‘ಅಮ್ಮ ನನ್ನ ಚಾಕೊಲೇಟ್​ ಕದ್ದು ಕೆನ್ನೆಗೆ ಹೊಡೆದಿದ್ದಾಳೆ, ಆಕೆಯನ್ನು ಜೈಲಿಗೆ ಹಾಕಿ’ ಪೊಲೀಸ್​ ಕಂಪ್ಲೆಂಟ್ ನೀಡಿದ 3 ವರ್ಷದ ಮಗು

Madhya Pradesh : ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿ, ‘ದೀಪಾವಳಿಯಂದು ಚಾಕೋಲೇಟ್​ ಮತ್ತು ಸೈಕಲ್​ ಕಳಿಸುವುದಾಗಿ ಭರವಸೆ ನೀಡಿದ್ದಾರೆ.’

‘ಅಮ್ಮ ನನ್ನ ಚಾಕೊಲೇಟ್​ ಕದ್ದು ಕೆನ್ನೆಗೆ ಹೊಡೆದಿದ್ದಾಳೆ, ಆಕೆಯನ್ನು ಜೈಲಿಗೆ ಹಾಕಿ’ ಪೊಲೀಸ್​ ಕಂಪ್ಲೆಂಟ್ ನೀಡಿದ 3 ವರ್ಷದ ಮಗು
Madhya Pradesh Child 3 Reports Mother To Cops Over Candy
Follow us
| Updated By: ಶ್ರೀದೇವಿ ಕಳಸದ

Updated on:Oct 18, 2022 | 4:10 PM

Trending : ಮಾಧ್ಯಮ ಮತ್ತು ಪರಿಸರದ ಪ್ರಭಾವದಿಂದ ಮಕ್ಕಳು ಬಹಳೇ ಎಚ್ಚರ ಬೆಳೆಸಿಕೊಳ್ಳುತ್ತಿದ್ದಾರೆ, ಪ್ರಜ್ಞಾವಂತರಾಗುತ್ತಿದ್ದಾರೆ. ಅದರ ಪ್ರಯೋಗವೆಲ್ಲ ಮನೆಯೆಂಬ ಪಾಠಶಾಲೆಯಲ್ಲಿಯೇ ನಡೆಯುತ್ತಿದೆ!; ನನ್ನ ತಾಯಿ ನನ್ನ ಸಿಹಿತಿಂಡಿ ಕದ್ದಿದ್ದಲ್ಲದೆ ನನ್ನ ಕೆನ್ನೆಗೆ ಏಟು ಕೂಡ ಕೊಟ್ಟಿದ್ದಾಳೆ. ನಡಿ ಪಪ್ಪಾ ಅಮ್ಮನ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡೋಣ’ ಎಂದು ಪೊಲೀಸ್​ ಠಾಣೆಗೆ ತನ್ನ ಅಪ್ಪನನ್ನು ಕರೆದೊಯ್ದಿದೆ ಮಧ್ಯಪ್ರದೇಶದ ಮೂರು ವರ್ಷದ ಈ ಗಂಡುಮಗು ಸದ್ದಾಂ. ಠಾಣೆಯಲ್ಲಿ, ‘ಯಾವಾಗಲೂ ಅಮ್ಮ ನನಗೆ ಸಿಹಿತಿಂಡಿಯನ್ನು ತಿನ್ನಬೇಡ ಎಂದು ಹೇಳುತ್ತಾಳೆ. ಹಾಗಾಗಿ ಅವಳನ್ನು ನೀವು ಬಂಧಿಸಲೇಬೇಕು’ ಎಂದು ಪಟ್ಟು ಹಿಡಿದಿದೆ.

ಬರ್ಹಾನ್​ಪುರದ ಈ ಮಗು ಸಬ್​ ಇನ್ಸ್​ಪೆಕ್ಟರ್ ಪ್ರಿಯಾಂಕಾ ನಾಯಕ್​ಗೆ, ‘ನನ್ನ ಅಮ್ಮ ನನ್ನ ಸಿಹಿತಿಂಡಿ ಕದ್ದಿದ್ದಾಳೆ. ಕೆನ್ನೆಗೆ ಹೊಡೆದಿದ್ದಾಳೆ. ತಕ್ಷಣವೇ ಅವಳನ್ನು ಜೈಲಿಗೆ ಹಾಕಲೇಬೇಕು ನೀವು’ ಎಂದು ಒತ್ತಾಯ ಮಾಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಗುವಿನ ಮುಗ್ಧತನ, ಬಾಲಭಾಷೆ ಮತ್ತು ಅದು ಕೊಡುತ್ತಿರುವ ಕಂಪ್ಲೆಂಟ್​ ಎಲ್ಲವನ್ನೂ ಆಲಿಸಿದ ಪ್ರಿಯಾಂಕಾ ಅವರಿಗೆ ನಗು ಬಂದಿದೆ. ಆದರೂ ಗಂಭೀರವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿರುವಂತೆ ನಟಿಸಿದ್ದಾರೆ. ನಂತರ ಕೊನೆಯಲ್ಲಿ ಮಗುವಿನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಆದಷ್ಟು ಬೇಗ ನಿನ್ನ ಅಮ್ಮನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.

ಅದಕ್ಕಿಂತ ಮೊದಲು, ಈ ವಿಷಯವಾಗಿ ಸದ್ದಾಂನ ತಂದೆ ಬಳಿ ವಿಚಾರಿಸಿದಾಗ, ‘ಸಿಹಿತಿಂಡಿ ಕೇಳಿದಾಗ ಸದ್ದಾಂನ ತಾಯಿ ಕೆನ್ನೆ ಹಿಡಿದು ಮುದ್ದು ಮಾಡಿದ್ದಾರೆ’ ಎಂದು ಪೊಲೀಸರಿಗೆ ಉತ್ತರಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿ, ‘ದೀಪಾವಳಿಯಂದು ಮಗುವಿಗೆ ಚಾಕೋಲೇಟ್​ ಮತ್ತು ಸೈಕಲ್​ ಕಳಿಸುವುದಾಗಿ ಭರವಸೆ ನೀಡಿದ್ದಾರೆ.’

ಇದನ್ನು ಓದಿದ ನಿಮಗೆ ಏನೆನ್ನಿಸಿತು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:09 pm, Tue, 18 October 22

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್