AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಪದ್ಧತಿಯಂತೆ ಕೋತಿಯ ಅಂತ್ಯಕ್ರಿಯೆ, ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದ ಘಟನೆ ವೈರಲ್

Hindu Rituals : ‘ಅರೆ ಈಗ ಇದೇನಿದು, ಹೊಸ ಭಾರತವಾ?’ ನೆಟ್ಟಿಗರೊಬ್ಬರ ಪ್ರಶ್ನೆಗೆ, ‘ಹಳೆಯ ಭಾರತದಲ್ಲಿ ಕುರಿಯನ್ನು ಗೌರವದಿಂದ ಕಾಣುತ್ತಿದ್ದರು’ ಎಂದು ಪ್ರತಿಯಾಗಿ ಟ್ವೀಟಿಸಿದ್ದಾರೆ ಇನ್ನೊಬ್ಬರು. ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?

ಹಿಂದೂ ಪದ್ಧತಿಯಂತೆ ಕೋತಿಯ ಅಂತ್ಯಕ್ರಿಯೆ, ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದ ಘಟನೆ ವೈರಲ್
Rajasthan Village Holds Funeral Procession For Beloved Monkey Cremate Him As Per Hindu Rituals
TV9 Web
| Edited By: |

Updated on:Oct 18, 2022 | 3:15 PM

Share

Viral Video : ಪ್ರಾಣಿಪ್ರಿಯರು ಸಾಕುಪ್ರಾಣಿಗಳನ್ನು ಮನೆಯ ಸದಸ್ಯರಂತೆಯೇ ಕಾಣುತ್ತಾರೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಪ್ರಾಣಿಗಳಿಗೆಂದೇ ಪ್ರತ್ಯೇಕ ಪುಟವನ್ನು ಸೃಷ್ಟಿಸಿ ಅವುಗಳ ಚಟುವಟಿಕೆಗಳನ್ನು ಅಪ್​ಡೇಟ್​ ಮಾಡುವುದನ್ನು ನಿತ್ಯವೂ ನೋಡುತ್ತೇವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋತಿಯೊಂದರ ಅಂತ್ಯಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ನೆರವೇರಿಸಿರುವುದು ಕಂಡುಬರುತ್ತದೆ. ಶನಿವಾರದಂದು ಅಕಸ್ಮಾತ್ ಆಗಿ ಕರೆಂಟ್​ ತಗುಲಿ ಮೃತಪಟ್ಟ ಈ ಕೋತಿಯನ್ನು ಹಳ್ಳಿಗರು ಮನುಷ್ಯ ಸಮಾನ ಗೌರವ ಸಲ್ಲಿಸಿ ಅದರ ಅಂತಿಮಯಾತ್ರೆಯನ್ನು ಸಂಪನ್ನಗೊಳಿಸಿದ್ದಾರೆ.

ನಿತ್ಯವೂ ಒಡನಾಡುವ ಕೋತಿಯು ಹೀಗೆ ಆಕಸ್ಮಿಕ ಅವಘಡದಿಂದ ಸಾವನ್ನಪ್ಪಿದಾಗ ರಾಜಸ್ಥಾನದ ಅಳ್ವರ್ ಗ್ರಾಮಸ್ಥರಿಗೆ ದುಃಖವಾಗಿದೆ. ಆಗ ಕೋತಿಯ ಶವವನ್ನು ಹೂ ಮತ್ತು ಗುಲಾಲಿನಿಂದ ಅಲಂಕರಿಸಿ, ಅದನ್ನು ಹೊತ್ತೊಯ್ಯುವ ಗಾಡಿಯನ್ನೂ ಹೂ, ಬಲೂನುಗಳಿಂದ ಚೆಂದಗೊಳಿಸಿ, ಬಾಜಾ ಭಜಂತ್ರಿಯೊಂದಿಗೆ ಹಳ್ಳಿಯ ತುಂಬಾ ಮೆರವಣಿಗೆ ಮಾಡಿ ಹಿಂದೂ ಪದ್ಧತಿಯ ಪ್ರಕಾರ ಅದರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಲ ಹಳ್ಳಿಗರು ಈ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದಾಗಿದೆ. ಭಾರತದಲ್ಲಿ ಕೆಲವೆಡೆ ಕೋತಿಯನ್ನು ಹನುಮಂತನ ಅಪರಾವತಾರ ಎಂದು ಪೂಜಿಸುವುದು ಚಾಲ್ತಿಯಲ್ಲಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ನೆಟ್ಟಿಗರು ಈ ವಿಡಿಯೋ ಕುರಿತು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಅರೆ ಈಗ ಇದೇನಿದು? ಹೊಸ ಭಾರತವಾ’ ಎಂದು ಒಬ್ಬರು ಟೀಕಿಸಿದ್ದಾರೆ. ‘ಹಳೆಯ ಭಾರತದಲ್ಲಿ ಕುರಿಯನ್ನು ಗೌರವದಿಂದ ಕಾಣುತ್ತಿದ್ದರು’ ಎಂದು ಮತ್ತೊಬ್ಬರು ಈ ಟ್ವೀಟ್​ಗೆ ಪ್ರತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಹೀಗೆ ಕೋತಿಯನ್ನು ಅಂತ್ಯಸಂಸ್ಕಾರ ಮಾಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ  

Published On - 3:10 pm, Tue, 18 October 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್