ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ
ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ?
ಶಿವಮೊಗ್ಗ: ಇದೆಂಥ ಈರ್ಷ್ಯೆ, ಮತ್ಸರ ಮತ್ತು ವಿಕೃತಿ ಮಾರಾಯ್ರೇ? ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚುವುದು ವಿಕೃತಿಯಲ್ಲದೆ ಮತ್ತೇನು? ಈ ಘಟನೆ ಶಿವಮೊಗ್ಗ (Shivamogga) ನಗರದ ಜೆ ಎಸ್ ಕೆ ಎಮ್ ರಸ್ತೆಯಲ್ಲಿ (JKSM Road) ನಡೆದಿದೆ. ದುಷ್ಕರ್ಮಿಯೊಬ್ಬ ಕಾರೊಳಗೆ ಪೆಟ್ರೋಲ್ (petrol) ಸುರಿದು ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ? ಸದ್ಯಕ್ಕಂತೂ ಅವನು ತಪ್ಪಿಸಿಕೊಂಡಿದ್ದಾನೆ, ಅದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್

ಮನಾಲಿಗೆ ಬರಲೇಬೇಡಿ, ಪಾಕ್ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ

ಕಳ್ಳತನ ಆರೋಪ, ಆರೋಪಿಯ ಶರ್ಟ್ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು

ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
