AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಶ್ರೂಮ್ ಸೂಪ್​ನಲ್ಲಿ ಜೀವಂತ ಇಲಿಯನ್ನು ನೋಡಿ ಕಂಗಾಲಾದ ಗ್ರಾಹಕ

ಸೂಪ್ ಆರ್ಡರ್ ಮಾಡಿದ್ದ ಗ್ರಾಹ ದೊಡ್ಡ ಅಣಬೆ ಇರಬೇಕೆಂದುಕೊಂಡು ಸೂಪ್ ಕುಡಿಯಲು ಆರಂಭಿಸಿದ್ದಾರೆ. ಆಗ ಅವರಿಗೆ ಆ ವಸ್ತು ಅಲುಗಾಡುತ್ತಿರುವುದು ಕಂಡಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಇಲಿಮರಿ ಎಂಬುದು ಗೊತ್ತಾಗಿದೆ.

ಮಶ್ರೂಮ್ ಸೂಪ್​ನಲ್ಲಿ ಜೀವಂತ ಇಲಿಯನ್ನು ನೋಡಿ ಕಂಗಾಲಾದ ಗ್ರಾಹಕ
ಸೂಪ್‌
ಸುಷ್ಮಾ ಚಕ್ರೆ
|

Updated on: Sep 05, 2023 | 6:43 PM

Share

ರೆಸ್ಟೋರೆಂಟ್​​ನಲ್ಲಿ ಊಟ ಮಾಡುವಾಗ ಜಿರಲೆ ಸಿಗುವುದು, ನೊಣ, ಕೀಟಗಳು ಸಿಗುವುದು ಇಂತಹ ಕೆಲವು ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ, ಸ್ಯಾಮ್ ಹೇವರ್ಡ್ ಎಂಬ ಇಂಗ್ಲೆಂಡ್ ನಿವಾಸಿಯೊಬ್ಬರು ತಾವು ಆರ್ಡರ್ ಮಾಡಿದ್ದ ಚೈನೀಸ್ ಸೂಪ್‌ನಲ್ಲಿ ಜೀವಂತವಾಗಿದ್ದ ಇಲಿಮರಿಯೊಂದನ್ನು ಕಂಡು ಶಾಕ್ ಆಗಿದ್ದಾರೆ. ಮಶ್ರೂಮ್ ನೂಡಲ್ ಸೂಪ್‌ ಹೋಂ ಡೆಲಿವರಿಗೆ ಆರ್ಡರ್ ಮಾಡಿದ್ದ ಅವರು ಮನೆಗೆ ಬಂದ ಸೂಪ್​ನಲ್ಲಿ ಇಲಿ ಬಿದ್ದಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ಆರಂಭದಲ್ಲಿ ಅವರಿಗೆ ಸೂಪ್​ನಲ್ಲಿ ಇಲಿ ಇರುವುದು ತಿಳಿದಿಲ್ಲ. ದೊಡ್ಡ ಅಣಬೆ ಇರಬೇಕೆಂದುಕೊಂಡು ಸೂಪ್ ಕುಡಿಯಲು ಆರಂಭಿಸಿದ ಅವರಿಗೆ ಆ ವಸ್ತು ಅಲುಗಾಡುತ್ತಿರುವುದು ಕಂಡಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದ್ದಾರೆ. ಆಗ ಸೂಪ್​ನಲ್ಲಿ ಬಾಲ ಕಾಣಿಸಿದೆ. ಅದನ್ನು ಹಿಡಿದು ಮೇಲೆತ್ತಿದಾಗ ಇಲಿಮರಿ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: Viral Video: ಮೊದಲ ಬಾರಿಗೆ ಭಾರತೀಯ ಶೈಲಿಯ ಆಹಾರ ತಿಂದು ಬಾಯಿ ಚಪ್ಪರಿಸಿದ ವಿದೇಶಿ ಮಹಿಳೆ

ಇದರಿಂದ ದಿಗ್ಭ್ರಮೆಗೊಂಡ ಹೇವರ್ಡ್ ಸೂಪ್​ನಲ್ಲಿದ್ದ ಆ ಇಲಿಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಆ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದ್ದಾರೆ. ಸೂಪ್​ನಲ್ಲಿ ಇಲಿ ಸಿಕ್ಕ ವಿಷಯವನ್ನು ಅವರಿಗೆ ತಿಳಿಸಿದ್ದಾರೆ. ಆದರೆ, ಆ ರೆಸ್ಟೋರೆಂಟ್ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿತು. ಅಲ್ಲದೆ, ಹಣವನ್ನು ಮರುಪಾವತಿ ಮಾಡಲು ನಿರಾಕರಿಸಿತು.

ಇದನ್ನೂ ಓದಿ: Winter Soups: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟು, ರೋಗಗಳಿಂದ ನಿಮ್ಮನ್ನು ರಕ್ಷಿಸುವ ಈ ಸೂಪ್​ಗಳನ್ನು ಒಮ್ಮೆ ಟ್ರೈ ಮಾಡಿ

ಅವರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದರಿಂದ ಆನ್​ಲೈನ್​ನಲ್ಲಿ ಹಣ ಪಾವತಿಸಿದ ದಾಖಲೆ ಇರಲಿಲ್ಲ. ಅವರ ಬಳಿ ರಶೀದಿ ಕೂಡ ಇರಲಿಲ್ಲ. ಇದರಿಂದಾಗಿ ಅವರಿಗೆ ಅವರು ಪಾವತಿ ಮಾಡಿದ ಹಣ ವಾಪಾಸ್ ಸಿಗಲಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ