AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಂಗ್ವಿನ್​ಮರಿಯ ನೀರಡಿಕೆ ನೀಗಿಸಿದ ಈ ವ್ಯಕ್ತಿಗೆ ನೆಟ್ಟಿಗರಿಂದ ಧನ್ಯವಾದ

Thirsty Baby Penguin : ಹೀಗೆ ನೀರು ಕುಡಿಸುತ್ತಿರುವ ವ್ಯಕ್ತಿ ಯಾರೆಂಬುದು ವಿಡಿಯೋದಲ್ಲಿ ಕಾಣಲಾರದು. ಬಾಟಲಿಯಿಂದ ಹರಿಯುತ್ತಿರುವ ನೀರು ಈ ಪುಟ್ಟಪೆಂಗ್ವಿನ್​ಗೆ ಜಲಪಾತದಂತೆ ತೋರಿರಲು ಸಾಕು. 4 ಲಕ್ಷ ಜನರ ಗಮನ ಸೆಳೆದಿದೆ ಈ ವಿಡಿಯೋ.

ಪೆಂಗ್ವಿನ್​ಮರಿಯ ನೀರಡಿಕೆ ನೀಗಿಸಿದ ಈ ವ್ಯಕ್ತಿಗೆ ನೆಟ್ಟಿಗರಿಂದ ಧನ್ಯವಾದ
Viral Video Man Offers Water to Thirsty Baby Penguin
TV9 Web
| Edited By: |

Updated on:Oct 19, 2022 | 6:00 PM

Share

Viral Video : ದಯೆ, ಕರುಣೆ, ಸಹಾಯ ಈ ಮೂರು ಗುಣಗಳು ಮನುಷ್ಯತ್ವಕ್ಕೆ ಬಹಳೇ ಮುಖ್ಯ. ನಾವೆಲ್ಲ ಇಂದು ಬದುಕಿದ್ದೇವೆ ಎನ್ನುವುದಕ್ಕೆ ಸಾಕ್ಷಿಯೇ ಈ ಗುಣಗಳು. ಸಾಮಾನ್ಯವಾಗಿ ಈ ಗುಣಗಳು ನಮಗರಿವಿಲ್ಲದೆಯೇ ಎಳವೆಯಲ್ಲಿಯೇ ಮೈಗೂಡಿರುವಂಥವು. ಇಂಥ ವ್ಯಕ್ತಿಯು ಎದುರಿಗಿರುವವರು ವ್ಯಕ್ತಿಯೋ ಪ್ರಾಣಿಯೋ ಪಕ್ಷಿಯೋ ಎಂದೆಲ್ಲ ನೋಡದೆ ಸಹಾಯಕ್ಕೆ ಮುಂದಾಗುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ವ್ಯಕ್ತಿಯೊಬ್ಬರು ಮರಿಪೆಂಗ್ವಿನ್​ಗೆ ಬಾಟಲಿಯಿಂದ ನೀರು ಕುಡಿಸುತ್ತಿದ್ದಾರೆ. ಹೀಗೆ ನೀರು ಕುಡಿಸುತ್ತಿರುವ ವ್ಯಕ್ತಿ ಯಾರೆಂಬುದು ವಿಡಿಯೋದಲ್ಲಿ ಕಾಣಲಾರದು. ತುಂಬಾ ಪುಟ್ಟ ಮರಿ ಇದು. ಬಾಟಲಿಯ ಬಾಯಿ ಮಾತ್ರ ಇಷ್ಟು ದೊಡ್ಡದು. ಜಲಪಾತದಂತೆ ತೋರುತ್ತಿದೆಯೋ ಏನೋ ಈ ಮರಿಗೆ ಈ ನೀರಿನ ಹರಿವು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಗೆ ನಿಲ್ಲಲೂ ಕಲಿಯದಂಥ ಬಹಳೇ ಪುಟ್ಟಮರಿ ಇದು. ಗುಂಪಿನಿಂದ ತಪ್ಪಿಸಿಕೊಂಡ ಹಾಗಿದೆ. ಇದನ್ನು ನೋಡಿಕೊಳ್ಳುತ್ತಿದ್ದ ಅಪ್ಪ ಎಲ್ಲಿಹೋಗಿದ್ದಾನೋ ಮಾರಾಯಾ. ಈ ಪಾಪಚ್ಚಿ ಮಾತ್ರ ಹೀಗೆ ಅಲೆದುಕೊಂಡು, ಗಂಟಲಾರಿಸಿಕೊಂಡಿದೆ. ಅಂತೂ ಈ ವ್ಯಕ್ತಿ ಅದಕ್ಕೆ ನೀರು ಕೊಟ್ಟು ಕಾಪಾಡಿದ್ದಾರೆ. ಅಕ್ಟೋಬರ್ 17ರಂದು ಈ ವಿಡಿಯೋ ಅನ್ನು ಗೇಬ್ರಿಯಲ್ ಕಾರ್ನೋ ಎಂಬುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈತನಕ ಸುಮಾರು 4,63,000 ಜನರು ಈ ವಿಡಿಯೋ ನೋಡಿದ್ದಾರೆ. 26,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸುಮಾರು 8000ಕ್ಕಿಂತಲೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ.

ಈ ಮುದ್ದುಮರಿಯ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ನೀವು ಇದಕ್ಕೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಎಂದು ಒಬ್ಬ ನಟ್ಟಿಗು ಪ್ರತಿಕ್ರಿಯಿಸಿದ್ದಾರೆ. ಪಾಪ ಚಿಕ್ಕದು ಬೇಗ ತನ್ನ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಅನೇಕರು ಹಾರೈಸಿದ್ಧಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:58 pm, Wed, 19 October 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ