AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ

Elephant Spotted Enjoying Panipuris : ‘ರುಚಿಯಾಗಿದ್ದನ್ನು ಯಾವಾಗಲೂ ಸ್ವಲ್ಪೇ ತಿನ್ನಬೇಕು, ಹೊಟ್ಟೇತುಂಬಾ ತಿಂದು ತೇಗೋದಲ್ಲ. ಈಗ ನೋಡಿ ನನ್ನ ದೊಡ್ಡಹೊಟ್ಟೆಗೆ ಈ ಪುಟ್ಟಪುಟ್ಟ ಪಾನೀಪುರಿ ಉರುಳಿಸಿಕೊಳ್ತಿದೀನಲ್ಲ ಹೀಗೆ...’

ಆನೆ ಬಂತೊಂದಾನೆ, ಅಸ್ಸಾಮಿಂದ ಬಂತೊ, ಪಾನೀಪುರಿ ತಿಂತೋ
Elephant Spotted Enjoying Panipuris At Roadside Stall in Assam
TV9 Web
| Updated By: ಶ್ರೀದೇವಿ ಕಳಸದ|

Updated on:Oct 12, 2022 | 12:44 PM

Share

Viral Video : ಒಂದು ಕೊಟ್ಟಾ, ಎರಡು ಕೊಟ್ಟಾ, ಮೂರು ಕೊಟ್ಟಾ, ನಾಲ್ಕು ಕೊಟ್ಟಾ ಕೊಟ್ಟಾ ಕೊಟ್ಟಾ… ನಾಲ್ಕು ಸಾವಿರ ಪಾನೀಪುರಿ ಕೊಟ್ಟರೂ ತುಂಬದು ಈ ಗಜರಾಯನ ಹೊಟ್ಟೆ. ಅಂತೂ ಮನುಷ್ಯನ ಸಹವಾಸಕ್ಕೆ ಬಿದ್ದು ಕಾಡುಪ್ರಾಣಿಗಳು ಹೀಗೆಲ್ಲಾ ‘ರುಚಿಭ್ರಮಣೆ’ಗೊಳಗಾಗಿ ಹಾಳಾಗ್ತಿವೆ ಅಂದಹಾಗಾಯ್ತು! ಪಾನೀಪುರಿ, ಗೋಲ್ಗಪ್ಪ, ಪುಚ್ಕಾ ಎಷ್ಟೊಂದು ಹೆಸರುಗಳು ಈ ಬೀದಿಬದಿಯ ತಿಂಡಿಗೆ. ಇಡೀ ದೇಶದ ಜನತೆಯ ನಾಲಗೆಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡ ಕೀರ್ತಿ ಈ ಪಾನೀಪುರಿಯದು. ಮನುಷ್ಯರು ಸಾಲದು ಅಂತ ಈಗ ಕಾಡಿನ ಪ್ರಾಣಿಗಳ ನಾಲಗೆಗೂ ಲಗ್ಗೆ ಇಡಲು ಆರಂಭಿಸಿದೆ! ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಆಸ್ಸಾಮಿನಲ್ಲಿ ಸೆರೆಹಿಡಿದಿದ್ದು.

ಹೀಗಿವನು ಆನೆಗೆ ಪಾನೀಪುರಿ ತಿನ್ನಿಸುತ್ತಿರುವುದನ್ನು ನೋಡಲು ಸುತ್ತಲೂ ಜನ ಜಮಾಯಿಸಿದ್ದಾರೆ, ತಮ್ಮ ತಮ್ಮ ಮೊಬೈಲುಗಳಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗಂತೂ ಈ ವಿಡಿಯೋ ಬಹಳ ಮಜಾ ಕೊಡುತ್ತಿದೆ.  ‘ಸುಕ್ಕಾ ಪುರಿ ಭೀ ದೇನಾ ಉಸ್ಕೋ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಮನುಷ್ಯರೇ ಯಾಕೆ ಎಲ್ಲವನ್ನೂ ಅನುಭವಿಸಿ ಖುಷಿಪಡಬೇಕು, ನಾನೂ ತಿಂದು ಖುಷಿಪಡುತ್ತೇನೆ’ ಎಂದು ಆನೆಯ ಪರವಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಭಾರತವು ಇಲಿಯಿಂದ ಆನೆಯವರೆಗೂ ಎಲ್ಲ ಪ್ರಾಣಿಗಳನ್ನು ಆರಾಧಿಸುವ ದೇಶವಾಗಿದೆ. ಇಲ್ಲಿ ಹುಲಿಯೂ ದೋಣಿಯಲ್ಲಿ ಮನುಷ್ಯನೊಂದಿಗೆ ಪ್ರಯಾಣಿಸಬಹುದು. ಆನೆಯೂ ರಸ್ತೆಬದಿ ಗೋಲ್ಗಪ್ಪ ತಿನ್ನಬಹುದು, ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ನಮ್ಮ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಶ್ಲಾಘಿಸಿದ್ದಾರೆ ಮಗದೊಬ್ಬ ನೆಟ್ಟಿಗರು.

ಈಗ ನಿಮ್ಮನೆಗೆ ಈ ಆನೆ ಬಂದರೆ ಏನು ಕೊಡುತ್ತೀರಿ ತಿನ್ನಲು?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:36 pm, Wed, 12 October 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್