AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ

Scribbling : ಈ ವಿಡಿಯೋ ನೋಡಿದ ಮೇಲೆ ನೀವು ಖಂಡಿತ ನಿಮ್ಮ ಮಕ್ಕಳನ್ನು ಬಯ್ಯವುದಿಲ್ಲ. ಬದಲಾಗಿ ನೀವೇ ಪೇಂಟು ಬ್ರಷ್​ ತೆಗೆದುಕೊಂಡು ಅವರೊಂದಿಗೆ ಬೆರೆಯುತ್ತೀರಿ. ಮಜಾ ಇದೆ ಈ ವಿಡಿಯೋ.

ಗೀಚಿ ಮಕ್ಕಳೇ ಗೀಚಿ; ಆಮೇಲೆ ಅಪ್ಪ ಮಾಡಿದ್ದೇನು? ನೋಡಿ ವೈರಲ್ ಆಗುತ್ತಿರುವ ವಿಡಿಯೋ
ಮಗಳು ಗೀಚಿದಾಗ ಅಪ್ಪ ಏನು ಮಾಡಿದರಿಲ್ಲಿ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 21, 2023 | 5:03 PM

Viral Video : ಮಕ್ಕಳು ಒಂದು ವರ್ಷದವರಾಗುತ್ತಿದ್ದಂತೆ ಅವರಿಂದ ಗೋಡೆಯನ್ನು ರಕ್ಷಿಸುವುದೇ ದೊಡ್ಡ ಕೆಲಸವೆಂಬಂತೆ ಪೋಷಕರು ಚಿಂತೆಗೊಳಗಾಗುತ್ತಾರೆ. ಆದರೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಮಕ್ಕಳನ್ನು ಗೀಚುವಿಕೆಯಿಂದ (Scribbling) ತಡೆಯುವುದು ತಪ್ಪು. ಗೀಚುವಿಕೆಗೂ ಮಕ್ಕಳ ಮೆದುಳಿನ ವಿಕಾಸಕ್ಕೂ ಪರಸ್ಪರ ಸಂಬಂಧವಿದೆ ಎನ್ನತ್ತದೆ ಮನೋವಿಜ್ಞಾನ. ಗೀಚುವಿಕೆಯಿಂದ ಉಂಟಾಗುವ ಅತೀ ಸೂಕ್ಷ್ಮ ಕರ್ಕಶ ಶಬ್ದವು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಆದರೂ ಗೋಡೆಯ ಮೇಲೆ ಮಕ್ಕಳು ಗೀಚಿದಾಗ ಎಂಥ ಪೋಷಕರಿಗೂ ಕಿರಿಕಿರಿಯೇ. ಆದರೆ ಇದನ್ನೇ ಕಲಾತ್ಮಕ ದೃಷ್ಟಿಯಿಂದ ನೋಡುವುದನ್ನು ಬೆಳೆಸಿಕೊಂಡಲ್ಲಿ ಮಕ್ಕಳೊಂದಿಗೆ ಪೋಷಕರು ಖುಷಿಪಡುತ್ತಾರೆ. ಸೃಜನಶೀಲತೆಯ ಹುಟ್ಟು ಇಲ್ಲಿಂದಲೇ ಶುರುವಾಗುತ್ತದೆ.

ಈ ವಿಡಿಯೋದಲ್ಲಿ ಮಗಳು ಗೋಡೆ ಮೇಲೆ ಪುಟ್ಟದಾಗಿ ಏನೋ ಚಿತ್ರ ಬಿಡಿಸಿದ್ದಾಳೆ. ಆದರೆ ಕೋಪಗೊಳ್ಳದ ಕಲಾವಿದ ತಂದೆ ಇದನ್ನು ಅಚ್ಚರಿಪಡುವಂತೆ ಮಾರ್ಪಾಡು ಮಾಡಿದ್ಧಾನೆ. ಈತನಕ 11 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 90,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಶಭಾಷ್​ ಅಪ್ಪಾ, ಮನೆಗೊಬ್ಬರು ಇಂಥ ಒಬ್ಬ ಅಪ್ಪ ಇದ್ದರೆ ಸಾಕು, ಮಕ್ಕಳ ಮನಸು ಸೃಜನಶೀಲತೆಯಿಂದ ಅರಳತೊಡಗುತ್ತದೆ ಎಂದು ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್

ಛೆ ನನಗೂ ಇಂಥ ಅಪ್ಪ ಇರಬೇಕಿತ್ತು. ಬಾಲ್ಯದಲ್ಲಿ ಸಾಕಷ್ಟು ಹೊಡೆತ ತಿಂದಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮಕ್ಕಳನ್ನು ಇಂಥ ಗೀಚುವಿಕೆಯಿಂದ ತಡೆಯುವುದಕ್ಕಿಂತ ಗೋಡೆಗಳಿಗೆ ಪ್ಲಾಸ್ಟರ್​ ಆಫ್​ ಪ್ಯಾರೀಸ್​ನ ಶೀಟುಗಳನ್ನು ಅಂಟಿಸುವುದು ಒಳ್ಳೆಯದು ಎಂದಿದ್ಧಾರೆ ಹಲವರು. ಈ ಉಪಾಯ ಬಹಳ ಮುದ್ಧಾಗಿದೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ಇಂಥ ಉಪಾಯಗಳನ್ನು ಕಂಡುಕೊಳ್ಳಬಹುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Sat, 21 January 23

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?