ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ
ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ?
ಶಿವಮೊಗ್ಗ: ಇದೆಂಥ ಈರ್ಷ್ಯೆ, ಮತ್ಸರ ಮತ್ತು ವಿಕೃತಿ ಮಾರಾಯ್ರೇ? ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚುವುದು ವಿಕೃತಿಯಲ್ಲದೆ ಮತ್ತೇನು? ಈ ಘಟನೆ ಶಿವಮೊಗ್ಗ (Shivamogga) ನಗರದ ಜೆ ಎಸ್ ಕೆ ಎಮ್ ರಸ್ತೆಯಲ್ಲಿ (JKSM Road) ನಡೆದಿದೆ. ದುಷ್ಕರ್ಮಿಯೊಬ್ಬ ಕಾರೊಳಗೆ ಪೆಟ್ರೋಲ್ (petrol) ಸುರಿದು ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ? ಸದ್ಯಕ್ಕಂತೂ ಅವನು ತಪ್ಪಿಸಿಕೊಂಡಿದ್ದಾನೆ, ಅದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ

