AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು

Pup Refusing To Eat Veggies : ‘ನೋಡಿ, ತಿನ್ನೋ ವಿಷಯದಲ್ಲಿ ನನಗೂ ನನ್ನದೇ ಆದ ಆಯ್ಕೆ ಅಂತ ಇದೆ. ನಿಮ್ಮ ಸೋಮಾರಿತನಕ್ಕೆ ನನಗೆ ಸೊಪ್ಪುಸೆದೆ ತಿನ್ನಿಸಿ ಹಾಳು ಮಾಡಬೇಡಿ. ಫಿಶ್ಶು, ಚಿಕನ್ನೂ ಈ ಶಬ್ದಗಳ ಪರಿಚಯವುಂಟೋ?’

ನೀವೇ ತಿನ್ಕೊಳ್ಳಿ ನಿಮ್ ಕ್ಯಾರೆಟ್​, ಬ್ರೊಕೋಲಿ; ನಿರಾಕರಣೆಯ ವ್ರತದಲ್ಲಿ ಈ ಶ್ವಾನೋತ್ತಮರು
Adorable Pup Refusing To Eat Veggies Is Too Relatable To Miss
TV9 Web
| Edited By: ಶ್ರೀದೇವಿ ಕಳಸದ|

Updated on: Nov 08, 2022 | 6:15 PM

Share

Viral Video : ಚೀಸ್​ ಬೇಕೇನೋ? ಯೆಸ್. ಕ್ಯಾರೆಟ್​ ಬೇಕೇನೋ? ಊಂಹೂ. ಬ್ರೊಕೋಲಿ ಬೇಕೇನೋ? ಊಂಹೂ. ಮಕ್ಕಳಂತೆ ಅಡ್ಡಡ್ಡ ತಲೆ ಅಲ್ಲಾಡಿಸಿ ಬೇಡ ಎಂದರೆ ಬೇಡ ಎಂದು ಹೇಳುತ್ತಿದೆ ಈ ನಾಯಿಮುದ್ದು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ನಮ್ಮಂತೆಯೇ ಪ್ರಾಣಿಗಳಿಗೂ ಅವುಗಳಿಗೆ ಇಷ್ಟವಾದ ಆಹಾರ ಬೇಕೆನ್ನಿಸುತ್ತದೆ. ಹಾಗಾಗಿ ಅವುಗಳು ಹೀಗೆ ನೇರವಾಗಿ ನಿರಾಕರಿಸುವುದು ತಪ್ಪು ಅಲ್ಲವೇ ಅಲ್ಲ!

ಕೇವಲ 19 ಸೆಕೆಂಡಿನ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಈಗಾಗಲೇ 1.8 ಮಿಲಿಯನ್ ಜನರು ನೋಡಿದ್ದಾರೆ. 87,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನರು ತಮ್ಮ ತಮ್ಮ ಮುದ್ದಿನ ನಾಯಿಗಳು ಹೀಗೆ ತಮಗಿಷ್ಟವಾದ ಆಹಾರವನ್ನು ಬಯಸುವ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ.

ಬಹುಶಃ ಮನುಷ್ಯರು ಕೂಡ ತಮಗೆ ಬೇಡವಾಗಿದ್ದನ್ನು ಬೇಡ ಎಂದು ಹೇಳುವಲ್ಲಿ ಹಿಂಜರಿಯುವರೇನೋ. ಆದರೆ ಈ ನಾಯಿ ಮಾತ್ರ! ಅಬ್ಬಾ ಎಂಥ ನೇರ, ನಿಖರತೆ, ನಿರ್ಭಿಡೆ.

ಬದುಕಿದರೆ ಹೀಗೇ ಬದುಕಬೇಕು. ಬೇಡವಾಗಿದ್ದನ್ನು ಬೇಡ ಎಂದು ನೇರ ಹೇಳಲು ಕಲಿಯಬೇಕು ಎಂದು ಒಬ್ಬರು ಹೇಳಿದ್ದಾರೆ. ಯಾರು ನಿನಗೆ ಹೀಗೆಲ್ಲ ಹೇಳಿಕೊಟ್ಟಿದ್ದು? ಎಂದು ಮತ್ತೊಬ್ಬರು ಕೇಳಿದ್ದಾರೆ.

ನಿಮ್ಮ ಮನೆಯ ನಾಯಿಯೂ ಹೀಗೆಯೇ ಮಾಡುತ್ತದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು