AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು

Pup Refusing To Eat Veggies : ‘ನೋಡಿ, ತಿನ್ನೋ ವಿಷಯದಲ್ಲಿ ನನಗೂ ನನ್ನದೇ ಆದ ಆಯ್ಕೆ ಅಂತ ಇದೆ. ನಿಮ್ಮ ಸೋಮಾರಿತನಕ್ಕೆ ನನಗೆ ಸೊಪ್ಪುಸೆದೆ ತಿನ್ನಿಸಿ ಹಾಳು ಮಾಡಬೇಡಿ. ಫಿಶ್ಶು, ಚಿಕನ್ನೂ ಈ ಶಬ್ದಗಳ ಪರಿಚಯವುಂಟೋ?’

ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು
Adorable Pup Refusing To Eat Veggies Is Too Relatable To Miss
TV9 Web
| Edited By: |

Updated on: Nov 08, 2022 | 6:15 PM

Share

Viral Video : ಚೀಸ್​ ಬೇಕೇನೋ? ಯೆಸ್. ಕ್ಯಾರೆಟ್​ ಬೇಕೇನೋ? ಊಂಹೂ. ಬ್ರೊಕೋಲಿ ಬೇಕೇನೋ? ಊಂಹೂ. ಮಕ್ಕಳಂತೆ ಅಡ್ಡಡ್ಡ ತಲೆ ಅಲ್ಲಾಡಿಸಿ ಬೇಡ ಎಂದರೆ ಬೇಡ ಎಂದು ಹೇಳುತ್ತಿದೆ ಈ ನಾಯಿಮುದ್ದು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ನಮ್ಮಂತೆಯೇ ಪ್ರಾಣಿಗಳಿಗೂ ಅವುಗಳಿಗೆ ಇಷ್ಟವಾದ ಆಹಾರ ಬೇಕೆನ್ನಿಸುತ್ತದೆ. ಹಾಗಾಗಿ ಅವುಗಳು ಹೀಗೆ ನೇರವಾಗಿ ನಿರಾಕರಿಸುವುದು ತಪ್ಪು ಅಲ್ಲವೇ ಅಲ್ಲ!

ಕೇವಲ 19 ಸೆಕೆಂಡಿನ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಈಗಾಗಲೇ 1.8 ಮಿಲಿಯನ್ ಜನರು ನೋಡಿದ್ದಾರೆ. 87,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನರು ತಮ್ಮ ತಮ್ಮ ಮುದ್ದಿನ ನಾಯಿಗಳು ಹೀಗೆ ತಮಗಿಷ್ಟವಾದ ಆಹಾರವನ್ನು ಬಯಸುವ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ.

ಬಹುಶಃ ಮನುಷ್ಯರು ಕೂಡ ತಮಗೆ ಬೇಡವಾಗಿದ್ದನ್ನು ಬೇಡ ಎಂದು ಹೇಳುವಲ್ಲಿ ಹಿಂಜರಿಯುವರೇನೋ. ಆದರೆ ಈ ನಾಯಿ ಮಾತ್ರ! ಅಬ್ಬಾ ಎಂಥ ನೇರ, ನಿಖರತೆ, ನಿರ್ಭಿಡೆ.

ಬದುಕಿದರೆ ಹೀಗೇ ಬದುಕಬೇಕು. ಬೇಡವಾಗಿದ್ದನ್ನು ಬೇಡ ಎಂದು ನೇರ ಹೇಳಲು ಕಲಿಯಬೇಕು ಎಂದು ಒಬ್ಬರು ಹೇಳಿದ್ದಾರೆ. ಯಾರು ನಿನಗೆ ಹೀಗೆಲ್ಲ ಹೇಳಿಕೊಟ್ಟಿದ್ದು? ಎಂದು ಮತ್ತೊಬ್ಬರು ಕೇಳಿದ್ದಾರೆ.

ನಿಮ್ಮ ಮನೆಯ ನಾಯಿಯೂ ಹೀಗೆಯೇ ಮಾಡುತ್ತದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್