AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ​​ ಈಕೆಯ ಆಹಾರ

ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕೆನ್​ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ.

ಈ ಯುವತಿಗೆ ಹಣ್ಣು,ತರಕಾರಿಗಳ ಫೋಬಿಯಾ: 22 ವರ್ಷಗಳಿಂದ ಚಿಕನ್ ನೆಗೆಟ್ ಮಾತ್ರ​​ ಈಕೆಯ ಆಹಾರ
ಸಮ್ಮರ್​ ಮನ್ರೋ
TV9 Web
| Edited By: |

Updated on: Mar 09, 2022 | 4:56 PM

Share

ಕೆಲವರಿಗೆ ನೀರು, ಬೆಂಕಿ ಕಂಡರೆ ಭಯ ಇರುತ್ತದೆ. ಇದನ್ನು ಫೋಬಿಯಾ ಎನ್ನುತ್ತಾರೆ. ಆದರೆ ಇಲ್ಲೊಬ್ಬಳು ಯುವತಿಗೆ ಹಣ್ಣು ಮತ್ತು ತರಕಾರಿಯ ಫೋಬಿಯಾವಿದೆಯಂತೆ. ಹೌದು, 25 ವರ್ಷದ ಈ ಯುವತಿ ಕಳೆದ 22 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಸೇವಿಸದೆ ಕೇವಲ ಚಿಕನ್​ ನೆಗೆಟ್ ಸೇವಿಸಿ ಬದುಕುತ್ತಿದ್ದಾಳೆ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ವೈರಲ್​ ಆಗಿದೆ.

ಸಮ್ಮರ್​ ಮನ್ರೋ ಎನ್ನುವ ಯುವತಿ ಯುಕೆಯ ಕ್ಯಾಂಬ್ರಿಡ್ಜ್​ ಮೂಲದವಳು. ಈಕೆ ಆಹಾರವನ್ನು ನಿರ್ಬಂಧಿಸುವ ಕಾಯಿಲೆಯನ್ನು ಹೊಂದಿದ್ದಳು ಇದನ್ನು avoidant restrictive food intake disorder  ಎಂದು ಕರೆಯುತ್ತಾರೆ.  ಸಮ್ಮರ್​ ಮೂರು ವರ್ಷದವಳಿದ್ದಾಗ ಹಿಸುಕಿದ ಆಲೂಗಡ್ಡೆ ತಿನ್ನಲು ಒತ್ತಾಯಿಸಿದ್ದಕ್ಕಾಗಿ ಆಹಾರ ಫೋಬಿಯಾಗೆ ತುತ್ತಾದಳು ಎನ್ನಲಾಗಿದ್ದು,  ಈಗ, ಅವಳು ಚಿಕನ್​ಗಳನ್ನು ಮಾತ್ರ ತಿಂದು ಬದುಕುತ್ತಿದ್ದಾಳೆ.  ಹಣ್ಣುಗಳು ಮತ್ತು ತರಕಾರಿಗಳನ್ನು ಹತ್ತಿರದಿಂದ ನೋಡಿದರೂ ಆಕೆಅನಾರೋಗ್ಯಕ್ಕೆ ಒಳಗಾಗುತ್ತಾಳಂತೆ.

ಈ ಕುರಿತು ಸಮ್ಮರ್​ ಹೇಳಿಕೊಂಡಿದ್ದು, ನಾನು ತರಕಾರಿಗಳನ್ನು ಯಾವಾಗ ಸೇವಿದ್ದೇನೆ ಎನ್ನುವುದೇ ನೆನಪಿಲ್ಲ. ನೆಗೆಟ್​ಗಳನ್ನೇ ಸೇವಿಸಿ ಬದುಕುತ್ತಿದ್ದೇನೆ. ಇದರಿಂದ ನನ್ನ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಅದನ್ನು ನಿಭಾಯಿಸುತ್ತೇನೆ. ಬೇರೆಯವರು ಊಟದ ವೇಳೆ ಸಲಾಡ್​ಗಳನ್ನು ತಿನ್ನುತ್ತಿರುವಾಗ. ನಾನು ಅದನ್ನು ತಿನ್ನಲು ಪ್ರಯತ್ನಿಸಿಲ್ಲ. ಏಕೆಂದರೆ ಆರೋಗ್ಯ ಹದಗೆಡಬಹುದು ಎನ್ನುವ ಭಯ ಕಾಡುತ್ತದೆ. ಚಿಕೆನ್​ ನೆಗೆಟ್​ ಕೂಡ ಗರಿಗರಿಯಾಗಿದ್ದರೆ ಮಾತ್ರ ತಿನ್ನುತ್ತೇನೆ . ಈ ಫೋಬಿಯಾಕ್ಕೆ ನನ್ನ ಸಂಗಾತಿ ಕೂಡ ಸಪೋರ್ಟಿವ್​ ಆಗಿ ಇದ್ದಾರೆ. ಹಣ್ಣು, ತರಕಾರಿ ತಿನ್ನಲು ಒತ್ತಾಯಿಸುವುದಿಲ್ಲ ಎಂದು ಡೈಲಿ ಮೇಲ್​ ಗೆ ಹೇಳಿಕೆ ನೀಡಿದ್ದಾಳೆ.

ಕಳೆದ ವರ್ಷ, ಚಿಕನ್​ ನೆಗೆಟ್​ನಲ್ಲಿ ರಕ್ತನಾಳ ಕಾಣಿಸಿಕೊಂಡ ಕಾರಣ, ಅವಳು ಮೂರು ತಿಂಗಳ ಕಾಲ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದಳು. ಆ ಸಮಯದಲ್ಲಿ ಅವಳು ಕೇವಲ ಕ್ರಿಪ್ಸ್‌ ಮಾತ್ರ ಸೇವಿಸುತ್ತಿದ್ದಳು ಎಂದು ಟೈಮ್ಸ್​ ನೌನ ವರದಿ ತಿಳಿಸಿದೆ.

ಇದನ್ನೂ ಓದಿ:

1915 ರಲ್ಲಿ ನಾಪತ್ತೆಯಾಗಿದ್ದ ಅರ್ನೆಸ್ಟ್ ಶಾಕಲ್ಟನ್ ಅವರ ಹಡಗು ಪತ್ತೆ

ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
ಹೊಸ ರೂಪದ ಮೈಸೂರು ಸ್ಯಾಂಡಲ್ ಸೋಪ್ ಬಿಡುಗಡೆ ಮಾಡಿದ ತಮನ್ನಾ ಭಾಟಿಯಾ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲಿ ಮಾತು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿಯ ಗಂಧದ ಮರ ಕಡಿದು ರೈತ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲಿ ಲವ್ ಜಿಹಾದ್
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ