Garasia Tribe: ಮದುವೆಗೂ ಮುಂಚೆ ತಾಯಿ ಆಗ್ತಾರೆ ಇಲ್ಲಿನ ಹೆಣ್ಣು ಮಕ್ಕಳು, ಈ ವಿಚಿತ್ರ ಸಂಪ್ರದಾಯವಿರುವುದು ಎಲ್ಲಿ?

ನಾವೆಷ್ಟೇ ಆಧುನಿಕತೆಗೆ ತೆರೆದುಕೊಂಡರೂ ಕೆಲವು ವಿಚಾರಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಅದರಲ್ಲಿಯೂ ಭಾರತೀಯರಿಗೆ ಮದುವೆಗೂ ಮೊದಲೇ ಮಗುವನ್ನು ಪಡೆಯುವುದು ಸ್ವೀಕರಿಸಲು ಸಾಧ್ಯವಾಗದ ವಿಚಾರವಾಗಿದೆ. ಆದರೆ ಈ ಬುಡಕಟ್ಟಿನ ಹೆಣ್ಣು ಮಕ್ಕಳು ತಾನು ಇಷ್ಟ ಪಡುವ ಹುಡುಗನ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಬಹುದು. ಮದುವೆಗೂ ಮೊದಲೇ ತಾಯಿಯಾಗಬಹುದು. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

Garasia Tribe: ಮದುವೆಗೂ ಮುಂಚೆ ತಾಯಿ ಆಗ್ತಾರೆ ಇಲ್ಲಿನ ಹೆಣ್ಣು ಮಕ್ಕಳು, ಈ ವಿಚಿತ್ರ ಸಂಪ್ರದಾಯವಿರುವುದು ಎಲ್ಲಿ?
Follow us
| Updated By: ಅಕ್ಷತಾ ವರ್ಕಾಡಿ

Updated on: Aug 04, 2024 | 10:36 AM

ಜಗತ್ತಿನಲ್ಲಿರುವ ಕೆಲವು ಬುಡಕಟ್ಟು ಸಮುದಾಯದಲ್ಲಿ ಕೆಲವು ವಿಚಿತ್ರ ಆಚಾರ, ವಿಚಾರಗಳು ಚಾಲ್ತಿಯಲ್ಲಿದೆ. ಕೆಲವು ಸಂಪ್ರದಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದರೂ ಕೂಡ ಆ ಬುಡಗಟ್ಟಿನ ಜನರು ಆಚರಣೆ ಮಾಡುತ್ತಿರುತ್ತಾರೆ. ಭಾರತದ ಈ ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯವೊಂದು ಜಾರಿಯಲ್ಲಿದೆ.ರಾಜಸ್ಥಾನ ಮತ್ತು ಗುಜರಾತ್‌ನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಗರಾಸಿಯಾ ಬುಡಕಟ್ಟಿನ ಜನರಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯವಾದ ವಿಷಯವಾಗಿದೆ.

ಈ ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಗೆ ಮುಂಚೆಯೇ ತಾಯಾಗುತ್ತಾರಂತೆ. ಹುಡುಗನು ಇಷ್ಟವಾದರೆ ಮದುವೆಯಾಗಿ ವೈವಾಹಿಕ ಜೀವನವನ್ನು ಆರಂಭಿಸುತ್ತಾರೆ. ಗರಾಸಿಯಾ ಬುಡಕಟ್ಟಿನಲ್ಲಿ ಈ ಸಂಪ್ರದಾಯವೊಂದು ಜಾರಿಗೆ ಬರಲು ಕಾರಣವು ಇದೆ. ಕೆಲವು ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆಡೆ ವಾಸಿಸಲು ಹೋಗಿದ್ದರು. ನಾಲ್ವರಲ್ಲಿ ಮೂವರು ಮೊದಲು ಮದುವೆಯಾಗಿ ಸಂಸಾರ ಆರಂಭಿಸಿದರೆ, ಒಬ್ಬನು ಮಾತ್ರ ಮದುವೆಯಾಗದೇ ಲಿವ್-ಇನ್ ಸಂಬಂಧದಲ್ಲಿ ಇದ್ದನು.

ಆದರೆ ಮದುವೆಯಾಗಿದ್ದ ಮೂವರಿಗೆ ಮಕ್ಕಳು ಅಗಲಿಲ್ಲವಂತೆ. ಮದುವೆಯಾಗದೇ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದವನಿಗೆ ಮಾತ್ರ ಮಗು ಆಯಿತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಹಾಗೂ ಮದುವೆಗೂ ಮೊದಲು ತಾಯಿಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿತು ಎನ್ನಲಾಗಿದೆ. ಹೀಗಾಗಿ ಈ ಬುಡಕಟ್ಟಿನಲ್ಲಿ ಮದುವೆಗಾಗಿಯೇ ಎರಡು ದಿನಗಳ ಕಾಲ ಜಾತ್ರೆಯೂ ನಡೆಯುತ್ತದೆ.

ಇದನ್ನೂ ಓದಿ: ಪತ್ನಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗಂಡಂದಿರು ಈ ರೀತಿಯೂ ಇರ್ತಾರಂತೆ

ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಭಾಗಿಯಾಗುತ್ತಾರೆ. ಈ ಮೇಳವನ್ನು ಸಂಗಾತಿಯ ಆಯ್ಕೆಗಾಗಿ ಆಯೋಜಿಸಲಾಗುತ್ತದೆಯಂತೆ. ಈ ಮೇಳದಲ್ಲಿ ಹುಡುಗಿಗೆ ಯಾರಾದ್ರೂ ಹುಡುಗನು ಇಷ್ಟವಾದರೆ ಆತನ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿ ಇರಬಹುದು. ಇಷ್ಟವಾಗುವ ಹುಡುಗನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಮಗುವನ್ನು ಪಡೆಯಬಹುದು. ಆ ನಂತರದಲ್ಲಿ ಇಬ್ಬರಿಗೂ ಒಪ್ಪಿಗೆ ಇದ್ದರೆ ಹೆತ್ತವರು ಜೊತೆ ಸೇರಿ ಮಕ್ಕಳ ಮದುವೆಯನ್ನು ಮಾಡುತ್ತಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ