ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ

Bird Love : ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ಅಂದುಕೊಳ್ಳುವ ಎಲ್ಲರಿಗೂ ‘ಕರುಣೆ’ ಎನ್ನುವುದು ಭರವಸೆಯನ್ನು ನೀಡುತ್ತದೆ. ಮಗು ಮತ್ತು ಮಾಗಿದ ಮನಸಿನಲ್ಲಿ ಮಾತ್ರ ಇದು ಇರಲು ಸಾಧ್ಯ.

ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ
ಪಕ್ಷಿಗಳಿಗೆ ಆಹಾರ ತಿನ್ನಿಸುವ ಬಾಲಕ
Follow us
|

Updated on:Feb 07, 2023 | 4:48 PM

Viral Video : ಜಗತ್ತು ಪ್ರಕ್ಷುಬ್ಧ ಎನ್ನಿಸುವ ಹೊತ್ತಿಗೆ ಹೀಗೆ ಕರುಣೆಯನ್ನೇ ಧ್ಯಾನಿಸಲು ದೇವರು ಅವಕಾಶ ಮಾಡಿಕೊಡುತ್ತಾನೆ. ಭರವಸೆಯನ್ನು ಇಷ್ಟು ಬೇಗ ಕಳೆದುಕೊಂಡರೆ ಹೇಗೆ? ಎಂದು ಹೀಗೆ ಪುಟ್ಟದೇವತೆಗಳೊಳಗೆ ಅವತರಿಸಿ ಕೇಳುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪುಟ್ಟಣ್ಣನೊಬ್ಬ ಪಕ್ಷಿಗಳಿಗೆ ಆಹಾರ ಕೊಡುತ್ತಿದ್ದಾನೆ. ಅವು ಒಂದಾದ ಮೇಲೊಂದು ಪುಟ್ಟ ಬಾಯಿ ತೆಗೆಯುತ್ತ ಮೆಲ್ಲುತ್ತಿವೆ. ಸ್ವೀಕರಿಸುವುದು ಬಹಳ ಸುಲಭ. ಆದರೆ ಕೊಡುವುದು?

ಮಗು ಅಥವಾ ಮಾಗಿದ ಮನಸಿಗೆ ಮಾತ್ರ ಹೀಗಿರಲು ಸಾಧ್ಯ. ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ಅಂದುಕೊಳ್ಳುವ ಎಲ್ಲರಿಗೂ ಕರುಣೆ ಎನ್ನುವುದು ಭರವಸೆಯನ್ನು ನೀಡುತ್ತದೆ ಎಂಬ ಶೀರ್ಷಿಕೆ ಇದಕ್ಕಿದೆ.

ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್​ ಜನರು ನೋಡಿದ್ದಾರೆ. 81,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಪುಟ್ಟ ಕಡ್ಡಿಗಳಿಂದ ಆಹಾರದ ತುಣುಕನ್ನು ಹಕ್ಕಿಗಳ ಬಾಯಿಗೆ ಇಟ್ಟಮೇಲೆ ಆ ಹಕ್ಕಿಗಳು ನಿಂತಲ್ಲೇ ಕುಣಿಯುವುದನ್ನು ಗಮನಿಸಿ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಸೈಬರ್ ಸೇಫ್​ ಟೀ; ಗೂಗಲ್​ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ

ಈ ಮಗು ಅಪಾರ ಕರುಣೆಯನ್ನು ಹೊಂದಿದೆ ಎಂದು ಶ್ಲಾಘಿಸುತ್ತಾರೆ ನೆಟ್ಟಿಗರು. ಹೀಗೆ ಜಗತ್ತಿನ ಪವಿತ್ರ ಸಂಗತಿಗಳನ್ನು ಕಾಪಾಡಲು ಇಂಥ ಜೀವಗಳು ಹೆಚ್ಚಲಿ ಎಂದು ಹಾರೈಸಿದ್ದಾರೆ ಅನೇಕರು. ಇದು ನಿಜವಾದ ಸೌಂದರ್ಯ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:44 pm, Tue, 7 February 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ