AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಸೈಕಲ್ ಮೇಲೆ ಕುರ್ಚಿಯಲ್ಲಿ ಕುಳಿತು ನಾಯಿಯ ಸವಾರಿ; ಮುದ್ದಾದ ಫೋಟೋ ವೈರಲ್

Trending News: ನಾಯಿಯನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಸೈಕಲ್​ನಲ್ಲಿ ನಾಯಿಗೆಂದೇ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕಟ್ಟಿ, ಅದರ ಮೇಲೆ ನಾಯಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದಾರೆ.

Viral Photo: ಸೈಕಲ್ ಮೇಲೆ ಕುರ್ಚಿಯಲ್ಲಿ ಕುಳಿತು ನಾಯಿಯ ಸವಾರಿ; ಮುದ್ದಾದ ಫೋಟೋ ವೈರಲ್
ಸೈಕಲ್ ಮೇಲೆ ಕುಳಿತ ನಾಯಿಯ ಫೋಟೋ ವೈರಲ್
TV9 Web
| Edited By: |

Updated on:Sep 25, 2021 | 8:38 PM

Share

ನಾಯಿಗಳೆಂದರೆ ಇಷ್ಟ ಪಡದವರು ಯಾರು? ನಾಯಿ, ಬೆಕ್ಕುಗಳು ಕ್ರಮೇಣ ಮನೆಯ ಸದಸ್ಯರಂತೆಯೇ ಆಗಿ ಬಿಡುತ್ತವೆ. ನಾಯಿಯನ್ನು ಕಾರಿನಲ್ಲಿ, ಬೈಕಿನಲ್ಲಿ ಕೂರಿಸಿಕೊಂಡು ತಾವು ಹೋದ ಕಡೆಯೆಲ್ಲ ಕರೆದುಕೊಂಡು ಹೋಗುವುದನ್ನು ನೋಡುತ್ತಲೇ ಇರುತ್ತೇವೆ. ಅದೇ ರೀತಿ ನಾಯಿಯನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಸೈಕಲ್​ನಲ್ಲಿ ನಾಯಿಗೆಂದೇ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕಟ್ಟಿ, ಅದರ ಮೇಲೆ ನಾಯಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದಾರೆ. ಈ ಫೋಟೋ ಈಗ ಭಾರೀ ವೈರಲ್ ಆಗಿದೆ.

ನಾಯಿಗಳು ಮನುಷ್ಯರ ಅತ್ಯಂತ ಮೆಚ್ಚಿನ ಸ್ನೇಹಿತರು. ನಾಯಿಗಳು ಒಮ್ಮೆ ಮನುಷ್ಯರನ್ನು ನಂಬಿದರೆ ಅವರನ್ನು ಜೀವಕ್ಕಿಂತ ಹೆಚ್ಚು ಹಚ್ಚಿಕೊಂಡು ಬಿಡುತ್ತವೆ. ನಾಯಿ ಹಾಗೂ ಮನುಷ್ಯರ ನಡುವಿನ ಸಂಬಂಧದ ಫೋಟೋ, ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದೇ ರೀತಿ ಈ ಫೋಟೋ ಕೂಡ ವೈರಲ್ ಆಗಿದೆ.

ದೇಸಿ ಅಂಬಾರಿಯಾದ ಸೈಕಲ್ ಏರಿ ಹೊರಟ ನಾಯಿ ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಂಡಿರುವ ಫೋಟೋ ಇಲ್ಲಿದೆ. ರಸ್ತೆಯಲ್ಲಿ ಹೋಗುತ್ತಿದ್ದವರು ಎದುರಿನ ಸೈಕಲ್​ನಲ್ಲಿ ಕುಳಿತಿದ್ದ ಈ ನಾಯಿಯ ಫೋಟೋವನ್ನು ಕ್ಲಿಕ್ಕಿಸಿ ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ನೀಲಿ ಕುರ್ಚಿಯಲ್ಲಿ ಕುಳಿತು ಸೈಕಲ್​ನಲ್ಲಿ ಹೋಗುತ್ತಿದ್ದ ನಾಯಿ ಫೋಟೋ ತೆಗೆಯುವವರ ಕಡೆ ತಿರುಗಿ ನೋಡುತ್ತಿದೆ.

ಈ ವೈರಲ್ ಫೋಟೋಗೆ 18,000 ಲೈಕ್​ಗಳು ಬಂದಿವೆ. 2,000ಕ್ಕೂ ಹೆಚ್ಚು ಬಾರಿ ಈ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ. ನಾಯಿ ಹಾಗೂ ಮಾಲೀಕನ ಆಪ್ತ ಸಂಬಂಧವನ್ನು ಕಂಡು ನೆಟ್ಟಿಗರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!

Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ

(Man uses desi jugaad to travel with dog on cycle photos go viral on Social Media)

Published On - 8:37 pm, Sat, 25 September 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ