ಪೆಟ್ರೋಲ್ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಯುವಕರಿಂದ ಹಲ್ಲೆ
ಮುಧೋಳದ ಜೈ ಮಲ್ಹಾರ್ ಹೆಚ್ಪಿ ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್ ಹಾಕುವ ತಡವಾದ ಹಿನ್ನೆಲೆ ನಾಲ್ವರು ಯುವಕರು ಪಂಪ್ ಕೆಲಸಗಾರರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ದೊಣ್ಣೆ ಮತ್ತು ಬೆಲ್ಟ್ಗಳಿಂದ ಹಲ್ಲೆ ಮಾಡಿದ್ದು, ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಮೇ 2 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ, ಮೇ 05: ಬೈಕ್ಗೆ ಪೆಟ್ರೋಲ್ (petrol) ಹಾಕುವ ವಿಚಾರಕ್ಕೆ ಗಲಾಟೆ ಉಂಟಾಗಿದ್ದು, ಕೆಲಸಗಾರರ ಮೇಲೆ ಯುವಕರಿಂದ ಹಲ್ಲೆ ಮಾಡಿರುವಂತ ಘಟನೆ ಜಿಲ್ಲೆಯ ಮುಧೋಳ ನಗರದ ಮಹಾಲಿಂಗಪುರ ರಸ್ತೆಯಲ್ಲಿರುವ ಜೈ ಮಲ್ಹಾರ್ ಹೆಚ್ಪಿ ಪೆಟ್ರೋಲ್ ಪಂಪ್ನಲ್ಲಿ ನಡೆದಿದೆ. ಪೆಟ್ರೋಲ್ ಹಾಕುವುದು ತಡವಾಗಿದ್ದಕ್ಕೆ ಪುಂಡರ ಗುಂಪಿನಿಂದ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.