‘ಒಮ್ಮೆ ಜೋರಾಗಿ ಉಸಿರು ತೆಗೆದರು’; ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ನಟ ದಿಲೀಪ್ ರಾಜ್ ಅವರ ಅಂತಿಮ ಕ್ಷಣಗಳ ಬಗ್ಗೆ ಆಟೋ ಚಾಲಕ ದೇವೇಂದ್ರ ನಾಯ್ಡು ಅವರು ಪ್ರತ್ಯಕ್ಷದರ್ಶಿ ವರದಿಯನ್ನು ನೀಡಿದ್ದಾರೆ. ಮೇ 13ರಂದು ಬೆಳಿಗ್ಗೆ ಸುಮಾರು 6:10ಕ್ಕೆ ದಿಲೀಪ್ ರಾಜ್ ಅವರ ಪತ್ನಿ ಆತಂಕದಿಂದ ರಸ್ತೆಗೆ ಬಂದು ಸಹಾಯ ಕೇಳಿದಾಗ ದೇವೇಂದ್ರ ಅವರು ಅಲ್ಲಿಗೆ ತಲುಪಿದ್ದರು.
ನಟ ದಿಲೀಪ್ ರಾಜ್ ಅವರ ಅಂತಿಮ ಕ್ಷಣಗಳ ಬಗ್ಗೆ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ. ದಿಲೀಪ್ ಅವರು ಮನೆಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿದ್ದರು. ದೇವೇಂದ್ರ ಮತ್ತು ಮನೆಯ ಸೆಕ್ಯೂರಿಟಿ ಸೇರಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡರು. ಬೆಂಗಳೂರು ಆರ್ಆರ್ ನಗರದ ಆರ್ಚ್ ಬಳಿ ಬರುವಾಗ ದಿಲೀಪ್ ರಾಜ್ ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡಂರಂತೆ. ಆಗಲೇ ಉಸಿರು ಹೋಗಿತ್ತು ಎಂಬ ಅನುಮಾನ ಆಟೋ ಚಾಲಕನದ್ದು. ಅವರು ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
