‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್​ ಬಾಸ್​ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್​

Aravind KP: ಬಿಗ್​ ಬಾಸ್​ ಪೂರ್ಣಗೊಂಡು ನಾಲ್ಕು ದಿನ ಕಳೆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ಈಗ ಅವರು ಇದೇ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.

‘ಬೇರೆ ವಿಚಾರಗಳಲ್ಲಿ ಮನಸ್ತಾಪ ಬೇಡ’; ಬಿಗ್​ ಬಾಸ್​ ಮುಗಿದ್ಮೇಲೆ ಮೊದಲ ಬಾರಿಗೆ ಅಭಿಮಾನಿಗಳೆದರು ಬಂದ ಅರವಿಂದ್​
| Updated By: Digi Tech Desk

Updated on:Aug 13, 2021 | 1:02 PM

ಅರವಿಂದ್​ ಕೆ.ಪಿ. ಅವರು ಬಿಗ್​ ಬಾಸ್​ ಕನ್ನಡ ಸೀಸನ್​ 8ರ (Bigg Boss Kannada) ರನ್ನರ್​​ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಮಂಜು ವಿರುದ್ಧ ಅವರು ಕೆಲವೇ ಮತಗಳ ಅಂತರದಲ್ಲಿ ಸೋತಿದ್ದಾರೆ. ನಾನು ಗೆಲ್ಲೋಕೆ ಅರವಿಂದ್​ ಅವರೇ ಸ್ಫೂರ್ತಿ ಎಂದು ಮಂಜು ಹೇಳಿದ್ದರು. ಇದು ಅರವಿಂದ್​ಗೆ (Aravind KP) ಖುಷಿ ನೀಡಿದೆ. ಬಿಗ್​ ಬಾಸ್​ ಪೂರ್ಣಗೊಂಡು ನಾಲ್ಕು ದಿನ ಕಳೆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ಈಗ ಅವರು ಇದೇ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.

‘ನೀವು ನನಗೆ ತೋರಿಸಿದ ಪ್ರೀತಿ ಸಾಕಷ್ಟು ಖುಷಿ ನೀಡಿದೆ. ಕೊವಿಡ್​ ಮತ್ತೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಸೇಫ್​ ಆಗಿರಿ. ಬೇರೆಬೇರೆ ವಿಚಾರಕ್ಕೆ ಮನಸ್ತಾಪಗಳು ಬೇಡ’ ಎಂದು ಅರವಿಂದ್​ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಮಿನಿ ಬಿಗ್​ ಬಾಸ್​ ಬಗ್ಗೆ ಹೊಸ ಅಪ್​ಡೇಟ್​; ನೀವಂದುಕೊಂಡಂತಿರಲ್ಲ ಸ್ಪರ್ಧಿಗಳು

Published On - 12:27 pm, Fri, 13 August 21

Follow us