AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ​​ ಈಕೆಯ ಆಹಾರ

ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕೆನ್​ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ.

ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ​​ ಈಕೆಯ ಆಹಾರ
ಸಮ್ಮರ್​ ಮನ್ರೋ
TV9 Web
| Edited By: |

Updated on: Mar 09, 2022 | 4:56 PM

Share

ಕೆಲವರಿಗೆ ನೀರು, ಬೆಂಕಿ ಕಂಡರೆ ಭಯ ಇರುತ್ತದೆ. ಇದನ್ನು ಫೋಬಿಯಾ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. ಹೌದು, 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕನ್​ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ವೈರಲ್​ ಆಗಿದೆ.

ಸಮ್ಮರ್​ ಮನ್ರೋ ಎನ್ನುವ ಯುವತಿ ಯುಕೆಯ ಕ್ಯಾಂಬ್ರಿಡ್ಜ್​ ಮೂಲದವಳು. ಈಕೆ ಆಹಾರವನ್ನು ನಿರ್ಬಂಧಿಸುವ ಕಾಯಿಲೆಯನ್ನು ಹೊಂದಿದ್ದಳು ಇದನ್ನು avoidant restrictive food intake disorder  ಎಂದು ಕರೆಯುತ್ತಾರೆ.  ಸಮ್ಮರ್​ ಮೂರು ವರ್ಷದವಳಿದ್ದಾಗ ಹಿಸುಕಿದ ಆಲೂಗಡ್ಡೆ ತಿನ್ನಲು ಒತ್ತಾಯಿಸಿದ್ದಕ್ಕಾಗಿ ಆಹಾರ ಫೋಬಿಯಾಗೆ ತುತ್ತಾದಳು ಎನ್ನಲಾಗಿದ್ದು,  ಈಗ, ಅವಳು ಚಿಕನ್​ಗಳನ್ನು ಮಾತ್ರ ತಿಂದು ಬದುಕುತ್ತಿದ್ದಾಳೆ.  ಹಣ್ಣುಗಳು ಮತ್ತು ತರಕಾರಿಗಳನ್ನು ಹತ್ತಿರದಿಂದ ನೋಡಿದರೂ ಆಕೆಅನಾರೋಗ್ಯಕ್ಕೆ ಒಳಗಾಗುತ್ತಾಳಂತೆ.

ಈ ಕುರಿತು ಸಮ್ಮರ್​ ಹೇಳಿಕೊಂಡಿದ್ದು, ನಾನು ತರಕಾರಿಗಳನ್ನು ಯಾವಾಗ ಸೇವಿದ್ದೇನೆ ಎನ್ನುವುದೇ ನೆನಪಿಲ್ಲ. ನೆಗೆಟ್​ಗಳನ್ನೇ ಸೇವಿಸಿ ಬದುಕುತ್ತಿದ್ದೇನೆ. ಇದರಿಂದ ನನ್ನ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಅದನ್ನು ನಿಭಾಯಿಸುತ್ತೇನೆ. ಬೇರೆಯವರು ಊಟದ ವೇಳೆ ಸಲಾಡ್​ಗಳನ್ನು ತಿನ್ನುತ್ತಿರುವಾಗ. ನಾನು ಅದನ್ನು ತಿನ್ನಲು ಪ್ರಯತ್ನಿಸಿಲ್ಲ. ಏಕೆಂದರೆ ಆರೋಗ್ಯ ಹದಗೆಡಬಹುದು ಎನ್ನುವ ಭಯ ಕಾಡುತ್ತದೆ. ಚಿಕೆನ್​ ನೆಗೆಟ್​ ಕೂಡ ಗರಿಗರಿಯಾಗಿದ್ದರೆ ಮಾತ್ರ ತಿನ್ನುತ್ತೇನೆ . ಈ ಫೋಬಿಯಾಕ್ಕೆ ನನ್ನ ಸಂಗಾತಿ ಕೂಡ ಸಪೋರ್ಟಿವ್​ ಆಗಿ ಇದ್ದಾರೆ. ಹಣ್ಣು, ತರಕಾರಿ ತಿನ್ನಲು ಒತ್ತಾಯಿಸುವುದಿಲ್ಲ ಎಂದು ಡೈಲಿ ಮೇಲ್​ ಗೆ ಹೇಳಿಕೆ ನೀಡಿದ್ದಾಳೆ.

ಕಳೆದ ವರ್ಷ, ಚಿಕನ್​ ನೆಗೆಟ್​ನಲ್ಲಿ ರಕ್ತನಾಳ ಕಾಣಿಸಿಕೊಂಡ ಕಾರಣ, ಅವಳು ಮೂರು ತಿಂಗಳ ಕಾಲ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದಳು. ಆ ಸಮಯದಲ್ಲಿ ಅವಳು ಕೇವಲ ಕ್ರಿಪ್ಸ್‌ ಮಾತ್ರ ಸೇವಿಸುತ್ತಿದ್ದಳು ಎಂದು ಟೈಮ್ಸ್​ ನೌನ ವರದಿ ತಿಳಿಸಿದೆ.

ಇದನ್ನೂ ಓದಿ:

1915 ರಲ್ಲಿ ನಾಪತ್ತೆಯಾಗಿದ್ದ ಅರ್ನೆಸ್ಟ್ ಶಾಕಲ್ಟನ್ ಅವರ ಹಡಗು ಪತ್ತೆ

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ