ಒತ್ತಡ ಉಂಟಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ದೃಷ್ಟಿ ಕಳೆದುಕೊಳ್ಳುವ ಮುನ್ನ ಆತನಲ್ಲಿ ಈ ಲಕ್ಷಣಗಳು ಕಂಡು ಬಂದಿದೆ. ಮೊದಲು ತಲೆನೋವು, ಊದಿಕೊಂಡ ಮುಖ ಮತ್ತು ಉಬ್ಬಿದ ಕಣ್ಣು, ತುಂಬಾ ನೋವು ಕೂಡ ಕಾಣಿಸಿಕೊಂಡಿದೆ.

ನಾನು ಮತ್ತೆ ಮೊದಲಿನಂತೆ ಆಗಬೇಕು, ತುಂಬಾ ಒತ್ತಡ ಹಾಕಿಕೊಂಡು ಕಣ್ಣೀರು ಹಾಕಬಾರದಿತ್ತು. ಆದರೆ ಗಿನ್ನಿಸ್​​ ದಾಖಲೆಯನ್ನು ಸಾಧಿಸಿಯೇ ಸಾಧಿಸುವೇ ಎಂದು ಹೇಳಿದ್ದಾನೆ, ಈ ಬಗ್ಗೆ GWR (guinness world record) ಗೆ ಅರ್ಜಿ ಸಲ್ಲಿಸಿದ್ದು, ಇದನ್ನೂ ಸಂಸ್ಥೆ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ನೈಜೀರಿಯದಲ್ಲಿ ಇಂತಹದೇ ಮತ್ತೊಂದು ಘಟನೆ ನಡೆದಿದೆ. ಹಿಲ್ಡಾ ಬಾಸಿ ಎಂಬ ಬಾಣಸಿಗ 100 ಗಂಟೆಗಳ ಕಾಲ ನಿರಂತರವಾಗಿ ಅಡುಗೆ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಆ ದೇಶದ ಉಪಧ್ಯಾಕ್ಷರು, ಸೆಲೆಬ್ರಿಟಿಗಳು ಹುರಿದುಂಬಿಸಿದ್ದರು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಕೂಡ ಆಗಿತ್ತು. ಇಂತಹ ಅನೇಕ ಸಾಹಸಗಳು ನೈಜೀರಿಯದಲ್ಲಿ ನಡೆದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:39 pm, Thu, 20 July 23

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿಲ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿಲ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್