AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು

Snake : ದಿನವಿಡೀ ಇದೇ ಡ್ರಾಯರಿನೆದುರು ಕುಳಿತು ಬಾರ್​ ಮ್ಯಾನೇಜರ್ ಕೆಲಸ ಮಾಡಿದ್ದಾನೆ. ಅದೊಮ್ಮೆ ಏನೋ ಕಾಗದಪತ್ರಗಳಿಗಾಗಿ ಡ್ರಾಯರ್​ ತೆರೆದಾಗಲಿಟಲ್ ಕಾರ್ಪೆಟ್​ ಹಾವುರಾಯರು ಹೀಗೆ ಪ್ರತ್ಯಕ್ಷರಾಗಿದ್ದಾರೆ!

Viral: ಬಿಯರ್ ಬೇಕಿತ್ತೇನೋ ನಾಗಣ್ಣ; ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು
ಬಾರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಮಲಗಿದ್ದ ಹಾವು
TV9 Web
| Edited By: ಶ್ರೀದೇವಿ ಕಳಸದ|

Updated on:May 19, 2023 | 4:01 PM

Share

Viral: ಬೂಟಿನೊಳಗೆ, ಸಿಲಿಂಡರಿನ ಕೆಳಗೆ, ಮಂಚದ ಮೇಲೆ, ಹಂಡೆಯೊಳಗೆ, ಬಸ್ಸಿನೊಳಗೆ ಹೀಗೆ ಹಾವು ಎಲ್ಲೆಂದರಲ್ಲಿ ಅಡಗಿ ಕುಳಿತ ವಿಡಿಯೋಗಳನ್ನು ನೀವೀಗಾಗಲೇ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಾರೊಂದರ್​ ಮ್ಯಾನೇಜರ್​ನ ಡ್ರಾಯರಿನಲ್ಲಿ ಈ ಲಿಟಲ್ ಕಾರ್ಪೆಟ್​ ಹಾವು ಮಲಗಿದೆ. ಡ್ಯಾಯರ್​ ಓಪನ್ ಮಾಡಿದಾಗ ಮ್ಯಾನೇಜರ್ ಪರಿಸ್ಥಿತಿ ಹೇಗಾಗಿರಬೇಡ? ಇದೀಗ ನೆಟ್ಟಿಗರು ಇದನ್ನು ಪರಿಪರಿಯಾಗಿ ಪ್ರತಿಕ್ರಿಯಿಸಿ ಮಲಗಿರುವ ಹಾವನ್ನು ದೂರದಿಂದಲೇ ಗೋಳು ಹುಯ್ದುಕೊಳ್ಳುತ್ತಿದ್ದಾರೆ!

ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದೆ. ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ 24/7 ಫೇಸ್​ಬುಕ್​ ಪುಟದಲ್ಲಿ ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ದಿನವಿಡೀ ಇದೇ ಡ್ರಾಯರಿನೆದುರು ಕುಳಿತು ಬಾರ್​ ಮ್ಯಾನೇಜರ್ ಕೆಲಸ ಮಾಡಿದ್ದಾನೆ. ಅದೊಮ್ಮೆ ಏನೋ ಕಾಗದಪತ್ರಗಳಿಗಾಗಿ ಡ್ರಾಯರ್​ ತೆರೆದಾಗ ನಾಗರಾಜರು ಹೀಗೆ ಪ್ರತ್ಯಕ್ಷರಾಗಿದ್ದಾರೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ಈಗಾಗಲೇ ಈ ಪೋಸ್ಟ್​ ಅನ್ನು 1,300ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ಈ ಪೋಸ್ಟ್​ ಹಂಚಿಕೊಂಡಿದ್ದು, ಸುಮಾರು 190 ಜನರು ಪ್ರತಿಕ್ರಿಯಿಸಿದ್ದಾರೆ. ತುಂಬಾ ಆರಾಮದಾಯಕವಾಗಿದೆಯಲ್ಲ ನಾಗಣ್ಣ ಈ ಜಾಗ ಎಂದು ಹಲವರು ಕೇಳಿದ್ದಾರೆ. ವೀಕೆಂಡ್​ನಲ್ಲಿ ಬಿಯರ್​ ಕುಡಿಯುವ ಆಸೆಯಾಗಿತ್ತೋ ನಿನಗೆ ಎಂದು ಪ್ರಶ್ನಿಸಿದ್ಧಾರೆ ಕೆಲವರು. ಲೆಕ್ಕಗಿಕ್ಕ ಎಲ್ಲ ಸರಿಯಾಗಿ ಇಟ್ಟಿದ್ದಾನಾ ಮ್ಯಾನೇಜರ್​ ಎಂದು ಒಬ್ಬರು ಕೇಳಿದ್ದಾರೆ. ನೀನು ಆಡಿಟಿಂಗ್​ ಕೆಲಸ ಯಾವಾಗ ಮಾಡಲು ಶುರು ಮಾಡಿದೆ ಎಂದು ಮತ್ತೊಬ್ಬರು ಕೇಳಿದ್ಧಾರೆ.

ಈ ಫೋಟೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:53 pm, Fri, 19 May 23

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್