AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya:  ಸುದ್ದಿಯಲ್ಲಿರದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಸಪ್ಪನ ಪಾದ ಕೇಳಿದರು!

Mandya:  ಸುದ್ದಿಯಲ್ಲಿರದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಸಪ್ಪನ ಪಾದ ಕೇಳಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2023 | 12:01 PM

ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.

ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿಲ್ಲ ಅನ್ನೋದು ಸಹ ಒಂದು ಸುದ್ದಿ ಮಾರಾಯ್ರೇ. ಶನಿವಾರ ಬೆಳಗ್ಗೆ ಅವರು ಸುದ್ದಿಗೆ ಬಂದಿದ್ದಾರೆ. ವಿವಾದವೇನೂ ಇಲ್ಲ! ವಿಷಯವೇನೆಂದರೆ ರೋಹಿಣಿ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ (Kalabhairaveshwara) ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇಲ್ಲಿ ರೂಢಿಯಲ್ಲಿರುವ ಪದ್ಧತಿಯೆಂದರೆ, ಕಾಲಭೈರವೇಶ್ವರನಿಗೆ ಪೂಜೆ ನೆರವೇರಿಸಿದವರು ಬಸಪ್ಪನ ಮುಂದೆ ಕೂತು ಪಾದ ಕೇಳುತ್ತಾರೆ. ಬಸಪ್ಪ ಪಾದ ನೀಡಿದರೆ ಹೊತ್ತ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ರೋಹಿಣಿ ಕೂಡ ಅದನ್ನೇ ಮಾಡಿದರು. ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಜೊತೆ ಕಳೆದ ತಿಂಗಳು ಮಾತಿನ ಜಗಳ ನಡೆಸಿದ್ದ ರೋಹಿಣಿ ಸರ್ಕಾರದಿಂದ ವರ್ಗಾವಣೆ ಹೊಂದಿದ ಬಳಿಕ ಮುಗುಮ್ಮಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ