AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ

ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ.

Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 19, 2023 | 3:09 PM

Share

ಅಣ್ಣ ಎಂಬ ಶಕ್ತಿ ನಮ್ಮ ಜತೆಗೆ ಇದ್ದಾಗ ಯಾವುದೇ ಸಮಸ್ಯೆ ಬಂದರು ಅದನ್ನು ತಡೆಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ, ಹೌದು ಅಮೆರಿಕದ ಮಿಚಿಗನ್​​ನಲ್ಲಿ ಹದಿಹರೆಯದ ಹುಡುಗನೊಬ್ಬ, ತನ್ನ ಪುಟ್ಟ ತಂಗಿಯನ್ನು ಕಿಡ್ನಾಪರ್​​ನಿಂದ ತುಂಬಾ ಚುರುಕುತನದಿಂದ ಕಾಪಾಡಿದ್ದಾನೆ. ಸ್ಕೈ ನ್ಯೂಸ್ ಪ್ರಕಾರ , ಆಲ್ಪೆನಾ ಟೌನ್‌ಶಿಪ್‌ನಲ್ಲಿ ಮೇ 10ರಂದು ಈ ಘಟನೆ ನಡೆದಿದೆ. ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ. ಆತನ 13 ವರ್ಷ ವಯಸ್ಸಿನ ತಂಗಿ ಸ್ನೇಹಿತರೊಂದಿಗೆ ಆಟವಾಡುತ್ತಿರುವಾಗ ಕಿರುಚಾಟ ಕೇಳುತ್ತದೆ, ಏನೋ ಅವರೇ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದುಕೊಂಡ ಅಣ್ಣ, ನಂತರ ಮತ್ತೆ ಜೋರಾಗಿ ಕಿರುಚಾಟ ಕೇಳಿದೆ, ತಕ್ಷಣ ಅಣ್ಣ ಅವಳ ಸಹಾಯಕ್ಕೆ ಧಾವಿಸಿದ್ದಾನೆ.

ಅಣ್ಣ ಓವನ್ ತಿಳಿಸಿರುವಂತೆ ನಾನು ಕಿಟಕಿಯಿಂದ ಹೊರಗೆ ನೋಡಿದಾಗ ಆಕೆಯನ್ನು ಒಬ್ಬ ವ್ಯಕ್ತಿ ಅಪಹರಿಸಿರುವುದನ್ನು ನೋಡಿದೆ, ಇದರಿಂದ ನಾನು ತುಂಬಾ ಭಯಭೀತನಾಗಿ ಏನು ಮಾಡಬೇಕು ಎಂದು ತಿಳಿಯದೆ ಕವಣೆಯಿಂದ ಹೊಡೆದಿದ್ದಾನೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ:Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ನಾನು ಕವಣೆ (ಚಾಟಿ ಬಿಲ್ಲು) ಹಿಡಿದು ಅದಕ್ಕೆ ಜಲ್ಲಿಕಲ್ಲು ಸೇರಿಸಿ ಕಿಟಕಿಯಲ್ಲಿ ಗುರಿಯಿಟ್ಟು ಅವನಿಗೆ ಹೊಡೆದೆ. ಅಣ್ಣ ಓವನ್ ಈ ಕೆಲಸದಿಂದ ಕಿಡ್ನಾಪರ್​​ ಆತ ತಂಗಿಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಿಡ್ನಾಪರ್​​ 17 ವರ್ಷದ ಯುವಕನಾಗಿದ್ದು, ಆತನ ವಿರುದ್ಧ ದೂರ ದಾಖಲಿಸಲಾಗಿದ್ದು, ಓವನ್ ಕವಣೆ (ಚಾಟಿ ಬಿಲ್ಲು) ಯಿಂದ ಹೊಡೆದ ಪರಿಣಾಮ ಆತನ ತಲೆ ಮತ್ತು ಎದೆಗೆ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆ ಕಿಡ್ನಾಪರ್​​ನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್