ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ

Elephant Spotted Enjoying Panipuris : ‘ರುಚಿಯಾಗಿದ್ದನ್ನು ಯಾವಾಗಲೂ ಸ್ವಲ್ಪೇ ತಿನ್ನಬೇಕು, ಹೊಟ್ಟೇತುಂಬಾ ತಿಂದು ತೇಗೋದಲ್ಲ. ಈಗ ನೋಡಿ ನನ್ನ ದೊಡ್ಡಹೊಟ್ಟೆಗೆ ಈ ಪುಟ್ಟಪುಟ್ಟ ಪಾನೀಪುರಿ ಉರುಳಿಸಿಕೊಳ್ತಿದೀನಲ್ಲ ಹೀಗೆ...’

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ
Elephant Spotted Enjoying Panipuris At Roadside Stall in Assam
Follow us
| Updated By: ಶ್ರೀದೇವಿ ಕಳಸದ

Updated on:Oct 12, 2022 | 12:44 PM

Viral Video : ಒಂದು ಕೊಟ್ಟಾ, ಎರಡು ಕೊಟ್ಟಾ, ಮೂರು ಕೊಟ್ಟಾ, ನಾಲ್ಕು ಕೊಟ್ಟಾ ಕೊಟ್ಟಾ ಕೊಟ್ಟಾ… ನಾಲ್ಕು ಸಾವಿರ ಪಾನೀಪುರಿ ಕೊಟ್ಟರೂ ತುಂಬದು ಈ ಗಜರಾಯನ ಹೊಟ್ಟೆ. ಅಂತೂ ಮನುಷ್ಯನ ಸಹವಾಸಕ್ಕೆ ಬಿದ್ದು ಕಾಡುಪ್ರಾಣಿಗಳು ಹೀಗೆಲ್ಲಾ ‘ರುಚಿಭ್ರಮಣೆ’ಗೊಳಗಾಗಿ ಹಾಳಾಗ್ತಿವೆ ಅಂದಹಾಗಾಯ್ತು! ಪಾನೀಪುರಿ, ಗೋಲ್ಗಪ್ಪ, ಪುಚ್ಕಾ ಎಷ್ಟೊಂದು ಹೆಸರುಗಳು ಈ ಬೀದಿಬದಿಯ ತಿಂಡಿಗೆ. ಇಡೀ ದೇಶದ ಜನತೆಯ ನಾಲಗೆಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಕೀರ್ತಿ ಈ ಪಾನೀಪುರಿಯದು. ಮನುಷ್ಯರು ಸಾಲದು ಅಂತ ಈಗ ಕಾಡಿನ ಪ್ರಾಣಿಗಳ ನಾಲಗೆಗೂ ಲಗ್ಗೆ ಇಡಲು ಆರಂಭಿಸಿದೆ! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಆಸ್ಸಾಮಿನಲ್ಲಿ ಸೆರೆಹಿಡಿದಿದ್ದು.

ಹೀಗಿವನು ಆನೆಗೆ ಪಾನೀಪುರಿ ತಿನ್ನಿಸುತ್ತಿರುವುದನ್ನು ನೋಡಲು ಸುತ್ತಲೂ ಜನ ಜಮಾಯಿಸಿದ್ದಾರೆ, ತಮ್ಮ ತಮ್ಮ ಮೊಬೈಲುಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗಂತೂ ಈ ವಿಡಿಯೋ ಬಹಳ ಮಜಾ ಕೊಡುತ್ತಿದೆ.  ‘ಸುಕ್ಕಾ ಪುರಿ ಭೀ ದೇನಾ ಉಸ್ಕೋ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರೇ ಯಾಕೆ ಎಲ್ಲವನ್ನೂ ಅನುಭವಿಸಿ ಖುಷಿಪಡಬೇಕು, ನಾನೂ ತಿಂದು ಖುಷಿಪಡುತ್ತೇನೆ’ ಎಂದು ಆನೆಯ ಪರವಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಭಾರತವು ಇಲಿಯಿಂದ ಆನೆಯವರೆಗೂ ಎಲ್ಲ ಪ್ರಾಣಿಗಳನ್ನು ಆರಾಧಿಸುವ ದೇಶವಾಗಿದೆ. ಇಲ್ಲಿ ಹುಲಿಯೂ ದೋಣಿಯಲ್ಲಿ ಮನುಷ್ಯನೊಂದಿಗೆ ಪ್ರಯಾಣಿಸಬಹುದು. ಆನೆಯೂ ರಸ್ತೆಬದಿ ಗೋಲ್ಗಪ್ಪ ತಿನ್ನಬಹುದು, ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ನಮ್ಮ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಶ್ಲಾಘಿಸಿದ್ದಾರೆ ಮಗದೊಬ್ಬ ನೆಟ್ಟಿಗರು.

ಈಗ ನಿಮ್ಮನೆಗೆ ಈ ಆನೆ ಬಂದರೆ ಏನು ಕೊಡುತ್ತೀರಿ ತಿನ್ನಲು?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:36 pm, Wed, 12 October 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್