Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು

Education : ಮದುವೆಯಂತೆ ಶಿಕ್ಷಣವೂ ನನಗೆ ಮುಖ್ಯ ಎಂದ ಕೃಷ್ಣಾ ರಜಪೂತ. ಅಭಿನಂದನೆ! ದೇಶದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ ಎಂದು ಹಲವರು. ಇದು ಬ್ಯಾಡ್​ ಪೇರೆಂಟಿಂಗ್​ ಎಂದು ಕೆಲವರು. ನೀವೇನಂತೀರಿ?

Viral Video: ಮಂಟಪದಿಂದ ನೇರ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉತ್ತರಪ್ರದೇಶದ ನವವಧು
ಮದುಮಗಳು ಕೃಷ್ಣ ರಜಪೂತ್
Follow us
ಶ್ರೀದೇವಿ ಕಳಸದ
|

Updated on:May 18, 2023 | 4:32 PM

Bride: ಮದುವೆ ಕೂಡ ಜೀವನದ ಒಂದು ಭಾಗ ಎಂಬ ಅರಿವು ಈಗಿನ ಹೆಣ್ಣುಮಕ್ಕಳಿಗೆ ಬಹಳ ಬೇಗ ಅರಿವಾಗಿದೆ. ಹಾಗಾಗಿಯೇ ಮದುವೆಗಾಗಿ ಶಿಕ್ಷಣವನ್ನು ಮೊಟಕುಗೊಳಿಸುವುದನ್ನು, ಕೈಯಲ್ಲಿದ್ದ ಕೆಲಸವನ್ನು ಬಿಡುವುದನ್ನು ಅವರು ಒಪ್ಪಲಾರರು. ಸಮನಾಗಿ ಓದಬೇಕು ಸಮನಾಗಿ ದುಡಿಯಬೇಕು, ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಚೆಂದದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯ ಅವರುಗಳದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವಧುವೊಬ್ಬಳು ತನ್ನ ಮದುವೆಯ ನಂತರ ನೇರ ಪರೀಕ್ಷಾ ಕೊಠಡಿಗೆ ಧಾವಿಸಿದ್ದಾಳೆಂದರೆ… ಶಿಕ್ಷಣ ಎಷ್ಟು ಮಹತ್ವದ್ದು ಎಂದು ಯೋಚಿಸಿ.

ತನ್ನ ಮದುವೆ ನೆರವೇರುವುದನ್ನೇ ಕಾಯುತ್ತಿದ್ದ ನವವಧು ಅಲಂಕಾರ, ಉಡುಪಿನೊಂದಿಗೆ ನೇರ ಕಾಲೇಜಿನ ಪರೀಕ್ಷಾ ಕೊಠಡಿಗೇ ಬಂದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಕ್ಯಾ ಬಾತ್​ ಹೈ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಕೆ ಉತ್ತರ ಪ್ರದೇಶ ನಿವಾಸಿ ಕೃಷ್ಣ ರಜಪೂತ್, ಮೇ. 16ರಂದು  ಬಿಎ ಅಂತಿಮ ವರ್ಷದ ಸಮಾಜ ಶಾಸ್ತ್ರ ಪರೀಕ್ಷೆಗೆ ಹಾಜರಾಗಿದ್ದಾಳೆ.

‘ನನ್ನ ಮದುವೆಯಂತೆ ಪರೀಕ್ಷೆಯೂ ನನಗೆ ಮುಖ್ಯ. ಹಾಗಾಗಿ ಗಂಡನಮನೆಗೆ ಹೋಗುವ ಶಾಸ್ತ್ರ ಪರೀಕ್ಷೆ ಮುಗಿದ ನಂತರ ನಡೆಯಲಿದೆ’ ಎಂದು ಎಎನ್​ಐ ಸುದ್ದಿ ಸಂಸ್ಥೆಗೆ ವಧು ತಿಳಿಸಿದ್ದಾಳೆ. ಈತನಕ ಈ ವಿಡಿಯೋ ಅನ್ನು ಸುಮಾರು 62,000 ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

ಅಭಿನಂದನೆ ವಧುವಿಗೆ. ಇಂದಿನ ಮಹಿಳೆ ತನ್ನ ಸಂಗಾತಿಯಾಗುವವನೊಂದಿಗೆ ಚರ್ಚಿಸಿ ಮದುವೆಯ ದಿನವನ್ನು ನಿಗದಿಗೊಳಿಸಬಹುದು. ಮದುವೆ ನಂತರವೂ ಆರ್ಥಿಕವಾಗಿ ಆಕೆ ಸ್ವತಂತ್ರಳಾಗಬಹುದು. ಆದರೆ ಇದೆಲ್ಲವೂ ಸಾಧ್ಯವಾಗುವುದು ಸಂಪ್ರದಾಯಗಳನ್ನು ಮೀರಿದಾಗ ಮಾತ್ರ! ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

ಶಿಕ್ಷಣ ಯಾವತ್ತೂ ಜೀವನದ ಆದ್ಯತೆಯಾಗಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಕೊನೇಪಕ್ಷ ಮದುವೆ ಉಡುಪನ್ನು ತೆಗೆದಿಟ್ಟು ಬರಬಾರದೆ ಎಂದು ಮಗದೊಬ್ಬರು ಸಲಹೆ ನೀಡಿದ್ದಾರೆ. ಆದರೆ ಈ ವಿಡಿಯೋ ನೋಡಿದ ಇನ್ನೊಬ್ಬರು, ಇದು ಬ್ಯಾಡ್ ಪೇರೆಂಟಿಂಗ್​ ಎಂದಿದ್ದಾರೆ. ಇದೆಲ್ಲ ನಾಟಕವಷ್ಟೇ ಎಂದು ಮತ್ತೊಬ್ಬರು ಹೇಳಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಮಾಧ್ಯಮದವರು! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಒಬ್ಬರು. ನಮ್ಮ ರಾಷ್ಟ್ರದ ಉನ್ನತಿಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:32 pm, Thu, 18 May 23

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್