Mandya: ಸುದ್ದಿಯಲ್ಲಿರದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಸಪ್ಪನ ಪಾದ ಕೇಳಿದರು!
ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.
ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿಲ್ಲ ಅನ್ನೋದು ಸಹ ಒಂದು ಸುದ್ದಿ ಮಾರಾಯ್ರೇ. ಶನಿವಾರ ಬೆಳಗ್ಗೆ ಅವರು ಸುದ್ದಿಗೆ ಬಂದಿದ್ದಾರೆ. ವಿವಾದವೇನೂ ಇಲ್ಲ! ವಿಷಯವೇನೆಂದರೆ ರೋಹಿಣಿ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ (Kalabhairaveshwara) ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಲ್ಲಿ ರೂಢಿಯಲ್ಲಿರುವ ಪದ್ಧತಿಯೆಂದರೆ, ಕಾಲಭೈರವೇಶ್ವರನಿಗೆ ಪೂಜೆ ನೆರವೇರಿಸಿದವರು ಬಸಪ್ಪನ ಮುಂದೆ ಕೂತು ಪಾದ ಕೇಳುತ್ತಾರೆ. ಬಸಪ್ಪ ಪಾದ ನೀಡಿದರೆ ಹೊತ್ತ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ರೋಹಿಣಿ ಕೂಡ ಅದನ್ನೇ ಮಾಡಿದರು. ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

