AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್

Lamb : ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು. 

ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್
ನಿನ್ನಮ್ಮ ಅಲ್ಲಿದ್ದಾಳೆ ನೋಡು ಎನ್ನುತ್ತಿರುವ ಪುಟ್ಟಣ್ಣ
TV9 Web
| Edited By: ಶ್ರೀದೇವಿ ಕಳಸದ|

Updated on: May 16, 2023 | 4:26 PM

Share

Viral Video : ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಸಾಂಗತ್ಯ ಹೇಗೆ ಮುದ ನೀಡುತ್ತದೆಯೋ ಅವುಗಳಿಗೂ ಮಕ್ಕಳೆಂದರೆ ತುಂಬಾ ಇಷ್ಟ. ಬೇಕಿದ್ದರೆ ಗಮನಿಸಿ, ಮಕ್ಕಳೊಂದಿಗೆ ಸಾಕುಪ್ರಾಣಿಗಳು ಎಷ್ಟು ಹುಷಾರಿನಿಂದ ಸೂಕ್ಷ್ಮವಾಗಿ ವರ್ತಿಸುತ್ತವೆ ಎಂದು. ಈಗಾಗಲೇ ನೋಡಿರುವ ಬೆಕ್ಕು, ನಾಯಿ, ಹಸುಗಳ ವಿಡಿಯೋದಲ್ಲಿ ನೋಡಿರುತ್ತೀರಿ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಪುಟ್ಟಣ್ಣನೊಂದಿಗೆ ಒಂದು ಕುರಿಮರಿ ಇದೆ. ಮುಂದೇನಾಗುತ್ತದೆ ನೋಡಿ.

ನೋಡು ನಿನ್ನ ಅಮ್ಮ ಅಲ್ಲಿದ್ದಾಳೆ. ನಿನ್ನನ್ನು ಹುಡುಕುತ್ತಿದ್ದಾಳೆ. ಬಾ ಅಲ್ಲಿಗೆ ಹೋಗೋಣ ಎಂದು ಮರಿಯೊಂದಿಗೆ ಅದರ ಅಮ್ಮನ ಬಳಿ ಕರೆದುಕೊಂಡು ಹೋಗುತ್ತಾನೆ ಈ ಪುಟ್ಟಣ್ಣ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಸಂಪೂರ್ಣ ಗೆದ್ದಿದೆ. ಪುಟ್ಟ ಕುರಿಗಾಯಿ ಕಾರ್ಯಪ್ರವೃತ್ತನಾಗಿದ್ದಾನೆ ಹುಷಾರ್​! ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?

ತನ್ನ ತಾಯಿ ದೂರದಲ್ಲಿ ಬರುತ್ತಿರುವುದನ್ನು ನೋಡಿದ ಕುರಿಮರಿ ಖುಷಿಯಿಂದ ಕುಪ್ಪಳಿಸುತ್ತ ತಾಯಿಯೆಡೆ ಓಡುತ್ತದೆ. ಈ ಪುಟ್ಟಣ್ಣನಿಗೆ ತಾಯಿ ಮಗುವನ್ನು ಒಂದು ಮಾಡಿದ ಖುಷಿ ಮತ್ತು ಸಮಾಧಾನ. ಈ ದೃಶ್ಯವನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ

ಈತನ ಈ ವಿಡಿಯೋ ಅನ್ನು 2.4 ಮಿಲಿಯನ್​ ಜನರು ನೋಡಿದ್ದಾರೆ. ತುಂಬಾ ಕರುಣೆಯಳ್ಳವ ಈ ಪುಟ್ಟ ಎಂದು ಅನೇಕರು ಹೇಳಿದ್ದಾರೆ. ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ,

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?