ಯಾದಗಿರಿ ಜಿಲ್ಲೆಯ ಜೀವಾನಾಡಿ ಭೀಮಾನದಿಯ ನೀರು ಸಂಪೂರ್ಣ ಕಲುಷಿತ, ಬಳಕೆಗೆ ಯೋಗ್ಯವಲ್ಲ: ಸ್ಥಳೀಯರು
ಭೀಮಾ ನದಿನೀರನ್ನು ಕೇವಲ ನಾಮಕಾವಾಸ್ತೆ ಫಿಲ್ಟರ್ ಮಾಡುತ್ತಾರೆ, ನೀರು ಕುಡಿಯುವ ಜನ ಹಲವು ರೀತಿಯ ಕಾಮಾಲೆ ರೋಗಗಳಿಗೆಗ ತುತ್ತಾಗಿ ನಾಟಿ ಔಷಧಿ ಮಾಡಿಸಿಕೊಳ್ಳಲು ರಾತ್ರಿಯಿಡೀ ಸರತಿ ಸಾಲಲ್ಲಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ನಗರಸಭೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳ ನಿರ್ಲಕ್ಷ್ಯ ಅಕ್ಷಮ್ಯ ಎಂದು ಅವರು ಕಿಡಿ ಕಾರುತ್ತಾರೆ.
ಯಾದಗಿರಿ, ಏಪ್ರಿಲ್ 10: ಕೇವಲ ಯಾದಗಿರಿ ನಗರ ಮಾತ್ರವಲ್ಲ, ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಗೆ ಭೀಮಾನದಿಯ ನೀರು ಸರಬರಾಜು ಆಗುತ್ತದೆ. ಆದರೆ ಭೀಮೆಯ ನೀರು ಕುಡಿಯಲು ಯೋಗ್ಯ ಅಲ್ಲವೇ ಅಲ್ಲ ಅಂತ ನಮ್ಮ ಯಾದಗಿರಿ ವರದಿಗಾರ ವಿಡಿಯೋದಲ್ಲಿ ವಿವರಿಸಿದ್ದಾರೆ. ಯಾದಗಿರಿ ನಗರದ ಚರಂಡಿ ನೀರೆಲ್ಲ (sewerage) ಹಳ್ಳಗಳ ಮೂಲಕ ನದಿಗೆ ಬಂದು ಸೇರುತ್ತಿದೆ ಮತ್ತ್ತು ನದಿ ಪಕ್ಕದಲ್ಲೇ ರುದ್ರಭೂಮಿ ಇದ್ದು ಸತ್ತವರು ಬಳಸುತ್ತಿದ್ದ ಬಟ್ಟೆಬರೆ ಮತ್ತು ಹಾಸಿಗೆಯನ್ನು ದಡದಲ್ಲಿ ಬಿಸಾಡುತ್ತಿರುವುದರಿಂದ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಮತ್ತು ಕುಡಿಯುವ ಮಾತು ಹಾಗಿರಲಿ ಇತರ ಬಳಕೆಗೂ ಅಯೋಗ್ಯವಾಗಿದೆ.
ಇದನ್ನೂ ಓದಿ: ಯಾದಗಿರಿ: ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕ, 2 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಪೊಲೀಸ್ ಕಾನ್ಸ್ಟೇಬಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

