ಹಾಡಹಗಲೇ ಗ್ರಾಮದೊಳಕ್ಕೆ ನುಸುಳಿದ 2 ಸಾವಿರ ಹಸುಗಳು! ಬೇಸ್ತುಬಿದ್ದ ಗ್ರಾಮಸ್ಥರು

ಸಾಧು ಶ್ರೀನಾಥ್​

Updated on: May 21, 2024 | 9:20 AM

ಈ ಹಸುಗಳು ಎಲ್ಲಾ ಕೊಪ್ಪಳ ಮೂಲದ ದನಗಳು ಎಂದು ಗುರುತಿಸಲಾಗಿದೆ. ಮೇವಿನ ಕೊರತೆಯಿಂದ ಈ ದನಗಳನ್ನು ಆ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಜನರು ಏಕಾಏಕಿ ಇಷ್ಟೊಂದು ಹಸುಗಳನ್ನ ಕಂಡು ಬೇಸ್ತುಬಿದ್ದಿದ್ದಂತೂ ಸತ್ಯ.

ಸುಮಾರು 2 ಸಾವಿರಕ್ಕೂ ಹೆಚ್ಚು ಜಾನುವಾರುಗಳು (cattle) ಗ್ರಾಮವೊಂದರಲ್ಲಿ ಏಕಾಏಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ಊರಿಗೆ ಊರಿನ ಜನರು (villagers) ಬೆರಗಾದ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು (ranebennur, haveri) ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ (medleri village) ಹಾಡಹಗಲೆ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಏಕಾಏಕಿ ಸುಮಾರು ಎರಡು ಸಾವಿರಕ್ಕೂ ಅಧಿಕ ಹಸುಗಳು ಆಗಮಿಸಿದ್ದು ಊರಿಗೆ ಊರೇ ಬೆರಗು ಹುಟ್ಟಿಸುವಂತೆ ಮಾಡಿದೆ.

ಈ ಹಸುಗಳು ಎಲ್ಲಾ ಕೊಪ್ಪಳ ಮೂಲದ ದನಗಳು ಎಂದು ಗುರುತಿಸಲಾಗಿದೆ. ಮೇವಿನ ಕೊರತೆಯಿಂದ ಈ ದನಗಳನ್ನು ಆ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಜನರು ಏಕಾಏಕಿ ಇಷ್ಟೊಂದು ಹಸುಗಳನ್ನ ಕಂಡು ಬೇಸ್ತುಬಿದ್ದಿದ್ದಂತೂ ಸತ್ಯ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಇದನ್ನೂ ಓದಿ: ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು