AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಿಂದ ವಾಪಸ್ಸಾದ ಬಳಿಕ ನಿರಾಳರಾಗಿರುವ ವಿ ಸೋಮಣ್ಣ ಬೆಂಬಲಿಗರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದರು

ದೆಹಲಿಯಿಂದ ವಾಪಸ್ಸಾದ ಬಳಿಕ ನಿರಾಳರಾಗಿರುವ ವಿ ಸೋಮಣ್ಣ ಬೆಂಬಲಿಗರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2024 | 12:54 PM

ಎಲ್ಲರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಸೋಮಣ್ಣ ಮಗುವಿನ ಕೈಲಿದ್ದ ಎಳ್ಳು ಬೆಲ್ಲದ ಬಟ್ಟಲನ್ನು ಇಸಿದುಕೊಂಡು ಮೊದಲು ಆಕೆಗೆ ತಿನ್ನಿಸಿ ಅದೇ ಬಟ್ಟಲಿನಿಂದ ಉಳಿದವರಿಗೆಲ್ಲ ಹಂಚಿದರು.

ಬೆಂಗಳೂರು: ವಿಧಾನಸಭಾ ಚುನಾವಣೆ 2023 (Assembly Polls 2023) ರಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲ್ಲಿ ಸೋಲು ಅನುಭವಿಸಿದ ಬಳಿಕ ತೀವ್ರ ಹತಾಷೆ ಮತ್ತು ನಿರಾಶೆಗೊಳಗಾಗಿದ್ದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಶನಿವಾರ ದೆಹಲಿಯಲ್ಲಿ ಗೃಹಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ವಾಪಸ್ಸಾದ ಬಳಿಕ ಕೊಂಚ ಗೆಲುವಾದಂತೆ ಕಾಣುತ್ತಿದ್ದಾರೆ. ಮಕರ ಸಂಕ್ರಾತಿ ಹಬ್ಬವಾಗಿರುವ ಇಂದು ಅವರು ಮನೆಯಿಂದ ಹೊರಬಿದ್ದಾಗ, ಎಳ್ಳು ಬೆಲ್ಲ ಹಂಚಲು ಅಗಮಿಸಿದ್ದ ಅಭಿಮಾನಿ ಮತ್ತು ಬೆಂಬಲಿಗರನ್ನು ಕಂಡರು. ಅವರಲ್ಲೊಬ್ಬರು ತಮ್ಮ ಪುಟ್ಟ ಮಗಳನ್ನು ಕರೆದುಕೊಂಡು ಬಂದಿದ್ದರು. ಎಲ್ಲರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಸೋಮಣ್ಣ ಮಗುವಿನ ಕೈಲಿದ್ದ ಎಳ್ಳು ಬೆಲ್ಲದ ಬಟ್ಟಲನ್ನು ಇಸಿದುಕೊಂಡು ಮೊದಲು ಆಕೆಗೆ ತಿನ್ನಿಸಿ ಅದೇ ಬಟ್ಟಲಿನಿಂದ ಉಳಿದವರಿಗೆಲ್ಲ ಹಂಚಿದರು. ತಮ್ಮ ರಾಜಕೀಯ ಭವಿಷ್ಯದ ಅವರು ಏನು ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಶಾ ಅವರನ್ನು ಭೇಟಿಯಾದ ಬಳಿಕ ನಿರಾಳತೆಯ ಭಾವ ಅವರಲ್ಲಿ ಕಾಣುತ್ತಿರುವುದು ಸತ್ಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ