‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ

ಇತ್ತೀಚೆಗೆ ಧನರಾಜ್​ ಅವರು ಅತ್ತಿದ್ದರು. ಈಗ ಐಶ್ವರ್ಯಾ ಕೂಡ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಇತರೆ ಸ್ಪರ್ಧಿಗಳ ಮಾತಿನ ಭರದಲ್ಲಿ ಐಶ್ವರ್ಯಾಗೆ ನೋವಾಗಿದೆ. ಆ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್​ನಲ್ಲಿ ಶೋ ಆರಂಭ ಆಗಿದೆ. ಐಶ್ವರ್ಯಾ ಅವರು ಸ್ವರ್ಗದಲ್ಲಿ ಇದ್ದರೂ ಕೂಡ ಕಣ್ಣೀರು ಹಾಕುವುದು ತಪ್ಪಲಿಲ್ಲ.

‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
|

Updated on: Oct 03, 2024 | 5:51 PM

ಕಿರುತೆರೆ ನಟಿ ಐಶ್ವರ್ಯಾ ಅವರು ಬಿಗ್​ ಬಾಸ್​ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ. ಅವರ ಕಣ್ಣೀರಿಗೆ ಕಾರಣ ಆಗಿರುವುದು ಖಾರವಾದ ಮಾತುಗಳು. ಅಳುತ್ತಾ ಕುಳಿತ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ‘ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ’ ಎಂದು ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಐಶ್ವರ್ಯಾಗೆ ಮಾತುಗಳಿಂದ ನೋವುಂಟು ಮಾಡಿದ್ದು ಯಾರು ಎಂಬುದು ಅಕ್ಟೋಬರ್​ 3ರ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us