Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

Education : ಮದುವೆಯಂತೆ ಶಿಕ್ಷಣವೂ ನನಗೆ ಮುಖ್ಯ ಎಂದ ಕೃಷ್ಣಾ ರಜಪೂತ. ಅಭಿನಂದನೆ! ದೇಶದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ ಎಂದು ಹಲವರು. ಇದು ಬ್ಯಾಡ್​ ಪೇರೆಂಟಿಂಗ್​ ಎಂದು ಕೆಲವರು. ನೀವೇನಂತೀರಿ?

Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು
ಮದುಮಗಳು ಕೃಷ್ಣ ರಜಪೂತ್
Follow us
|

Updated on:May 18, 2023 | 4:32 PM

Bride: ಮದುವೆ ಕೂಡ ಜೀವನದ ಒಂದು ಭಾಗ ಎಂಬ ಅರಿವು ಈಗಿನ ಹೆಣ್ಣುಮಕ್ಕಳಿಗೆ ಬಹಳ ಬೇಗ ಅರಿವಾಗಿದೆ. ಹಾಗಾಗಿಯೇ ಮದುವೆಗಾಗಿ ಶಿಕ್ಷಣವನ್ನು ಮೊಟಕುಗೊಳಿಸುವುದನ್ನು, ಕೈಯಲ್ಲಿದ್ದ ಕೆಲಸವನ್ನು ಬಿಡುವುದನ್ನು ಅವರು ಒಪ್ಪಲಾರರು. ಸಮನಾಗಿ ಓದಬೇಕು ಸಮನಾಗಿ ದುಡಿಯಬೇಕು, ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಚೆಂದದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯ ಅವರುಗಳದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವಧುವೊಬ್ಬಳು ತನ್ನ ಮದುವೆಯ ನಂತರ ನೇರ ಪರೀಕ್ಷಾ ಕೊಠಡಿಗೆ ಧಾವಿಸಿದ್ದಾಳೆಂದರೆ… ಶಿಕ್ಷಣ ಎಷ್ಟು ಮಹತ್ವದ್ದು ಎಂದು ಯೋಚಿಸಿ.

ತನ್ನ ಮದುವೆ ನೆರವೇರುವುದನ್ನೇ ಕಾಯುತ್ತಿದ್ದ ನವವಧು ಅಲಂಕಾರ, ಉಡುಪಿನೊಂದಿಗೆ ನೇರ ಕಾಲೇಜಿನ ಪರೀಕ್ಷಾ ಕೊಠಡಿಗೇ ಬಂದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಕ್ಯಾ ಬಾತ್​ ಹೈ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಕೆ ಉತ್ತರ ಪ್ರದೇಶ ನಿವಾಸಿ ಕೃಷ್ಣ ರಜಪೂತ್, ಮೇ. 16ರಂದು  ಬಿಎ ಅಂತಿಮ ವರ್ಷದ ಸಮಾಜ ಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದಾಳೆ.

‘ನನ್ನ ಮದುವೆಯಂತೆ ಪರೀಕ್ಷೆಯೂ ನನಗೆ ಮುಖ್ಯ. ಹಾಗಾಗಿ ಗಂಡನಮನೆಗೆ ಹೋಗುವ ಶಾಸ್ತ್ರ ಪರೀಕ್ಷೆ ಮುಗಿದ ನಂತರ ನಡೆಯಲಿದೆ’ ಎಂದು ಎಎನ್​ಐ ಸುದ್ದಿ ಸಂಸ್ಥೆಗೆ ವಧು ತಿಳಿಸಿದ್ದಾಳೆ. ಈತನಕ ಈ ವಿಡಿಯೋ ಅನ್ನು ಸುಮಾರು 62,000 ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

ಅಭಿನಂದನೆ ವಧುವಿಗೆ. ಇಂದಿನ ಮಹಿಳೆ ತನ್ನ ಸಂಗಾತಿಯಾಗುವವನೊಂದಿಗೆ ಚರ್ಚಿಸಿ ಮದುವೆಯ ದಿನವನ್ನು ನಿಗದಿಗೊಳಿಸಬಹುದು. ಮದುವೆ ನಂತರವೂ ಆರ್ಥಿಕವಾಗಿ ಆಕೆ ಸ್ವತಂತ್ರಳಾಗಬಹುದು. ಆದರೆ ಇದೆಲ್ಲವೂ ಸಾಧ್ಯವಾಗುವುದು ಸಂಪ್ರದಾಯಗಳನ್ನು ಮೀರಿದಾಗ ಮಾತ್ರ! ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

ಶಿಕ್ಷಣ ಯಾವತ್ತೂ ಜೀವನದ ಆದ್ಯತೆಯಾಗಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕೊನೇಪಕ್ಷ ಮದುವೆ ಉಡುಪನ್ನು ತೆಗೆದಿಟ್ಟು ಬರಬಾರದೆ ಎಂದು ಮಗದೊಬ್ಬರು ಸಲಹೆ ನೀಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಇನ್ನೊಬ್ಬರು, ಇದು ಬ್ಯಾಡ್ ಪೇರೆಂಟಿಂಗ್​ ಎಂದಿದ್ದಾರೆ. ಇದೆಲ್ಲ ನಾಟಕವಷ್ಟೇ ಎಂದು ಮತ್ತೊಬ್ಬರು ಹೇಳಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಮಾಧ್ಯಮದವರು! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಒಬ್ಬರು. ನಮ್ಮ ರಾಷ್ಟ್ರದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Thu, 18 May 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ