AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿಗಾಗಿ ವ್ಯಕ್ತಿಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ: ಪತ್ನಿ, ಮಕ್ಕಳಿಂದ ಧರಣಿ

ಆಸ್ತಿಗಾಗಿ ವ್ಯಕ್ತಿಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ: ಪತ್ನಿ, ಮಕ್ಕಳಿಂದ ಧರಣಿ

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Sep 07, 2026 | 2:02 PM

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಸ್ತಿ ವಿವಾದವು ಅಮಾನವೀಯ ರೂಪ ತಾಳಿದೆ. ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಸಿಕ್ಕಿಲ್ಲವೆಂದು ಮಕ್ಕಳು ಮೃತ ತಂದೆ ಯಲ್ಲಪ್ಪ ವಾಗೇನವರ್ ಅವರ ಶವವನ್ನೇ ತಹಶೀಲ್ದಾರ್ ಕಚೇರಿ ಮುಂದೆ ತಂದು ಪ್ರತಿಭಟನೆ ನಡೆಸಿದ್ದಾರೆ. ಜೀವಂತವಾಗಿದ್ದಾಗಲೂ ಇದ್ದ ಆಸ್ತಿ ಕಿತ್ತಾಟ ಮರಣದ ನಂತರವೂ ಮುಂದುವರಿದಿದೆ. ನ್ಯಾಯಕ್ಕಾಗಿ ಕುಟುಂಬಸ್ಥರು ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಬಾಗಲಕೋಟೆ, ಸೆಪ್ಟೆಂಬರ್​​ 07: ಆಸ್ತಿ ಸಮನಾಗಿ ಹಂಚುವಂತೆ ಆಗ್ರಹಿಸಿ ಪತ್ನಿಯರು, ಮಕ್ಕಳು ಧರಣಿ ತಹಶೀಲ್ದಾರ್​​ ಕಚೇರಿ ಮುಂದೆ ಶವವಿಟ್ಟು ಪ್ರತಿಭಟಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ತಹಶೀಲ್ದಾರ್​​ ಕಚೇರಿ ಬಳಿ ನಡೆದಿದೆ. ಜಮಖಂಡಿಯ ಅವಟಿ ಗಲ್ಲಿ ನಿವಾಸಿ ಯಲ್ಲಪ್ಪ ವಾಗೆಣ್ಣವರ(76) ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಮೊದಲ ಪತ್ನಿಗೆ ಓರ್ವ ಮಗನಿದ್ದು, 2ನೇ ಪತ್ನಿಗೆ ಐವರು ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳು ಇದ್ದಾರೆ. ಈ ಪೈಕಿ 2ನೇ ಪತ್ನಿಯ ಇಬ್ಬರು ಮಕ್ಕಳು 2 ಎಕರೆ 15 ಗುಂಟೆ ಭೂಮಿ ಯಾರಿಗೂ ತಿಳಿಯದಂತೆ ಮಾರಿದ್ದು, ಈಗಾಗಲೇ ಜಮೀನು ಮಾರಿರೋದನ್ನು ತಡೆಹಿಡಿಯಬೇಕು. ನಮ್ಮ ಪಾಲಿಗೆ ಬರುವ ಆಸ್ತಿಯನ್ನು ಸಮಾನವಾಗಿ ಹಂಚಬೇಕು ಎಂದು ಮೊದಲ ಪತ್ನಿ, ಮಗ ಹಾಗೂ 2ನೇ ಪತ್ನಿ ಸೇರಿ ಮೂವರು ಮಕ್ಕಳು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us