‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ಈ ವಾರದ ಟಾಸ್ಕ್ನಲ್ಲಿ ಹನುಮಂತು ಹಾಗೂ ಗೌತಮಿ ಜೋಡಿಯಾಗಿದ್ದಾರೆ. ಗೌತಮಿ ಅಳುತ್ತಾ ಹನುಮಂತು ಬಳಿ ಕ್ಷಮೆ ಕೇಳಿದ್ದಾರೆ. ಹನುಮಂತು ತೆರೆದ ಹೃದಯದಿಂದ ಕ್ಷಮಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಆರಂಭದಿಂದಲೂ ಜೋಡಿ ಟಾಸ್ಕ್ ನಡೆಯುತ್ತಿದೆ. ಹನುಮಂತಿ ಹಾಗೂ ನಟಿ ಗೌತಮಿ ಜೋಡಿ ಆಗಿದ್ದರು. ಆದರೆ ಜೋಡಿ ಬದಲಿಸಿಕೊಳ್ಳುವ ಅವಕಾಶ ಸಿಕ್ಕಾಗ ಗೌತಮಿ, ಹನುಮಂತನ ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ತ್ರಿವಿಕ್ರಮ್ ಭವ್ಯಾ ಅನ್ನು ಆಯ್ಕೆ ಮಾಡಿಕೊಂಡ. ಆದರೆ ಅವರ ವಿರುದ್ಧವೇ ಆಡಿ ಗೌತಮಿ ಹಾಗೂ ಹನುಮಂತ ಟಾಸ್ಕ್ ಆಡಿ ಗೆದ್ದಿದ್ದಾರೆ. ಆದರೆ ತಾನು ಹನುಮಂತು ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದ ಬಗ್ಗೆ ಗೌತಮಿಗೆ ಬೇಸರ ಮೂಡಿದೆ. ಹನುಮಂತು ಬಳಿ ಈ ಬಗ್ಗೆ ಕ್ಷಮೆ ಸಹ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

