AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದ ಟಾಯ್ಲೆಟ್​ ತ್ಯಾಜ್ಯವನ್ನು ಗಾಳಿಯಲ್ಲೇ ಎಸೀತಾರಾ? ಹಾಗಾದ್ರೆ ಅದು ಎಲ್ಲಿಗೆ ಹೋಗುತ್ತೆ? ಕುತೂಹಲಕಾರಿ ಸತ್ಯ ಇಲ್ಲಿದೆ

ವಿಮಾನದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಆ ತ್ಯಾಜ್ಯ ಗಾಳಿಯಲ್ಲೇ ಹಾರಿ ಹೋಗುತ್ತದಾ? ಅಷ್ಟೊಂದು ಜನರನ್ನು ಹೊತ್ತ ವಿಮಾನ ಆ ತ್ಯಾಜ್ಯವನ್ನೆಲ್ಲಾ ಎಲ್ಲಿ ವಿಸರ್ಜಿಸುತ್ತದೆ? ಎಂಬ ಹಲವು ವರ್ಷಗಳ ಕುತೂಹಲಕಾರಿ ಪ್ರಶ್ನೆಗೆ ಅಸಲಿ ಉತ್ತರವನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ವಿಮಾನದ ಟಾಯ್ಲೆಟ್​ ತ್ಯಾಜ್ಯವನ್ನು ಗಾಳಿಯಲ್ಲೇ ಎಸೀತಾರಾ? ಹಾಗಾದ್ರೆ ಅದು ಎಲ್ಲಿಗೆ ಹೋಗುತ್ತೆ? ಕುತೂಹಲಕಾರಿ ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on: May 17, 2021 | 1:33 PM

Share

ವಿಮಾನಯಾನ ಸುರಕ್ಷಿತ ಹಾಗೂ ಸುಂದರ ಅನುಭೂತಿಯನ್ನು ನೀಡುವ ಪಯಣ ಎನ್ನುವುದು ಸತ್ಯವಾದರೂ ಅದರ ಜತೆಗೆ ಇಂದಿಗೂ ಹಲವು ಕಲ್ಪನೆಗಳು, ಊಹಾಪೋಹಗಳು, ಕುತೂಹಲಗಳು ವಿಮಾನದ ರೆಕ್ಕೆಯಂತೆಯೇ ನಮ್ಮೆಲ್ಲರ ಮನಸ್ಸಿನಲ್ಲಿ ಚಾಚಿಕೊಂಡಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿಮಾನ ನಿಲ್ದಾಣಗಳುಳ್ಳ ನಗರ ಪ್ರದೇಶದಲ್ಲಿ ಜನಿಸಿದವರ ಹೊರತಾಗಿ ಬಹುತೇಕರು ಆಗಸದಲ್ಲಿ ಹಾರುವ ಹಕ್ಕಿಯಷ್ಟಗಲದ ವಿಮಾನವನ್ನು ನೋಡಿರುವುದೇ ಹೆಚ್ಚು. ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ವಿಮಾನದ ಸದ್ದು ಕೇಳಿದರೆ ಮಕ್ಕಳಾದಿಯಾಗಿ ಎಲ್ಲರೂ ಮನೆಯಿಂದ ಆಚೆ ಬಂದು ಕತ್ತೆತ್ತಿ ಆಕಾಶದಲ್ಲಿ ಕಾಣುವ ಪುಟ್ಟ ವಿಮಾನಕ್ಕೆ ಹುಡುಕಾಡುತ್ತಾರೆ. ಆ ಸಂಭ್ರಮವನ್ನು ವಿಮಾನದಲ್ಲಿ ಓಡಾಡುವವರಿಗೆ ಹೇಳಲಿಕ್ಕಾಗುವುದಿಲ್ಲ ಬಿಡಿ! ವಿಮಾನದ ಶಬ್ಧ ಕೇಳಿದ್ದಕ್ಕಿಂತ ಮುಂದೆ ನೋಡಿದರೆ ವಿಮಾನ ಕಾಣುತ್ತದೆ ಎಂಬ ಲೆಕ್ಕಾಚಾರದಿಂದ ಹಿಡಿದು, ಮುಖವೆತ್ತಿ ಮೇಲೆ ನೋಡುವಾಗ ವಿಮಾನದಲ್ಲಿದ್ದವರು ಮಲ, ಮೂತ್ರ ವಿಸರ್ಜನೆ ಮಾಡಿದರೆ ನಮ್ಮ ಮೈಮೇಲೆ ಬೀಳುವುದಿಲ್ಲವಾ ಎಂಬ ಮುಗ್ಧತೆಯ ತನಕ ಒಂದೊಂದೇ ಕುತೂಹಲಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಅಸಲಿಗೆ ಈ ಪ್ರಶ್ನೆ ತುಂಟಾಟದ್ದೆನಿಸಿದರೂ ವಿಮಾನದಲ್ಲಿ ಓಡಾಡುವ ಹಲವರಿಗೆ ಇದರ ಉತ್ತರ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ವಿಮಾನದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಆ ತ್ಯಾಜ್ಯ ಗಾಳಿಯಲ್ಲೇ ಹಾರಿ ಹೋಗುತ್ತದಾ? ಅಷ್ಟೊಂದು ಜನರನ್ನು ಹೊತ್ತ ವಿಮಾನ ಆ ತ್ಯಾಜ್ಯವನ್ನೆಲ್ಲಾ ಎಲ್ಲಿ ವಿಸರ್ಜಿಸುತ್ತದೆ? ಎಂಬ ಹಲವು ವರ್ಷಗಳ ಕುತೂಹಲಕಾರಿ ಪ್ರಶ್ನೆಗೆ ಅಸಲಿ ಉತ್ತರವನ್ನು ನಿಮಗಾಗಿ ಹೊತ್ತು ತಂದಿದ್ದೇವೆ.

ವಿಮಾನದಲ್ಲಿ ವಿಸರ್ಜಿಸಲ್ಪಟ್ಟ ಮನುಷ್ಯ ತ್ಯಾಜ್ಯ ಎಲ್ಲಿ ಹೋಗುತ್ತದೆ ಎನ್ನುವುದಕ್ಕಿಂತ ಮೊದಲು ಅದು ಗಾಳಿಯಲ್ಲಿ ತೇಲಿಬಂದು ಭೂಮಿಗೆ ಬೀಳುವುದಿಲ್ಲ ಎನ್ನುವುದನ್ನಂತೂ ಸ್ಪಷ್ಟಪಡಿಸಿಬಿಡುತ್ತೇವೆ. ಆಕಾಶದಲ್ಲಿ ಹಾರುವ ಕಾಗೆಯೋ, ಬೆಳಕ್ಕಿಯೋ ಅಪ್ಪಿತಪ್ಪಿ ಹಿಕ್ಕೆ ಹಾಕಿದರೆ ತಲೆ ಮೇಲೆ ಬೀಳಬಹುದೆಂಬ ಭಯ ವಿಮಾನದ ವಿಚಾರದಲ್ಲಿ ಬೇಕಿಲ್ಲ. ಪ್ರಯಾಣಿಕರು ವಿಸರ್ಜಿಸಿದ ತ್ಯಾಜ್ಯವೆಲ್ಲಾ ವಿಮಾನದ ಟ್ಯಾಂಕ್ ಒಂದರಲ್ಲಿ ಶೇಖರಿಸಲ್ಪಡುವ ವ್ಯವಸ್ಥೆ ಇರುವುದರಿಂದ ಆಕಾಶದಲ್ಲಿ ಹೋಗುಹೋಗುತ್ತಲೇ ಉದುರಿಸಿಕೊಂಡು ಹೋಗುವ ಪ್ರಮೇಯ ವಿಮಾನಕ್ಕೆ ಬರುವುದಿಲ್ಲ.

ಈಗಂತೂ ಬಹುತೇಕ ವಿಮಾನಗಳಲ್ಲಿ ವ್ಯಾಕ್ಯೂಮ್ ಸೌಲಭ್ಯ ಇರುವುದರಿಂದ ನೀರಿನ ಬಳಕೆ ಇರುವುದಿಲ್ಲ. ಅಂದರೆ, ಕಮೋಡ್​ನಿಂದ ವಿಸರ್ಜಿಸಲ್ಪಟ್ಟ ತ್ಯಾಜ್ಯ ವ್ಯಾಕ್ಯೂಮ್ ಸಹಾಯದಿಂದ ನೇರವಾಗಿ ಶೇಖರಣಾ ಟ್ಯಾಂಕ್​ಗೆ ಹೋಗುತ್ತದೆ. ಅಲ್ಲಿ ಘನ ಹಾಗೂ ದ್ರವ ರೂಪದ ತ್ಯಾಜ್ಯಗಳು ಬೇರ್ಪಡುವ ವ್ಯವಸ್ಥಿತ ತಂತ್ರಜ್ಞಾನವೂ ಇದ್ದು, ಪ್ರಯಾಣಿಕರು ವಿಸರ್ಜಿಸಿದ ಮಲ, ಮೂತ್ರಾದಿಗಳು ಅಲ್ಲಿಗೆ ಹೋಗುತ್ತವೆ. ಈ ವಿಮಾನದ ಟ್ಯಾಂಕ್​ಗಳು 200ಲೀಟರ್​ಗೂ ಅಧಿಕ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಕಾರಣ ಅವು ಭರ್ತಿಯಾಗುವ ಸಾಧ್ಯತೆ ಇರುವುದಿಲ್ಲ.

ಪ್ರಯಾಣದ ಸಂದರ್ಭದಲ್ಲಿ ಒಂದೆಡೆ ಶೇಖರಿಸಲ್ಪಟ್ಟ ತ್ಯಾಜ್ಯಗಳನ್ನೆಲ್ಲಾ ವಿಮಾನ ನಿಲ್ದಾಣಕ್ಕೆ ತಲುಪಿದ ನಂತರ ಖಾಲಿ ಮಾಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿ ವಿಮಾನದ ಟ್ಯಾಂಕ್​ಗೆ ಪೈಪ್​ ಒಂದನ್ನು ಜೋಡಿಸಿ ಅದು ನಿಲ್ದಾಣದ ಇನ್ನೊಂದು ಜಾಗಕ್ಕೆ ವರ್ಗವಾಗುವಂತೆ ಮಾಡುತ್ತಾರೆ. ಇದೆಲ್ಲಾ ಕೆಲವೇ ಕೆಲವು ನಿಮಿಷಗಳಲ್ಲಿ ಆಗಿಹೋಗುವ ಕೆಲಸವಾಗಿದ್ದು, ಖಾಲಿ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಲಾಗುತ್ತದೆ. ಇತ್ತೀಚೆಗೆ ಆಧುನಿಕ ಸೌಲಭ್ಯಗಳು ಬಂದ ನಂತರ ಇದರ ನಿರ್ವಹಣೆ ಇನ್ನೂ ಸುಲಭವಾದ ಕಾರಣ ಬಹುತೇಕ ಯಾಂತ್ರಿಕವಾಗಿಯೇ ಮಾಡಲಾಗುತ್ತದೆ.

ಇದು ವಿಮಾನದಲ್ಲಿ ತ್ಯಾಜ್ಯ ವಿಸರ್ಜನೆಗೆ ಇರುವ ಕ್ರಮಬದ್ಧ ಮಾರ್ಗವಾಗಿದ್ದು, ಇನ್ನುಮುಂದೆ ಯಾರಾದರೂ ಗಾಳಿಯಲ್ಲಿ ಹೋಗುವಾಗ ವಿಮಾನದಿಂದ ತ್ಯಾಜ್ಯ ಹೊರಬೀಳುತ್ತದಾ ಎಂಬ ಅನುಮಾನ ವ್ಯಕ್ತಪಡಿಸಿದರೆ ನೀವು ಈ ಉತ್ತರ ನೀಡುವ ಮೂಲಕ ಸಂದೇಹ ನಿವಾರಿಸಬಹುದು.

ಇದನ್ನೂ ಓದಿ: ಮನೆಯಲ್ಲಿದ್ದ ಚಿನ್ನಾಭರಣವನ್ನ ತ್ಯಾಜ್ಯಕ್ಕೆ ಎಸೆದು.. ನಂತ್ರ ಕಸದ ಲಾರಿ ಹಿಂದೆ ಓಡಿದ ಮಹಿಳೆ, ಮುಂದೇನಾಯ್ತು?

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ