AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್

Lamb : ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು. 

ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್
ನಿನ್ನಮ್ಮ ಅಲ್ಲಿದ್ದಾಳೆ ನೋಡು ಎನ್ನುತ್ತಿರುವ ಪುಟ್ಟಣ್ಣ
TV9 Web
| Updated By: ಶ್ರೀದೇವಿ ಕಳಸದ|

Updated on: May 16, 2023 | 4:26 PM

Share

Viral Video : ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಸಾಂಗತ್ಯ ಹೇಗೆ ಮುದ ನೀಡುತ್ತದೆಯೋ ಅವುಗಳಿಗೂ ಮಕ್ಕಳೆಂದರೆ ತುಂಬಾ ಇಷ್ಟ. ಬೇಕಿದ್ದರೆ ಗಮನಿಸಿ, ಮಕ್ಕಳೊಂದಿಗೆ ಸಾಕುಪ್ರಾಣಿಗಳು ಎಷ್ಟು ಹುಷಾರಿನಿಂದ ಸೂಕ್ಷ್ಮವಾಗಿ ವರ್ತಿಸುತ್ತವೆ ಎಂದು. ಈಗಾಗಲೇ ನೋಡಿರುವ ಬೆಕ್ಕು, ನಾಯಿ, ಹಸುಗಳ ವಿಡಿಯೋದಲ್ಲಿ ನೋಡಿರುತ್ತೀರಿ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಪುಟ್ಟಣ್ಣನೊಂದಿಗೆ ಒಂದು ಕುರಿಮರಿ ಇದೆ. ಮುಂದೇನಾಗುತ್ತದೆ ನೋಡಿ.

ನೋಡು ನಿನ್ನ ಅಮ್ಮ ಅಲ್ಲಿದ್ದಾಳೆ. ನಿನ್ನನ್ನು ಹುಡುಕುತ್ತಿದ್ದಾಳೆ. ಬಾ ಅಲ್ಲಿಗೆ ಹೋಗೋಣ ಎಂದು ಮರಿಯೊಂದಿಗೆ ಅದರ ಅಮ್ಮನ ಬಳಿ ಕರೆದುಕೊಂಡು ಹೋಗುತ್ತಾನೆ ಈ ಪುಟ್ಟಣ್ಣ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಸಂಪೂರ್ಣ ಗೆದ್ದಿದೆ. ಪುಟ್ಟ ಕುರಿಗಾಯಿ ಕಾರ್ಯಪ್ರವೃತ್ತನಾಗಿದ್ದಾನೆ ಹುಷಾರ್​! ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?

ತನ್ನ ತಾಯಿ ದೂರದಲ್ಲಿ ಬರುತ್ತಿರುವುದನ್ನು ನೋಡಿದ ಕುರಿಮರಿ ಖುಷಿಯಿಂದ ಕುಪ್ಪಳಿಸುತ್ತ ತಾಯಿಯೆಡೆ ಓಡುತ್ತದೆ. ಈ ಪುಟ್ಟಣ್ಣನಿಗೆ ತಾಯಿ ಮಗುವನ್ನು ಒಂದು ಮಾಡಿದ ಖುಷಿ ಮತ್ತು ಸಮಾಧಾನ. ಈ ದೃಶ್ಯವನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ

ಈತನ ಈ ವಿಡಿಯೋ ಅನ್ನು 2.4 ಮಿಲಿಯನ್​ ಜನರು ನೋಡಿದ್ದಾರೆ. ತುಂಬಾ ಕರುಣೆಯಳ್ಳವ ಈ ಪುಟ್ಟ ಎಂದು ಅನೇಕರು ಹೇಳಿದ್ದಾರೆ. ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ,

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!