AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಜಿಮ್​ ಸಲಕರಣೆಯಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ, ಸ್ಮಾರ್ಟ್​ವಾಚ್​ ಮೂಲಕ 911ಗೆ ಕರೆ

Woman Stuck in Gym : ಬೆಳಗಿನ ಜಾವ 3ರ ಹೊತ್ತು. ಜಿಮ್​ ಮಶೀನ್​ನಲ್ಲಿ ಈಕೆ ತಲೆಕೆಳಗಾಗಿ ಸಿಲುಕಿಕೊಂಡಿದ್ಧಾರೆ. ಎಷ್ಟು ಕೂಗಿದರೂ ಸಹಾಯಕಿಗೆ ಕೇಳುತ್ತಿಲ್ಲ. ಆಗ ದಾರಿಗಾಣದೆ ತುರ್ತು ಸಹಾಯಕ್ಕೆ ಮೊರೆ ಹೋಗಿದ್ದಾರೆ.

Viral Video : ಜಿಮ್​ ಸಲಕರಣೆಯಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ, ಸ್ಮಾರ್ಟ್​ವಾಚ್​ ಮೂಲಕ 911ಗೆ ಕರೆ
ಪ್ರಾತಿನಿಧಿಕ ಚಿತ್ರ
TV9 Web
| Edited By: ಶ್ರೀದೇವಿ ಕಳಸದ|

Updated on:Sep 05, 2022 | 10:47 AM

Share

Viral Video : ಓಹಿಯೋದ ಮಹಿಳೆಯೊಬ್ಬರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಜಿಮ್​ ಸಲಕರಣೆಯಲ್ಲಿ ತಲೆಕೆಳಗಾಗಿ ಸಿಲುಕಿಕೊಂಡು ಬಿಟ್ಟಿದ್ದಾರೆ. ಸುತ್ತಮುತ್ತಲೂ ಯಾರೂ ಇಲ್ಲ. ಜಿಮ್ ಸಹಾಯಕರನ್ನು ಕೂಗಿದರೆ ಅವರು ಆ ಸ್ಥಳದಲ್ಲಿರಲಿಲ್ಲ. ಇವರ ಕೂಗು ಅವರಿಗೆ ಕೇಳಿಯೇ ಇಲ್ಲ. ಎಷ್ಟಂತ ತಲೆಕೆಳಗಾಗಿ ಇರುವುದು? ತಲೆ ಭಾರವೆನ್ನಿಸತೊಡಗಿದೆ. ಮೇಲೇಳಲಾಗುತ್ತಿಲ್ಲ. ಇದಕ್ಕೆ ಪರಿಹಾರವೇ ಇಲ್ಲ ಎಂದೆನ್ನಿಸಿ ಕೊನೆಗೆ ಮುಜುಗರದಿಂದಲೇ 911 ಗೆ ತುರ್ತು ಅವರು ಕರೆ ಮಾಡಿದ್ದಾರೆ. ಕ್ರಿಸ್ಟಿನ್​ ಫಾಲ್ಡ್ಸ್​ ತಮ್ಮ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ ನಂತರ ಸಾಕಷ್ಟು ವೈರಲ್ ಆಗಿದೆ.

ಕ್ರಿಸ್ಟಿನ್ ಬೆಳಗ್ಗೆ 3ಗಂಟೆಗೆ ಮಾಡುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಧಡೂತಿ ದೇಹ ಬೇರೆ. ಬೆನ್ನು ನೋವಿನ ಸಲುವಾಗಿ ಅವರು ಈ ವ್ಯಾಯಾಮವನ್ನು ಮಾಡುತ್ತಿದ್ದರು. ಹೀಗಿರುವಾಗಲೇ ಆ ಜಿಮ್​ ಮಶೀನ್​ ಕೈಕೊಟ್ಟಿದೆ. ಅವರ ಕಾಲುಗಳು ಆ ಮಶೀನಿನೊಳಗೆ ಬಂಧಿಯಾದಾಗ ಏನು ಮಾಡಲು ಸಾಧ್ಯ? ಜಗತ್ತು ಉಲ್ಟಾ ಕಾಣತೊಡಗಿದೆ! ಜಿಮ್​ನಲ್ಲಿ ಪ್ಲೇ ಆಗುತ್ತಿದ್ದ ಜೋರಾದ ಮ್ಯೂಸಿಕ್​ನಿಂದಾಗಿ ಕ್ರಿಸ್ಟಿನ್ ತನ್ನ ಸಹಾಯಕರಿಗೆ ಕರೆದರೂ ಅದು ಅವರಿಗೆ ತಲುಪದೇ ಇದ್ದಾಗ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಆಕೆ. ​ಆಗ ಅವರಿಗೆ ಉಳಿದದ್ದು ಒಂದೇ ಆಯ್ಕೆ 911 ಗೆ ಕರೆ ಮಾಡುವುದು.

ಸುಮಾರು ಐದರಿಂದ ಆರು ನಿಮಿಷಗಳ ನಂತರ ಅವರು ಸ್ಮಾರ್ಟ್​ ವಾಚ್​ ಮೂಲಕ 911 ಗೆ ಕರೆ ಮಾಡಿದ್ದಾರೆ. ‘ಹಾಯ್, ಜಿಮ್​ನಲ್ಲಿ ನಾನೊಬ್ಬಳೇ ಇದ್ದೇನೆ. ತಲೆಕೆಳಗಾಗಿ ಮಶೀನ್​ನಲ್ಲಿ ಸಿಲುಕಿಕೊಂಡಿದ್ದೇನೆ. ಇದರಿಂದ ಪಾರಾಗುವುದು ಹೇಗೆಂದು ನಿಮಗೆ ಗೊತ್ತೇ? ಎಂದು ತುರ್ತು ಪರಿಸ್ಥಿತಿ ಸಿಬ್ಬಂದಿಗೆ ಕೇಳಿದ್ದಾರೆ.

ಕೆಲ ನಿಮಿಷಗಳ ನಂತರ ತುರ್ತು ತಂಡದವರು ಬಂದು ಕ್ರಿಸ್ಟಿನ್​ಗೆ ಸಹಾಯ ಮಾಡಿದ್ದಾರೆ. ನಂತರ ತನಗೆ ಸ್ವಲ್ಪ ಕಾಲ ತಲೆನೋವು ಇತ್ತು ಎಂದು ಕ್ರಿಸ್ಟಿನ್ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:44 am, Mon, 5 September 22

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ