AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್

Shocking Video: ಮೇಕೆಯೊಂದು ಆಫೀಸಿನ ಕೋಣೆಗೆ ಹೋಗಿ ಕಡತವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೊರಗೆ ಬಂದಿತು. ಮೇಕೆಯ ಬಾಯಿಯಲ್ಲಿ ಫೈಲ್ ಅನ್ನು ಗುರುತಿಸಿದ ಉದ್ಯೋಗಿ ತಕ್ಷಣವೇ ಅದರ ಹಿಂದೆ ಓಡಲು ಪ್ರಾರಂಭಿಸಿದರು.

Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್
ಫೈಲ್ ಎತ್ತಿಕೊಂಡು ಹೋದ ಮೇಕೆಯ ವಿಡಿಯೋ
TV9 Web
| Edited By: |

Updated on: Dec 03, 2021 | 5:42 PM

Share

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೇಕೆಯೊಂದು ಚೌಬೆಪುರ ಡೆವಲಪ್‌ಮೆಂಟ್ ಬ್ಲಾಕ್ ಕಚೇರಿಯ ಕೊಠಡಿಯೊಂದಕ್ಕೆ ನುಗ್ಗಿ ಕಡತವನ್ನು ಬಾಯಿಯಲ್ಲಿ ಕಚ್ಚಿಕೊಂಡು ಪರಾರಿಯಾದ ವಿಚಿತ್ರವಾದ ಘಟನೆ ನಡೆದಿದೆ. ಮೇಕೆಯ ಬಾಯಿಯಲ್ಲಿ ಆಫೀಸ್ ಫೈಲ್ ಇರುವುದನ್ನು ಗಮನಿಸಿದ ಆ ಕಚೇರಿಯ ನೌಕರರು ಆ ಕಡತವನ್ನು ವಾಪಾಸ್ ಪಡೆಯಲು ಮೇಕೆಯ ಹಿಂದೆ ಓಡಿದ್ದಾರೆ. ಚೌಬೆಪುರ ಬ್ಲಾಕ್‌ನಲ್ಲಿರುವ ಪಂಚಾಯತ್ ಕಾರ್ಯದರ್ಶಿ ಕಚೇರಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.

ಕಪ್ಪು ಮೇಕೆಯೊಂದು ಆಫೀಸಿನ ಕೋಣೆಗೆ ಹೋಗಿ ಕಡತವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೊರಗೆ ಬಂದಿತು. ಮೇಕೆಯ ಬಾಯಿಯಲ್ಲಿ ಫೈಲ್ ಅನ್ನು ಗುರುತಿಸಿದ ಉದ್ಯೋಗಿ ತಕ್ಷಣವೇ ಅದರ ಹಿಂದೆ ಓಡಲು ಪ್ರಾರಂಭಿಸಿದರು. ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

22 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಪಂಚಾಯತ್ ಕಾರ್ಯದರ್ಶಿ ಕಚೇರಿಯ ಹೊರಗೆ ಕೆಲವು ನೌಕರರು ಬಿಸಿಲಲ್ಲಿ ನಿಂತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಮೇಕೆಯನ್ನು ಹಿಂಬಾಲಿಸಿದ್ದಾರೆ.

ಈ ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೇಕೆ ಕೂಡ ಫೈಲ್​ನಲ್ಲಿರುವ ದಾಖಲೆಗಳನ್ನು ಓದಲು ಅದನ್ನು ತೆಗೆದುಕೊಂಡು ಹೋಗಿರಬಹುದು ಎಂದು ಒಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಒಂದು ಫೈಲ್ ಅನ್ನು ಮೇಕೆಗೆ ಸಿಗುವಷ್ಟು ಬೇಜವಾಬ್ದಾರಿಯಿಂದ ಇಟ್ಟಿದ್ದಾರೆ ಎಂದರೆ ಇಂಥವರಿಂದ ಜನಸಾಮಾನ್ಯರಿಗೆ ಏನು ಸಹಾಯ? ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.

ನೌಕರರು ಕಡತವನ್ನು ವಾಪಾಸ್ ಪಡೆಯುವಲ್ಲಿ ಯಶಸ್ವಿಯಾದರೂ ಅದರ ಹಾಳೆಗಳು ಕಿತ್ತುಹೋಗಿದ್ದವು. ಮೇಕೆ ಆ ಫೈಲ್​ನ ಒಂದು ಭಾಗವನ್ನು ಜಗಿಯುತ್ತಿತ್ತು. ಉದ್ಯೋಗಿಗಳು ಹರಿದ ಕಡತದ ಪುಟಗಳನ್ನು ಗಮ್ ಟೇಪ್​ನಿಂದ ಅಂಟಿಸಿದರು.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್

Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್