AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮಂತ್ರಿಗಳ ಭ್ರಷ್ಟಾಚಾರದ ಆಡಿಯೋ, ವಿಡಿಯೋ ಹೊರ ಬಂದಿದೆ ಎಂದ ಎಂಎಲ್​​ಸಿ ಸಿಟಿ ರವಿ

ನಿಮ್ಮ ಮಂತ್ರಿಗಳ ಭ್ರಷ್ಟಾಚಾರದ ಆಡಿಯೋ, ವಿಡಿಯೋ ಹೊರ ಬಂದಿದೆ ಎಂದ ಎಂಎಲ್​​ಸಿ ಸಿಟಿ ರವಿ

ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 03, 2025 | 8:38 PM

Share

ಸಿ.ಟಿ. ರವಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲತೆ, ರೈತರ ಆತ್ಮಹತ್ಯೆ ಮತ್ತು ಗಾಂಜಾ-ಮಟ್ಕಾ ಹಾವಳಿಯನ್ನು ಆರೋಪಿಸಿದ್ದಾರೆ. ಭ್ರಷ್ಟಾಚಾರ ಮತ್ತು ಪೂರೈಸದ ಗ್ಯಾರಂಟಿಗಳ ಬಗ್ಗೆ ಪ್ರಶ್ನಿಸಿದ ಅವರು, ಸರ್ಕಾರ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು, ನವೆಂಬರ್​ 01: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕರ್ನಾಟಕದಲ್ಲಿ ದಿನನಿತ್ಯ ಹತ್ಯೆ ಮತ್ತು ಅತ್ಯಾಚಾರ ನಡೆಯುತ್ತದೆ. ಇದು ಕರ್ನಾಟಕಕ್ಕೆ ಗೌರವ ತರುವಂತಹದ್ದಲ್ಲ. ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೀಡಾಗಿರುವುದು ನಿಮ್ಮ ಗಮನಕ್ಕಿಲ್ಲವೇ? ಕರ್ನಾಟಕ ಗಾಂಜಾ, ಮಟ್ಕಾ ದಂಧೆಗೆ ರಾಜಾಶ್ರಯ ಸಿಗುತ್ತಿದೆ ಎಂದು ಅನುಮಾನವಿದೆ. ನಿಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಕೆಲವು ಆಡಿಯೋ, ವೀಡಿಯೋ ಹೊರ ಬಂದಿದೆಯಲ್ಲಾ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 03, 2025 08:36 PM