AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದು ವರ್ಷದ ಬಾಲೆಯ ಮೇಲೆ ರಾಕ್ಷಸಿ ಕೃತ್ಯ ಎಸಗಿದ ಪಾಪಿ ತಾಯಿ; ವಿಡಿಯೋಗಳು ವೈರಲ್

ರಾಕ್ಷಸಿ ಪ್ರವೃತ್ತಿ ಹೊಂದಿರುವ ತಾಯಿಯೊಬ್ಬಳು ತನ್ನ 1 ವರ್ಷದ ಮಗಳನ್ನು ಜೌಗು ಪ್ರದೇಶಕ್ಕೆ ಎಸೆದಿದ್ದಲ್ಲದೆ ಅಂಗಳದಲ್ಲಿ ಚಪ್ಪಲಿಯಿಂದ ಮನಸೋ ಇಚ್ಛೆ ಥಳಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ. ಪ್ರಕರಣ ಸಂಬಂಧ ಮಹಿಳೆ ವಿರುದ್ಧ ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Viral Video: ಒಂದು ವರ್ಷದ ಬಾಲೆಯ ಮೇಲೆ ರಾಕ್ಷಸಿ ಕೃತ್ಯ ಎಸಗಿದ ಪಾಪಿ ತಾಯಿ; ವಿಡಿಯೋಗಳು ವೈರಲ್
ಮಗುವಿನ ಮೇಲೆ ಹಲ್ಲೆ ನಡೆಸುತ್ತಿರುವ ತಾಯಿ
TV9 Web
| Edited By: |

Updated on:Jul 29, 2022 | 10:00 AM

Share

ವೈರಲ್ ವಿಡಿಯೋ: ಹೆತ್ತ ತಾಯಿ ದೇವರಿಗೆ ಸಮ, ತಾಯಿಯೇ ದೇವರು ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ಸತ್ಯ. ಆದರೆ ಕೆಲವು ತಾಯಂದಿರು ರಾಕ್ಷಸಿ ಪ್ರವೃತ್ತಿ ಹೊಂದಿರುತ್ತಾರೆ. ಮಕ್ಕಳಿಗೆ ಮನಬಂದಂತೆ ಥಳಿಸುವುದು, ಚಿತ್ರಹಿಂಸೆ ನೀಡುವುದು, ಹತ್ಯೆ ಮಾಡುವುದು, ಕೋಪದಿಂದ ಎಸೆಯುವುದು ಇತ್ಯಾದಿ ಹೇಯ ಕೃತ್ಯಗಳನ್ನು ಎಸಗುವ ವಿಡಿಯೋಗಳನ್ನು ನೋಡಿದ್ದೀರಿ. ಇದೀಗ ಅಂತಹದ್ದೇ ಒಂದು ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನಿಮ್ಮ ಬಾಯಲ್ಲಿ ಅಯ್ಯೋ ದೇವರೇ… ಇವಳೆಂಥ ತಾಯಿ? ಎಂದು ಹೇಳದೆ ಇರಲಾರರು. ಅಷ್ಟಕ್ಕೂ ರಾಕ್ಷಸಿ ಮನಸ್ಥಿತಿಯ ಆ ತಾಯಿ ತನ್ನ ಸಣ್ಣ ಮಗುವನ್ನು ಜೌಗು ಪ್ರದೇಶಕ್ಕೆ ಎಸೆಯುತ್ತಾಳೆ. ನಂತರ ಅಂಗಳದಲ್ಲಿ ಚಪ್ಪಲಿಯಿಂದ ಮನಬಂದಂತೆ ರಪಾ ರಪಾ ಅಂತ ಥಳಿಸುವುದನ್ನು ವೈರಲ್ ವಿಡಿಯೋಗಳು (Viral Videos) ತೋರಿಸುತ್ತವೆ.

ಉತ್ತರಪ್ರದೇಶದ ಹಾಪುರ್ ಬಳಿ ಮಹಿಳೆಯೊಬ್ಬರು ತನ್ನ 1 ವರ್ಷದ ಮಗಳ ಮೇಲೆ ಹಲ್ಲೆ ನಡೆಸಿದ್ದು, ಇದರ ಎರಡು ವಿಡಿಯೋ ಕ್ಲಿಪ್​ಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊದಲ ವಿಡಿಯೋದಲ್ಲಿ ಮಗುವನ್ನು ಜೌಗು ಪ್ರದೇಶಕ್ಕೆ ಎಸೆಯುತ್ತಾಳೆ. ಎರಡನೇ ಕ್ಲಿಪ್​ನಲ್ಲಿ ಮಗು ಕಾಂಕ್ರೀಟ್ ನೆಲದ ಮೇಲೆ ತೆವಳುತ್ತಿರುವಾ ಮಹಿಳೆಯು ಚಪ್ಪಳಿಯಿಂದ ಮನಸೋ ಇಚ್ಛೆ ಥಳಿಸುವುದನ್ನು ಕಾಣಬಹುದು.

ಈ ವಿಡಿಯೋಗಳು ಜಸ್ರೂಪ್ ನಗರ ಗ್ರಾಮದಿಂದ ಬಂದಿದ್ದು, ಸಾಮಾನ್ಯವಾಗಿ ಸ್ಥಳೀಯ ಸುದ್ದಿಗಳನ್ನು ಹೊಂದಿರುವ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಾಗ ಗಮನಕ್ಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75 (ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಯನ್ನು ಸಬ್​ಇನ್ಸ್ಪೆಕ್ಟರ್​ಗೆ ವಹಿಸಲಾಗಿದೆ.

Published On - 10:00 am, Fri, 29 July 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್