AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ‘ಕೇವಲ ಬೆಳ್ಳಿ ಪಾತ್ರೆ’; ಟ್ರೋಫಿಯೊಂದಿಗೆ ಓಡಿಹೋದ ನಖ್ವಿಗೆ ಸೂರ್ಯ ತಿರುಗೇಟು

Asia Cup 2025: ‘ಕೇವಲ ಬೆಳ್ಳಿ ಪಾತ್ರೆ’; ಟ್ರೋಫಿಯೊಂದಿಗೆ ಓಡಿಹೋದ ನಖ್ವಿಗೆ ಸೂರ್ಯ ತಿರುಗೇಟು

ಪೃಥ್ವಿಶಂಕರ
|

Updated on: Sep 29, 2025 | 7:55 PM

Share

Suryakumar Yadav on Asia Cup Trophy Snub: ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಇದರಿಂದ ನಖ್ವಿ ಕೋಪಗೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ಸೂರ್ಯಕುಮಾರ್ ಯಾದವ್, ಟ್ರೋಫಿ ಕೇವಲ ಬೆಳ್ಳಿ ಪಾತ್ರೆಯಾಗಿದ್ದು, ಜನರ ಹೃದಯಗಳನ್ನು ಗೆಲ್ಲುವುದು, ತಂಡದ ನಂಬಿಕೆ ಮತ್ತು ತೆರೆಮರೆಯ ಪ್ರಯತ್ನವೇ ನಿಜವಾದ ಗೆಲುವು ಎಂದು ಹೇಳಿದ್ದಾರೆ. ಇದು ವಿವಾದವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಏಷ್ಯಾಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾಕಪ್ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಇದರಿಂದ ಕೋಪಗೊಂಡ ಮೊಹ್ಸಿನ್ ನಖ್ವಿ ಟ್ರೋಫಿಯೊಂದಿಗೆ ಕ್ರೀಡಾಂಗಣದಿಂದ ಹೊರನಡೆದಿದ್ದರು. ಇದೀಗ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಈ ವಿಷಯದ ಬಗ್ಗೆ ANI ಜೊತೆ ಮಾತನಾಡಿದ್ದು, ನಿಜವಾದ ಟ್ರೋಫಿ ಯಾವುದು ಎಂಬುದನ್ನು ವಿವರಿಸಿದ್ದಾರೆ.

ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿದ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್, ‘ನಾನು ಇದನ್ನು ವಿವಾದ ಎಂದು ಕರೆಯುವುದಿಲ್ಲ. ನೀವು ನೋಡಿದ್ದರೆ, ಟ್ರೋಫಿಯ ಫೋಟೋಗಳನ್ನು ಇಲ್ಲಿ, ಅಲ್ಲಿ ಪೋಸ್ಟ್ ಮಾಡಬಹುದು ಅಷ್ಟೆ. ಆದರೆ ನಿಜವಾದ ಟ್ರೋಫಿ ಎಂದರೆ ನೀವು ಜನರ ಹೃದಯಗಳನ್ನು ಗೆದ್ದಾಗ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ತೋರಿಸಿದ ನಂಬಿಕೆಯೇ ನಿಜವಾದ ಟ್ರೋಫಿ. ಪರದೆಯ ಹಿಂದೆ ಕೆಲಸ ಮಾಡುವ ಜನರೇ ನಿಜವಾದ ಟ್ರೋಫಿ. ನಿಜವಾದ ಟ್ರೋಫಿ ಎಂದರೆ ಮೈದಾನದಲ್ಲಿರುವ ಅನೇಕ ಜನರ ಕೆಲಸ ಮತ್ತು ಪ್ರಯತ್ನ. ಈ ಟ್ರೋಫಿ ಕೇವಲ ಬೆಳ್ಳಿ ಪಾತ್ರೆ. ಸೋಲಿಲ್ಲದೆ ನೀವು ಟೂರ್ನಮೆಂಟ್ ಗೆದ್ದಾಗ ಅದು ಅದ್ಭುತವೆನಿಸುತ್ತದೆ. ಇಡೀ ತಂಡ ಮತ್ತು ಇಡೀ ದೇಶಕ್ಕೆ ಇದು ಒಂದು ಉತ್ತಮ ಭಾವನೆಯಾಗಿತ್ತು. ಇದು ತುಂಬಾ ಖುಷಿ ಕೊಟ್ಟಿತು. ಆ ರಾತ್ರಿ ಎಲ್ಲಾ ಆಟಗಾರರು ಒಟ್ಟಿಗೆ ಬಂದು, ಕುಳಿತು, ತುಂಬಾ ಆನಂದಿಸಿದರು’ ಎಂದಿದ್ದಾರೆ.