‘ಈ ಯುವತಿಯನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ’; ವೈರಲ್​​ ಪೋಸ್ಟ್​​

ಚೀನಾದಲ್ಲಿ, ವಾಂಗ್ ಫೂ ಕ್ಸಿಯಾಂಗ್ ಅಂದರೆ ಅದೃಷ್ಟದ ಮುಖವು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರ ಪ್ರಕಾರ, ದುಂಡಗಿನ ಗಲ್ಲದ ಜೊತೆಗೆ ಅಗಲವಾದ ಹಣೆ ಮತ್ತು ದುಂಡಗಿನ ಮುಖವನ್ನು ಹೊಂದಿರುವ ಹುಡುಗಿಯರನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ ಎಂದು ನಂಬಲಾಗಿದೆ.

'ಈ ಯುವತಿಯನ್ನು ಮದುವೆಯಾದ ಪುರುಷನ ಅದೃಷ್ಟವೇ ಬದಲಾಗಲಿದೆ'; ವೈರಲ್​​ ಪೋಸ್ಟ್​​
Follow us
|

Updated on:Mar 22, 2024 | 6:23 PM

ಚೀನಾದ ಯುವತಿಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಹುಡುಗಿಗೆ 29 ವರ್ಷ ಮತ್ತು ಹೆನಾನ್ ಪ್ರಾಂತ್ಯದ ನಿವಾಸಿ. ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ನಂಬಿಕೆಗಳನ್ನು ಆಚರಿಸಿಕೊಂಡು ಬರಲಾಗುತ್ತದೆ. ಅದರಂತೆಯೇ ಚೀನಾದಲ್ಲಿಯೂ ಕೂಡ ಪುರುಷರ ಅದೃಷ್ಟವನ್ನು ಆತನನ್ನು ಮದುವೆಯಾಗುವ ಯುವತಿಯ ಮುಖದ ಆಕಾರದ ಆಧಾರದ ಮೇಲೆ ಹೇಳಲಾಗುತ್ತದೆ. ಅದರಂತೆ ಇದೀಗಾ ಇತ್ತೀಚೆಗೆ ಸುದ್ದಿಯಲ್ಲಿರುವ ಈ ಯುವತಿಯ ಮುಖದ ಆಕಾರದ ಆಧಾರದ ಮೇಲೆ ಭವಿಷ್ಯ ನುಡಿಯಲಾಗಿದ್ದು, ಈ ಯುವತಿಗೆ ದೇವರ ಇಂತಹ ಮುಖವನ್ನು ಕೊಟ್ಟಿದ್ದಾನೆ ಎಂದು ಅಲ್ಲಿನ ಜನರು ನಂಬುತ್ತಾರೆ. ಯಾಕೆಂದರೆ ಈ ಯುವತಿಯನ್ನು ಮದುವೆಯಾದವನು ಶ್ರೀಮಂತನಾಗುತ್ತಾನೆ ಎಂದು ನಂಬಲಾಗಿದೆ.

ಈ ಯುವತಿ ಜನವರಿಯಲ್ಲಿ ಹಂಚಿಕೊಂಡಿರುವ ಆಕೆಯ ವಿಡಿಯೋಗೆ ಇದುವರೆಗೆ 5 ಲಕ್ಷ 70 ಸಾವಿರ ನೆಟ್ಟಿಗರು ಲೈಕ್​ ಮಾಡಿದ್ದಾರೆ. ಇದಲ್ಲದೇ , 76 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. ಈ ರೀತಿಯ ಮುಖವನ್ನು ಹೊಂದಿರುವ ಹುಡುಗಿಯರು ತಮ್ಮ ಭವಿಷ್ಯದ ಗಂಡನ ಜೀವನದಲ್ಲಿ ಅದೃಷ್ಟವನ್ನು ತರುತ್ತಾಳೆ ಎಂದು ಜನರು ಹೇಳುತ್ತಾರೆ.

ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು

ಅಷ್ಟಕ್ಕೂ ಹುಡುಗಿಯ ಮುಖದಲ್ಲಿ ಏನಿದೆ ವಿಶೇಷ?

ಚೀನಾದಲ್ಲಿ, ವಾಂಗ್ ಫೂ ಕ್ಸಿಯಾಂಗ್ ಅಂದರೆ ಅದೃಷ್ಟದ ಮುಖವು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರ ಪ್ರಕಾರ, ದುಂಡಗಿನ ಗಲ್ಲದ ಜೊತೆಗೆ ಅಗಲವಾದ ಹಣೆ ಮತ್ತು ದುಂಡಗಿನ ಮುಖವನ್ನು ಹೊಂದಿರುವ ಹುಡುಗಿಯರು ದಯೆ ಮತ್ತು ತಮ್ಮ ಗಂಡನನ್ನು ಶ್ರೀಮಂತರಾನ್ನಾಗಿ ಮಾಡುತ್ತಾರೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಅವರ ಮೂಗು ದುಂಡಾಗಿರಬೇಕು ಮತ್ತು ಉದ್ದವಾಗಿರಬೇಕು ಮತ್ತು ಮೂಗು ಮುಂಭಾಗದಿಂದ ನೇರವಾಗಿರಬೇಕು. ಕೆಳಗಿನ ತುಟಿ ಸ್ವಲ್ಪ ದಪ್ಪವಾಗಿರಬೇಕು, ಕಣ್ಣುಗಳು ಹೊಳೆಯಬೇಕು ಮತ್ತು ಕೂದಲು ಮೃದುವಾಗಿರಬೇಕು, ಅಂತಹ ಹುಡುಗಿಯರು ಅದೃಷ್ಟವನ್ನು ತರುತ್ತಾರೆ ಎಂಬ ನಂಬಿಕೆಯಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Fri, 22 March 24

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ