Viral Video: ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಖ್ಯಾತ ಬಾಣಸಿಗ ಗೋರ್ಡನ್ ರಾಮ್​ಸೆ ಅವರ ಕುರಿಮರಿ ಆಯ್ಕೆ

ಕುರಿ ಮರಿಯನ್ನು ವಧೆ ಮಾಡಲು ಉತ್ಸಾಹದಿಂದ ಆಯ್ಕೆ ಮಾಡುತ್ತಿರುವ ಪ್ರಸಿದ್ಧ ಬಾಣಸಿಗ ಗೋರ್ಡನ್ ರಾಮ್‌ಸೆ ಅವರು ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಸ್ಯಹಾರಿ ಮಾತ್ರವಲ್ಲದೆ, ಸಸ್ಯಹಾರಿಯಲ್ಲದವರನ್ನು ಕೂಡ ಕೆರಳಿಸಿದೆ.

Viral Video: ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಖ್ಯಾತ ಬಾಣಸಿಗ ಗೋರ್ಡನ್ ರಾಮ್​ಸೆ ಅವರ ಕುರಿಮರಿ ಆಯ್ಕೆ
ಗೋರ್ಡನ್ ರಾಮ್​ಸೆ
Follow us
| Edited By: Rakesh Nayak Manchi

Updated on:Jul 31, 2022 | 4:18 PM

ಪ್ರಸಿದ್ಧ ಬಾಣಸಿಗ ಗೋರ್ಡನ್ ರಾಮ್‌ಸೆ ಅವರು ಅಪ್​ಲೋಡ್ ಮಾಡಿದ ಪೋಸ್ಟ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕುರಿಮರಿಯನ್ನು ಕೊಂದು ತಿನ್ನಲು ಉತ್ಸುಕತೆಯಿಂದ ಆಯ್ಕೆ ಮಾಡುತ್ತಿರುವ ವಿಡಿಯೋ ಇದಾಗಿದ್ದು, ನೆಟ್ಟಿಗರ ಒಂದು ವರ್ಗವನ್ನು ಕೆರಳಿಸುವಂತೆ ಮಾಡಿದೆ. “ಸವಿಯಾದ ಯಮ್ ಯಮ್. ನಾನು ನಿನ್ನನ್ನು ತಿನ್ನುತ್ತೇನೆ!” ಎಂದು ಹೇಳಿಕೊಂಡು ರಾಮ್​ಸೆ ಪೋಸ್ಟ್ ಮಾಡಿದ್ದರು. ಇದಕ್ಕೆ ಸಸ್ಯಹಾರಿ ಅಲ್ಲದವರು ಕೂಡ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಒಂದಷ್ಟು ಕುರಿಮರಿಗಳನ್ನು ಕೂಡಿ ಹಾಕಿದ್ದ ಸ್ಥಳಕ್ಕೆ ಗೋರ್ಡನ್ ರಾಮ್‌ಸೆ ಅವರು ಬರುತ್ತಾರೆ. ನಂತರ ಅವರು ಅಡ್ಡಲಾಗಿ ಕಟ್ಟಿದ ರಾಡಿನ ಮೇಲೆ ಕುಳಿತುಕೊಂಡು ವಧೆಗೆ ಯಾವ ಕುರಿಯಾದಿತು ಎಂದು ಯೋಚಿಸುತ್ತಾರೆ. ನಂತರ ಒಂದನ್ನು ಆಯ್ಕೆ ಮಾಡಿ ಅದನ್ನು ಹಿಡಿಯಲು ಮುಂದಾದಗ ಕುರಿಗಳು ಹೆದರಿ ಒಂದೆಡೆ ಸೇರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ ನೋಡಿದ ಕೆಲವರು ಅವರ ವರ್ತನೆಗಳಿಂದ ಕೆರಳಿದ್ದು, ದೂಷಿಸಲು ಪ್ರಾರಂಭಿಸಿದ್ದಾರೆ. “ಸರಿ ನಾನು ಸಸ್ಯಾಹಾರಿ ಅಥವಾ ಸಸ್ಯಾಹಾರಿ ಅಲ್ಲ ಆದರೆ ಅದು ಗಡಿಯನ್ನು ದಾಟಿದೆ” ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಅದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, “ನಾನು ಸಸ್ಯಾಹಾರಿ ಅಲ್ಲ ಆದರೆ ಇದು ನನಗೆ ನಿಜವಾಗಿಯೂ ದುಃಖವನ್ನುಂಟುಮಾಡುತ್ತದೆ” ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಸರಿ, ಗೋರ್ಡನ್ ಅಂತಿಮವಾಗಿ ಅದನ್ನು ಕಳೆದುಕೊಂಡಿದ್ದಾನೆ” ಎಂದು ಹೇಳಿಕೊಂಡಿದ್ದಾರೆ.

ಮುಗ್ಧ ಮರಿ ಪ್ರಾಣಿಯನ್ನು ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲದ ಹಿಂಸಾಚಾರ. ಈ ಅನ್ಯಾಯವನ್ನು ಪ್ರಚಾರ ಮಾಡಿದ್ದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಗೋರ್ಡನ್ ಅವರು ಸಸ್ಯಾಹಾರಿಗಳನ್ನು ಅಸಮಾಧಾನಗೊಳಿಸುವುದು ಇದೇ ಮೊದಲಲ್ಲ. 2021 ರಲ್ಲಿ ಬ್ರಿಟಿಷ್ ಟಿಕ್​ಟಾಕ್ ತಾರೆ ದಟ್ ವೆಗಾನ್ ಟೀಚರ್ ದೂಷಿಸಿದ್ದರು. “ಗೋರ್ಡನ್ ರಾಮ್‌ಸೆ ಪ್ರಾಣಿಗಳನ್ನು ತಿನ್ನುವುದು ತಪ್ಪು, ಪ್ರಾಣಿಗಳನ್ನು ನೋಯಿಸುವುದು ತಪ್ಪು ಗೋರ್ಡನ್ ರಾಮ್‌ಸೆ, ಈ ಹಾಡನ್ನು ಹಂಚಿಕೊಳ್ಳಿ ಗೋರ್ಡನ್ ರಾಮ್‌ಸೆ ಎಂದು ಹಾಡಿನ ಮೂಲಕ ಹೇಳಿದ್ದರು.

Published On - 4:16 pm, Sun, 31 July 22

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ