AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯಗೆ ಕೊಡಲು ಬೆಣ್ಣೆ, ಮಜ್ಜಿಗೆ ತಂದ ಅಭಿಮಾನಿ: ಭೇಟಿಗೆ ಅವಕಾಶ ಸಿಗದೆ ನಿರಾಸೆ

ಸಿಎಂ ಸಿದ್ದರಾಮಯ್ಯಗೆ ಕೊಡಲು ಬೆಣ್ಣೆ, ಮಜ್ಜಿಗೆ ತಂದ ಅಭಿಮಾನಿ: ಭೇಟಿಗೆ ಅವಕಾಶ ಸಿಗದೆ ನಿರಾಸೆ

ಗಂಗಾಧರ​ ಬ. ಸಾಬೋಜಿ
|

Updated on: Oct 11, 2025 | 2:51 PM

Share

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಿಎಂ ಸಿದ್ದರಾಮಯ್ಯ ಅಭಿಮಾನಿ ಲಕ್ಷ್ಮಣ್ ಗೌಡ, ಸಿಎಂ ನಿವಾಸ ಕಾವೇರಿಗೆ ಬೆಣ್ಣೆ, ಮಜ್ಜಿಗೆ ಮತ್ತು ಮಾವಿನಹಣ್ಣು ತಂದಿದ್ದರು. ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಅಪೇಕ್ಷೆಯಲ್ಲಿದ್ದ ಅವರಿಗೆ ಅವಕಾಶ ಸಿಗಲಿಲ್ಲ. ಈ ಹಿಂದೆ ಹಲವು ಬಾರಿ ಸಿಎಂಗೆ ತಿಂಡಿ ತಂದಿದ್ದರೂ, ಭೇಟಿಗೆ ಅನುಮತಿ ದೊರೆಯದ ಕಾರಣ ನಿರಾಸೆಯಿಂದಲೇ ತೆರಳಿದರು.

ಬೆಂಗಳೂರು, ಅಕ್ಟೋಬರ್​ 11: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಲಕ್ಷ್ಮಣ್ ಗೌಡ ಎಂಬುವವರು ಸಿಎಂ ಸಿದ್ದರಾಮಯ್ಯಗಾಗಿ ಬೆಣ್ಣೆ, ಮಜ್ಜಿಗೆ ಮತ್ತು ಮಾವಿನಹಣ್ಣು ತೆಗೆದುಕೊಂಡು ಸಿಎಂ ನಿವಾಸ ಕಾವೇರಿಗೆ ಬಂದಿದ್ದರು. ಆದರೆ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅಭಿಮಾನಿ ಲಕ್ಷ್ಮಣ್ ಗೌಡ ಬೇಸರದಲ್ಲಿ ತೆರಳಿದರು. ಈ ಹಿಂದೆಯೂ ಸಿಎಂಗೆ ವಿಶೇಷ ತಿಂಡಿ ತಂದಿದ್ದರು.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More