Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?

ಸೈನಿಕನೊಬ್ಬ ಕಾಡಿನಲ್ಲಿ ಹೋಗುತ್ತಿರುವಾಗ ನಾಗರಹಾವು ತಲೆ ಎತ್ತಿ ನಿಲ್ಲುತ್ತದೆ. ಈ ವೇಳೆ ವೀರ ಸೈನಿಕ ಮಾಡಿದ್ದೇನು? ಈ ವೈರಲ್ ವಿಡಿಯೋ ನೋಡಿ.

Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?
ನಾಗರ ಹಾವನ್ನು ಹಿಡಿದ ಸೈನಿಕ
Follow us
TV9 Web
| Updated By: Rakesh Nayak Manchi

Updated on: Aug 15, 2022 | 10:04 AM

ನಾಗರಹಾವು ವಿಶ್ವದ ಅತ್ಯಂತ ಮಾರಕ ಹಾವುಗಳಲ್ಲಿ ಒಂದಾಗಿದೆ, ಓರ್ವ ವ್ಯಕ್ತಿಯನ್ನು ಕೇವಲ 20 ನಿಮಿಷಗಳಲ್ಲಿ ಕೊಲ್ಲುವ ಸಾಮರ್ಥ್ಯ ಅದರ ವಿಷಕ್ಕಿದೆ. ಆದಾಗ್ಯೂ, ಅಪಾಯಕಾರಿ ಹಾವು ತನ್ನ ಬಂದಾಗಲೂ ವೀರ ಯೋಧ ಕುಗ್ಗದೆ ಅದಕ್ಕೂ ಯಾವುದೇ ತೊಂದರೆಯನ್ನು ನೀಡದೆ ಹಿಡಿದಿದ್ದಾರೆ. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸೇನೆಯ ಯೋಧನೊಬ್ಬ ತನ್ನ ಶತ್ರುಗಳ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಾ ಕಾಡಿನಲ್ಲಿ ತೆವಳುತ್ತಾ ಹೋಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋದಲ್ಲಿ ಇರುವಂತೆ, ಸೈನಿಕ ಗನ್ ಹಿಡಿದುಕೊಂಡು ಕಾಡಿನಲ್ಲಿ ತೆವಲುತ್ತಾ ಹೋಗುತ್ತಿರುವಾಗ ಸ್ವಲ್ಪ ಹೆಡೆ ಬಿಚ್ಚಿ ದಾಳಿಗೆ ಸಜ್ಜಾಗಿದ್ದ ನಾಗರ ಹಾವನ್ನು ನೋಡುತ್ತಾನೆ. ಅಷ್ಟಕ್ಕೂ ಎದೆಗುಂದದ ಆ ವೀರ ಸೈನಿಕ ಹಾವಿನ ತಲೆಯ ಮೇಲೆ ತನ್ನ ಕೈಯನ್ನು ಕೊಂಡೊಯ್ಯುತ್ತಾನೆ. ನಂತರ ನಿಧಾನವಾಗಿ ಕೈಯನ್ನು ಕೆಳಗೆ ತರುತ್ತಾ ಅದು ಮುಖವನ್ನು ಹಿಡಿಯುತ್ತಾನೆ. ತದನಂತರ ಒಂದು ಕೈಯಲ್ಲಿ ನಾಗರ ಹಾವು ಇನ್ನೊಂದು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ತೆವಲುತ್ತಲೇ ಮುಂದೆ ಸಾಗುವುದನ್ನು ನೋಡಬಹುದು. ಯಾವುದೇ ನಿರ್ಭೀತಿಯಿಂದ ಹಾವಿನ ತಲೆಯ ಮೇಲೆ ಕೈ ಹಾಕುವ ಆ ಸೈನಿಕನು ಹಾವು ಹಿಡಿಯುವ ತರಬೇತಿಯನ್ನೂ ಪಡೆದಿರುವಂತೆ ಕಾಣುತ್ತದೆ.

ಈ ವಿಡಿಯೋವನ್ನು official_viralclips ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಪಡೆದಿದೆ. ಹಾವನ್ನು ಹಿಡಿಯುವ ಈ ಯೋಧನ ವಿಡಿಯೋ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಸೈನಿಕನಿಗೆ ಸಂಬಂಧಪಟ್ಟ ಬೇರೆಬೇರೆ ಸಾಹಸದ, ಮಾನವೀಯತೆ ಮರೆಯುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ