AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ

Father Daughter : ಅಪ್ಪಾ, ನೀವು ನನಗೆ ಸ್ವಲ್ಪ ಹಣ ಕಳಿಸಬೇಕಿತ್ತಲ್ಲ. ಆಗಲಿ ಕಳಿಸುವೆ. ನೀವು ನನಗೆ ಹಣ ಕಳಿಸಿದ ಮೇಲೆ ಸ್ಕ್ರೀನ್ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ? ಸನಾ ಅಶ್ರಫ್​. ಅಲ್ಲ... ಮತ್ತೆ?

Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ
ಡಾ. ಸನಾ ಅಶ್ರಫ್
ಶ್ರೀದೇವಿ ಕಳಸದ
|

Updated on: Jul 20, 2023 | 12:41 PM

Share

Doctor : ಮಕ್ಕಳು ಇಷ್ಟಪಟ್ಟ ಕೋರ್ಸ್​ ಕಲಿಯಲು ಅನುವು ಮಾಡಿಕೊಟ್ಟು, ನೌಕರಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತಾದರೆ ಸಾಕು ಎನ್ನುವುದನ್ನೇ ಪ್ರತೀ ತಂದೆತಾಯಿಯೂ ಬಯಸುತ್ತಾರೆ. ಹಾಗಾಗಿ ಮಕ್ಕಳ ಯಶಸ್ಸಿಗಿಂತ (Success) ದೊಡ್ಡ ಖುಷಿ ಬೇರೆ ಏನಿದೆ ಅವರಿಗೆ? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮಗಳೊಬ್ಬಳು ತನ್ನ ತಂದೆಗೆ ಫೋನ್ ಮಾಡುತ್ತಾಳೆ. ಅತ್ತಕಡೆಯಿಂದ ಅಪ್ಪನ ಧ್ವನಿ. ಉಭಯಕುಶಲೋಪರಿಯ ನಂತರ ನನಗೆ ಸ್ವಲ್ಪ ಹಣ ಬೇಕಿತ್ತು ಕಳಿಸುವಿರಾ ಎನ್ನುತ್ತಾಳೆ. ಅಪ್ಪ ಆಗಲಿ ಎನ್ನುತ್ತಾನೆ. ಆದರೆ ನೀವು ಹಣ ಕಳಿಸಿದ ಮೇಲೆ ಸ್ಕ್ರೀನ್​ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ ಎಂದು ಕೇಳುತ್ತಾಳೆ. ಮುಂದಿನದನ್ನು ಈ ವಿಡಿಯೋದಲ್ಲಿ ನೀವೇ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dr.Hare (@dr_hare_021)

ನಾನು ಈಗ ಡಾಕ್ಟರ್​ ಸನಾ ಅಶ್ರಫ್​! ಪರೀಕ್ಷೆಯ ಫಲಿತಾಂಶ ಬಂದಿದೆ ಎಂದು ಮಗಳು ಹೇಳಿದಾಗ ಅತ್ತಕಡೆಯಿದ್ದ ತಂದೆ ಭಾವುಕರಾಗುತ್ತಾರೆ. ‘ನನ್ನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಕ್ಕಾಗಿ ಧನ್ಯವಾದ ಅಪ್ಪಾ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತ ನನ್ನನ್ನು ಯಾವಾಗಲೂ ಎತ್ತಿ ಹಿಡಿಯುತ್ತ ಬಂದಿದ್ದೀರಿ. ನಿಮಗೆ ಅಲ್ಲಾಹ್​ ಒಳ್ಳೆಯದನ್ನು ಮಾಡಲಿ’ ಎಂಬ ನೋಟ್​ ಬರೆದು ಸನಾ ಈ ಪೋಸ್ಟ್ ಮಾಡಿದ್ದಾರೆ.

ಇದನ್ನೂಓದಿ : Viral Video: ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​

ಈ ವಿಡಿಯೋ ಅನ್ನು ಈತನಕ ಎರಡು ಮಿಲಿಯನ್​ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಡಾ. ಸನಾಗೆ ಶುಭ ಹಾರೈಸಿದ್ದಾರೆ. ಒಂದು ಸೆಕೆಂಡ್​ ನಾನು ಮೂಕನಾದೆ, ನಾನೀಗ ಅಳುತ್ತಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಇಂತ ಮಗಳನ್ನು ಪಡೆದ ತಂದೆಗೂ ಅಭಿನಂದನೆ ಎಂದಿದ್ದಾರೆ ಕೆಲವರು. ನೀಟ್​ ಪರೀಕ್ಷೆ ಬರೆದ ನನ್ನ ಕಣ್ಣಲ್ಲಿಯೂ ನೀರು ಇಳಿಯುತ್ತಿದೆ, ಸದ್ಯದಲ್ಲೇ ನನ್ನ ಕನಸನ್ನು ಈಡೇರಿಸಿಕೊಳ್ಳುತ್ತೇನೆ, ಅಲ್ಲಾಹ್ ಜೊತೆಗಿದ್ದಾನೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ