‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ

Updated on: Mar 21, 2026 | 12:34 PM

ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕ ಸೋಲು ಹಾಗೂ ಗೆಲುವನ್ನು ಕಂಡಿದ್ದಾರೆ. ಈ ಗೆಲುವಿನ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ್ದಾರೆ. ಜೊತೆಗೆ ಸೋಲನ್ನು ಕೂಡ ಸಮಾನವಾಗಿ ಸ್ವೀಕರಿಸಿದ್ದಾರೆ. ರವಿಚಂದ್ರನ್ ಅವರು ವಿಶೇಷ ಕೋರಿಕೆ ಒಂದನ್ನು ಕೂಡ ಇಟ್ಟಿದ್ದಾರೆ. ಅದೇನು ಎಂಬ ಬಗ್ಗೆ ಇಲ್ಲಿದೆ ವಿವರ.

ನಟ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕ ಸೋಲು ಹಾಗೂ ಗೆಲುವನ್ನು ಕಂಡಿದ್ದಾರೆ. ಅವರು ಸೋಲಿನ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಸೋತಾಗ ಯಾರಿಗೂ ಬೇಸರ ಆಗೋದಿಲ್ಲ. ಸೋಲು ಕಂಡಾಗ ಸುತ್ತಲೂ ಇರುವ ಜನರು ಆಡುವ ಮಾತು ಬೇಸರ ಮೂಡಿಸುತ್ತದೆ. ಆ ರೀತಿ ಆಗಬಾರದು’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಹೆಸರಿನ ಸಿನಿಮಾ ಮಾಡಿದ್ದಾರೆ. ಎಐ ನಿರ್ಮಿತ ಸಿನಿಮಾ ಇದಾಗಿದೆ. ಇದರಲ್ಲಿ 30-35 ಹಾಡುಗಳು ಇರಲಿವೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 21, 2026 12:34 PM
Follow Us