AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ

Father Daughter : ಅಪ್ಪಾ, ನೀವು ನನಗೆ ಸ್ವಲ್ಪ ಹಣ ಕಳಿಸಬೇಕಿತ್ತಲ್ಲ. ಆಗಲಿ ಕಳಿಸುವೆ. ನೀವು ನನಗೆ ಹಣ ಕಳಿಸಿದ ಮೇಲೆ ಸ್ಕ್ರೀನ್ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ? ಸನಾ ಅಶ್ರಫ್​. ಅಲ್ಲ... ಮತ್ತೆ?

Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ
ಡಾ. ಸನಾ ಅಶ್ರಫ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Jul 20, 2023 | 12:41 PM

Share

Doctor : ಮಕ್ಕಳು ಇಷ್ಟಪಟ್ಟ ಕೋರ್ಸ್​ ಕಲಿಯಲು ಅನುವು ಮಾಡಿಕೊಟ್ಟು, ನೌಕರಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತಾದರೆ ಸಾಕು ಎನ್ನುವುದನ್ನೇ ಪ್ರತೀ ತಂದೆತಾಯಿಯೂ ಬಯಸುತ್ತಾರೆ. ಹಾಗಾಗಿ ಮಕ್ಕಳ ಯಶಸ್ಸಿಗಿಂತ (Success) ದೊಡ್ಡ ಖುಷಿ ಬೇರೆ ಏನಿದೆ ಅವರಿಗೆ? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮಗಳೊಬ್ಬಳು ತನ್ನ ತಂದೆಗೆ ಫೋನ್ ಮಾಡುತ್ತಾಳೆ. ಅತ್ತಕಡೆಯಿಂದ ಅಪ್ಪನ ಧ್ವನಿ. ಉಭಯಕುಶಲೋಪರಿಯ ನಂತರ ನನಗೆ ಸ್ವಲ್ಪ ಹಣ ಬೇಕಿತ್ತು ಕಳಿಸುವಿರಾ ಎನ್ನುತ್ತಾಳೆ. ಅಪ್ಪ ಆಗಲಿ ಎನ್ನುತ್ತಾನೆ. ಆದರೆ ನೀವು ಹಣ ಕಳಿಸಿದ ಮೇಲೆ ಸ್ಕ್ರೀನ್​ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ ಎಂದು ಕೇಳುತ್ತಾಳೆ. ಮುಂದಿನದನ್ನು ಈ ವಿಡಿಯೋದಲ್ಲಿ ನೀವೇ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dr.Hare (@dr_hare_021)

ನಾನು ಈಗ ಡಾಕ್ಟರ್​ ಸನಾ ಅಶ್ರಫ್​! ಪರೀಕ್ಷೆಯ ಫಲಿತಾಂಶ ಬಂದಿದೆ ಎಂದು ಮಗಳು ಹೇಳಿದಾಗ ಅತ್ತಕಡೆಯಿದ್ದ ತಂದೆ ಭಾವುಕರಾಗುತ್ತಾರೆ. ‘ನನ್ನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಕ್ಕಾಗಿ ಧನ್ಯವಾದ ಅಪ್ಪಾ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತ ನನ್ನನ್ನು ಯಾವಾಗಲೂ ಎತ್ತಿ ಹಿಡಿಯುತ್ತ ಬಂದಿದ್ದೀರಿ. ನಿಮಗೆ ಅಲ್ಲಾಹ್​ ಒಳ್ಳೆಯದನ್ನು ಮಾಡಲಿ’ ಎಂಬ ನೋಟ್​ ಬರೆದು ಸನಾ ಈ ಪೋಸ್ಟ್ ಮಾಡಿದ್ದಾರೆ.

ಇದನ್ನೂಓದಿ : Viral Video: ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​

ಈ ವಿಡಿಯೋ ಅನ್ನು ಈತನಕ ಎರಡು ಮಿಲಿಯನ್​ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಡಾ. ಸನಾಗೆ ಶುಭ ಹಾರೈಸಿದ್ದಾರೆ. ಒಂದು ಸೆಕೆಂಡ್​ ನಾನು ಮೂಕನಾದೆ, ನಾನೀಗ ಅಳುತ್ತಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಇಂತ ಮಗಳನ್ನು ಪಡೆದ ತಂದೆಗೂ ಅಭಿನಂದನೆ ಎಂದಿದ್ದಾರೆ ಕೆಲವರು. ನೀಟ್​ ಪರೀಕ್ಷೆ ಬರೆದ ನನ್ನ ಕಣ್ಣಲ್ಲಿಯೂ ನೀರು ಇಳಿಯುತ್ತಿದೆ, ಸದ್ಯದಲ್ಲೇ ನನ್ನ ಕನಸನ್ನು ಈಡೇರಿಸಿಕೊಳ್ಳುತ್ತೇನೆ, ಅಲ್ಲಾಹ್ ಜೊತೆಗಿದ್ದಾನೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್