AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?

ಸೈನಿಕನೊಬ್ಬ ಕಾಡಿನಲ್ಲಿ ಹೋಗುತ್ತಿರುವಾಗ ನಾಗರಹಾವು ತಲೆ ಎತ್ತಿ ನಿಲ್ಲುತ್ತದೆ. ಈ ವೇಳೆ ವೀರ ಸೈನಿಕ ಮಾಡಿದ್ದೇನು? ಈ ವೈರಲ್ ವಿಡಿಯೋ ನೋಡಿ.

Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?
ನಾಗರ ಹಾವನ್ನು ಹಿಡಿದ ಸೈನಿಕ
TV9 Web
| Updated By: Rakesh Nayak Manchi|

Updated on: Aug 15, 2022 | 10:04 AM

Share

ನಾಗರಹಾವು ವಿಶ್ವದ ಅತ್ಯಂತ ಮಾರಕ ಹಾವುಗಳಲ್ಲಿ ಒಂದಾಗಿದೆ, ಓರ್ವ ವ್ಯಕ್ತಿಯನ್ನು ಕೇವಲ 20 ನಿಮಿಷಗಳಲ್ಲಿ ಕೊಲ್ಲುವ ಸಾಮರ್ಥ್ಯ ಅದರ ವಿಷಕ್ಕಿದೆ. ಆದಾಗ್ಯೂ, ಅಪಾಯಕಾರಿ ಹಾವು ತನ್ನ ಬಂದಾಗಲೂ ವೀರ ಯೋಧ ಕುಗ್ಗದೆ ಅದಕ್ಕೂ ಯಾವುದೇ ತೊಂದರೆಯನ್ನು ನೀಡದೆ ಹಿಡಿದಿದ್ದಾರೆ. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸೇನೆಯ ಯೋಧನೊಬ್ಬ ತನ್ನ ಶತ್ರುಗಳ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಾ ಕಾಡಿನಲ್ಲಿ ತೆವಳುತ್ತಾ ಹೋಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋದಲ್ಲಿ ಇರುವಂತೆ, ಸೈನಿಕ ಗನ್ ಹಿಡಿದುಕೊಂಡು ಕಾಡಿನಲ್ಲಿ ತೆವಲುತ್ತಾ ಹೋಗುತ್ತಿರುವಾಗ ಸ್ವಲ್ಪ ಹೆಡೆ ಬಿಚ್ಚಿ ದಾಳಿಗೆ ಸಜ್ಜಾಗಿದ್ದ ನಾಗರ ಹಾವನ್ನು ನೋಡುತ್ತಾನೆ. ಅಷ್ಟಕ್ಕೂ ಎದೆಗುಂದದ ಆ ವೀರ ಸೈನಿಕ ಹಾವಿನ ತಲೆಯ ಮೇಲೆ ತನ್ನ ಕೈಯನ್ನು ಕೊಂಡೊಯ್ಯುತ್ತಾನೆ. ನಂತರ ನಿಧಾನವಾಗಿ ಕೈಯನ್ನು ಕೆಳಗೆ ತರುತ್ತಾ ಅದು ಮುಖವನ್ನು ಹಿಡಿಯುತ್ತಾನೆ. ತದನಂತರ ಒಂದು ಕೈಯಲ್ಲಿ ನಾಗರ ಹಾವು ಇನ್ನೊಂದು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ತೆವಲುತ್ತಲೇ ಮುಂದೆ ಸಾಗುವುದನ್ನು ನೋಡಬಹುದು. ಯಾವುದೇ ನಿರ್ಭೀತಿಯಿಂದ ಹಾವಿನ ತಲೆಯ ಮೇಲೆ ಕೈ ಹಾಕುವ ಆ ಸೈನಿಕನು ಹಾವು ಹಿಡಿಯುವ ತರಬೇತಿಯನ್ನೂ ಪಡೆದಿರುವಂತೆ ಕಾಣುತ್ತದೆ.

ಈ ವಿಡಿಯೋವನ್ನು official_viralclips ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಪಡೆದಿದೆ. ಹಾವನ್ನು ಹಿಡಿಯುವ ಈ ಯೋಧನ ವಿಡಿಯೋ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಸೈನಿಕನಿಗೆ ಸಂಬಂಧಪಟ್ಟ ಬೇರೆಬೇರೆ ಸಾಹಸದ, ಮಾನವೀಯತೆ ಮರೆಯುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ