AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ

Elephant Spotted Enjoying Panipuris : ‘ರುಚಿಯಾಗಿದ್ದನ್ನು ಯಾವಾಗಲೂ ಸ್ವಲ್ಪೇ ತಿನ್ನಬೇಕು, ಹೊಟ್ಟೇತುಂಬಾ ತಿಂದು ತೇಗೋದಲ್ಲ. ಈಗ ನೋಡಿ ನನ್ನ ದೊಡ್ಡಹೊಟ್ಟೆಗೆ ಈ ಪುಟ್ಟಪುಟ್ಟ ಪಾನೀಪುರಿ ಉರುಳಿಸಿಕೊಳ್ತಿದೀನಲ್ಲ ಹೀಗೆ...’

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ
Elephant Spotted Enjoying Panipuris At Roadside Stall in Assam
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 12, 2022 | 12:44 PM

Viral Video : ಒಂದು ಕೊಟ್ಟಾ, ಎರಡು ಕೊಟ್ಟಾ, ಮೂರು ಕೊಟ್ಟಾ, ನಾಲ್ಕು ಕೊಟ್ಟಾ ಕೊಟ್ಟಾ ಕೊಟ್ಟಾ… ನಾಲ್ಕು ಸಾವಿರ ಪಾನೀಪುರಿ ಕೊಟ್ಟರೂ ತುಂಬದು ಈ ಗಜರಾಯನ ಹೊಟ್ಟೆ. ಅಂತೂ ಮನುಷ್ಯನ ಸಹವಾಸಕ್ಕೆ ಬಿದ್ದು ಕಾಡುಪ್ರಾಣಿಗಳು ಹೀಗೆಲ್ಲಾ ‘ರುಚಿಭ್ರಮಣೆ’ಗೊಳಗಾಗಿ ಹಾಳಾಗ್ತಿವೆ ಅಂದಹಾಗಾಯ್ತು! ಪಾನೀಪುರಿ, ಗೋಲ್ಗಪ್ಪ, ಪುಚ್ಕಾ ಎಷ್ಟೊಂದು ಹೆಸರುಗಳು ಈ ಬೀದಿಬದಿಯ ತಿಂಡಿಗೆ. ಇಡೀ ದೇಶದ ಜನತೆಯ ನಾಲಗೆಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಕೀರ್ತಿ ಈ ಪಾನೀಪುರಿಯದು. ಮನುಷ್ಯರು ಸಾಲದು ಅಂತ ಈಗ ಕಾಡಿನ ಪ್ರಾಣಿಗಳ ನಾಲಗೆಗೂ ಲಗ್ಗೆ ಇಡಲು ಆರಂಭಿಸಿದೆ! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಆಸ್ಸಾಮಿನಲ್ಲಿ ಸೆರೆಹಿಡಿದಿದ್ದು.

ಹೀಗಿವನು ಆನೆಗೆ ಪಾನೀಪುರಿ ತಿನ್ನಿಸುತ್ತಿರುವುದನ್ನು ನೋಡಲು ಸುತ್ತಲೂ ಜನ ಜಮಾಯಿಸಿದ್ದಾರೆ, ತಮ್ಮ ತಮ್ಮ ಮೊಬೈಲುಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗಂತೂ ಈ ವಿಡಿಯೋ ಬಹಳ ಮಜಾ ಕೊಡುತ್ತಿದೆ.  ‘ಸುಕ್ಕಾ ಪುರಿ ಭೀ ದೇನಾ ಉಸ್ಕೋ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರೇ ಯಾಕೆ ಎಲ್ಲವನ್ನೂ ಅನುಭವಿಸಿ ಖುಷಿಪಡಬೇಕು, ನಾನೂ ತಿಂದು ಖುಷಿಪಡುತ್ತೇನೆ’ ಎಂದು ಆನೆಯ ಪರವಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಭಾರತವು ಇಲಿಯಿಂದ ಆನೆಯವರೆಗೂ ಎಲ್ಲ ಪ್ರಾಣಿಗಳನ್ನು ಆರಾಧಿಸುವ ದೇಶವಾಗಿದೆ. ಇಲ್ಲಿ ಹುಲಿಯೂ ದೋಣಿಯಲ್ಲಿ ಮನುಷ್ಯನೊಂದಿಗೆ ಪ್ರಯಾಣಿಸಬಹುದು. ಆನೆಯೂ ರಸ್ತೆಬದಿ ಗೋಲ್ಗಪ್ಪ ತಿನ್ನಬಹುದು, ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ನಮ್ಮ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಶ್ಲಾಘಿಸಿದ್ದಾರೆ ಮಗದೊಬ್ಬ ನೆಟ್ಟಿಗರು.

ಈಗ ನಿಮ್ಮನೆಗೆ ಈ ಆನೆ ಬಂದರೆ ಏನು ಕೊಡುತ್ತೀರಿ ತಿನ್ನಲು?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:36 pm, Wed, 12 October 22

ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ