Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್

Tattoo : ಸ್ವಿಗ್ಗಿ ಈ ಫೋಟೋ ಅನ್ನು ಟ್ವೀಟ್ ಮಾಡಿದೆ. ನೆಟ್ಟಿಗರೆಲ್ಲ ನಾನು ವಡಾ ಪಾವ್​, ನಾನು ಜಾಮೂನ್​, ನಾನು ಚಹಾ, ನಾನು ಆಲೂ ದಮ್ ಹೀಗೆ ತಮ್ಮಿಷ್ಟದ ತಿಂಡಿತೀರ್ಥಗಳ ಟ್ಯಾಟೂ ಹಾಕಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ನೀವು?

ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್
ರಾಜ್ಮಾ ಚಾವಲ್ ಎಂದು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on:Feb 06, 2023 | 5:09 PM

Viral Video : ಮೊದಲು ಹಣೆ, ಕೈಮೇಲಷ್ಟೇ ನಿರ್ದಿಷ್ಟ ವಿನ್ಯಾಸದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಬಹಳವೆಂದರೆ ಕೈಮೇಲೆ ಪ್ರೀತಿಪಾತ್ರರ ಹೆಸರುಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ. ಪ್ರೀತಿಪಾತ್ರರ ಹೆಸರಿನೊಂದಿಗೆ ಫೋಟೋ ಕೂಡ ಹಾಕಿಸಿಕೊಳ್ಳುತ್ತಾರೆ. ಇಷ್ಟವಾದ ಯಾವ ವಿನ್ಯಾಸವನ್ನೂ, ಛಾಯಾಚಿತ್ರವನ್ನೂ ದೇಹದ ಯಾವುದೇ ಭಾಗದಲ್ಲಿಯೂ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ. ಸ್ವಿಗ್ಗಿ ಇದನ್ನು ಟ್ವೀಟ್ ಮಾಡಿದೆ. ಒಬ್ಬ ವ್ಯಕ್ತಿ ರಾಜ್ಮಾ ಚಾವಲ್​ ಎಂದು ತನ್ನ ಹೊರದೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ನೆಟ್ಟಿಗರು ಈ ಬಗ್ಗೆ ಸಾಕಷ್ಟು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.

ಎಲ್ಲಾ ಬಿಟ್ಟು ಈ ವ್ಯಕ್ತಿ ಹೀಗೆ ಯಾಕೆ ಹಾಕಿಸಿಕೊಂಡಿದ್ದು ಎಂದು ಯೋಚಿಸುತ್ತಿದೆ ನೆಟ್​ಮಂದಿ. ನಾನು ವಡಾ ಪಾವ್​​, ಪಾವ್​ ಭಾಜಿ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಒಬ್ಬರು. ಇದು ನಮ್ಮ ನಿತ್ಯದ ಆಹಾರ, ಇದರಲ್ಲಿ ನನಗೆ ಅಸಹಜ ಎಂದು ಅನ್ನಿಸಿಲ್ಲ ಎಂದಿದ್ದಾರೆ ಮತ್ತೊಬ್ಬರು. ನಾನು ಚೋಲೆ ಬಟೂರೆ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಇನ್ನೊಬ್ಬರು. ನಾನು ಚಹಾ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಮಗದೊಬ್ಬರು.

ಇದನ್ನೂ ಓದಿ : ಯುರೋಪ್​ಗೆ ಡ್ರಗ್ಸ್​​ ಕಳ್ಳಸಾಗಣೆ ಮಾಡುವುದು ಹೇಗೆ? ವ್ಯಕ್ತಿಯೊಬ್ಬನಿಗೆ ಚಾಟ್​ಜಿಪಿಟಿ ಸಲಹೆ ಕೊಟ್ಟಾಗ

ಈ ಪೋಸ್ಟ್​​ ಅನ್ನು ಈಗಾಗಲೇ 15,000 ಜನರು ನೋಡಿದ್ದಾರೆ. 147 ಜನ ಇಷ್ಟಪಟ್ಟಿದ್ದಾರೆ. 14 ಜನರು ರೀಟ್ವೀಟ್ ಮಾಡಿದ್ದಾರೆ. ನಾನಂತೂ ಈ ವ್ಯಕ್ತಿಯನ್ನು ಪೂರ್ತಿ ಬೆಂಬಲಿಸುತ್ತೇನೆ ಎಂದಿದ್ದಾರೆ ಒಬ್ಬರು. ನಾನಂತೂ ಗುಲಾಬ್​ ಜಾಮೂನ್ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ದಮ್ ಆಲೂ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಇದನ್ನು ನೋಡಿ ನಿಮಗೇನಾದರೂ ಹೀಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನಿಸಿತೆ? ಹಾಗಿದ್ದರೆ ನಿಮ್ಮಿಷ್ಟದ ಯಾವ ತಿಂಡಿಯ ಹೆಸರನ್ನು ನೀವು ಎಲ್ಲಿ ಹಾಕಿಸಿಕೊಳ್ಳಲು ಬಯಸುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:08 pm, Mon, 6 February 23

ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ