AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವದಿರಿ ಮಾನವರೇ! ಯುದ್ಧಾವೇಶದಲ್ಲಿ ಬ್ರಷ್​ ಉಜ್ಜಿ ಬಟ್ಟೆ ಒಗೆಯುತ್ತಿದ್ದಾರೆ ಪೂರ್ವಜರು

Monkey Washes Clothes : ಆಹಾ ಸೋಪು, ಆಹಾ ನೀರು, ಆಹಾ ಬಟ್ಟೆ! ನೋಡಿ ಮನುಷ್ಯರೇ ಈಗ ರಪರಪನೆ ಬಡಿದು, ಗಸಗಸನೆ ಉಜ್ಜಿ, ಜಾಲಿಸಿಜಾಲಿಸಿ ನಿಮ್ಮನ್ನು ತೊಳೆಯುತ್ತೇನೆ... ಅಂತೀರಾ ಇನ್ನೊಮ್ಮೆ ಮಂಗ ಅಂತ?  

ತಡವದಿರಿ ಮಾನವರೇ! ಯುದ್ಧಾವೇಶದಲ್ಲಿ ಬ್ರಷ್​ ಉಜ್ಜಿ ಬಟ್ಟೆ ಒಗೆಯುತ್ತಿದ್ದಾರೆ ಪೂರ್ವಜರು
Monkey Washes Clothes Using Brush And Soap Netizens in Hysterics
TV9 Web
| Updated By: ಶ್ರೀದೇವಿ ಕಳಸದ|

Updated on: Nov 03, 2022 | 11:50 AM

Share

Viral Video : ಏಯ್​ ಕೋತಿ, ಏಯ್​ ಮಂಗ್ಯಾ, ಏಯ್ ಮುಸುವಾ, ಏಯ್ ಮಂಗ, ಏಯ್​ ಡಿಂಗ್, ಏಯ್​ ಮಂಕೀ, ಏಯ್​ ಬಂದರ್… ನೀವೆಲ್ಲಾ ಸೇರಿ ನಿಮ್ಮನಿಮ್ಮವರನ್ನು ಬಯ್ಯುವುದಕ್ಕೋಸ್ಕರ ನಮ್ಮ ಮರ್ಯಾದೆ ಕಳೆದಿದ್ದು ಸಾಕು. ನಮಗೀಗ ಬಹಳ ಬೇಜಾರಾಗಿದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಒಂದು ಕೋತಂಬರಿ ಎಳೆಯೂ ಸಿಗುತ್ತಿಲ್ಲ. ಅದಕ್ಕಾಗಿ ಅಂಗಡಿಗೆ ಹೋದರೆ ಕಳ್ಳತನದ ಅಪವಾದ ಹೊರಿಸುತ್ತೀರಿ. ನಿಮ್ಮ ಈ ನಡೆಯನ್ನೆಲ್ಲ ನಾವು ಖಂಡಿಸುತ್ತೇವೆ. ಖಂಡಿಸುವುದಷ್ಟೇ ಅಲ್ಲ ಸೇಡು ತೀರಿಸಿಕೊಳ್ಳದೆ ಬಿಡೆವು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by ????? (@ankit_ang_11)

ಎಲ್ಲಿಯಂತ ಹೋಗುವುದು ಈ ಹಗಲಿನಲ್ಲಿ? ಅದಕ್ಕೆ ಧೋಬಿಗಾಟಿಗೆ ಬಂದು ಕುಳಿತಿದ್ದೇನೆ. ಎದುರಿಗೆ ಬಟ್ಟೆಯನ್ನು ಎತ್ತೆತ್ತಿ ಒಗೆಯುತ್ತಿದ್ದಾನೆ ಧೋಬಿಯಣ್ಣ. ಪಾಪ ಕೈ ಸೋತಿರಬೇಕು. ಸಿಗರೇಟು ಹಿಡಿದುಕೊಂಡು ಅತ್ತ ಹೋದ. ಆಹಾ ಸೋಪು, ಆಹಾ ನೀರು, ಆಹಾ ಬಟ್ಟೆ! ನೋಡಿ ಮನುಷ್ಯರೇ ಈಗ ರಪರಪನೆ ಬಡಿದು, ಗಸಗಸನೆ ಉಜ್ಜಿ, ಜಾಲಿಸಿಜಾಲಿಸಿ ನಿಮ್ಮನ್ನು ತೊಳೆಯುತ್ತಿದ್ದೇನೆ… ಅಂತೀರಾ ಇನ್ನೊಮ್ಮೆ ಮಂಗ ಅಂತ?

ಯಾರೋ ಪುಣ್ಯಾತ್ಮ ‘rjkisnaa’ ವಿಡಿಯೋ ಮಾಡಿ ಇನ್​ಸ್ಟಾಗ್ರಾಂಗೂ ಹಾಕಿಬಿಡಿಬೇಕೆ? ಈ ಮೊಬೈಲುಗಳನ್ನು ಎತ್ತೆತ್ತಿ ಒಗೆಯಬೇಕು. ಆಗಲೇ ಈ ಮನುಷ್ಯರಿಗೆ ಬುದ್ಧಿ ಬರುವುದು. 1 ಮಿಲಿಯನ್​ಗಿಂತಲೂ ಹೆಚ್ಚು ಜನ ನನ್ನನ್ನು ನೋಡಿದ್ಧಾರೆ ಬೇರೆ. ಇನ್ನೇನು 1 ಲಕ್ಷವಾಗುತ್ತದೆ ನನ್ನನ್ನು ಇಷ್ಟಪಟ್ಟವರ ಸಂಖ್ಯೆ. ಎಷ್ಟೋ ಜನ ಕಣ್ಣಲ್ಲಿ  ಬಲೂನು ಇಳಿಬಿಟ್ಟುಕೊಂಡು ನಕ್ಕಿದ್ದಾರೆ. ನಗ್ರಿ ನಗ್ರಿ ನೀವೂ ಹೀಗೇ ಒಂದು ದಿನ ನಿಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವ ಕಾಲ ಬೇಗನೇ ಬರುತ್ತದೆ ಮೊಬೈಲುಗಳನ್ನು ಎಸೆದು. ಆಗ ನೀವು ಮಂಗನಾಗುತ್ತೀರಿ, ನಾನಂತೂ ಮನುಷ್ಯನಾಗುವುದಿಲ್ಲಪ್ಪಾ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ