AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ರಾಜಕೀಯ ಪರಿಸರವನ್ನು ಕಲುಷಿತಗೊಳಿಸಿದ್ದೇ ಬಿಜೆಪಿ ನಾಯಕರು: ಪುಟ್ಟರಂಗಶೆಟ್ಟಿ, ಶಾಸಕ

ರಾಜ್ಯದ ರಾಜಕೀಯ ಪರಿಸರವನ್ನು ಕಲುಷಿತಗೊಳಿಸಿದ್ದೇ ಬಿಜೆಪಿ ನಾಯಕರು: ಪುಟ್ಟರಂಗಶೆಟ್ಟಿ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2024 | 2:19 PM

Share

ಶಾಸಕರ ಖರೀದಿಗೆ ₹100 ಕೋಟಿ ನೀಡುವುದು ಬಿಜೆಪಿಯವರಿಗೆ ಹೊಸತೇನಲ್ಲ ಎನ್ನುವ ಪುಟ್ಟರಂಗಶೆಟ್ಟಿ, ತನ್ನನ್ನು ಸಂಪರ್ಕಿಸುವ ಸಾಹಸ ಇದುವರೆಗೆ ಅವರು ಮಾಡಿಲ್ಲ, ಆಫರ್ ತೆಗೆದುಕೊಂಡು ತನ್ನಲ್ಲಿಗೇನಾದರೂ ಬಂದರೆ ಅವರ ಗ್ರಹಚಾರ ಬಿಡಿಸುವುದಾಗಿ ನಗುತ್ತಾ ಹೇಳಿದರು.

ಚಾಮರಾಜನಗರ: ರಾಜ್ಯದ ರಾಜಕೀಯವನ್ನು ಕಲುಷಿತಗೊಳಿಸಿದ್ದೇ ಬಿಜೆಪಿ ನಾಯಕರು, 2008ರಿಂದ ಅವರು ಬೇರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡುವ ಕೆಲಸ ಶುರುಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಸಿ ಪುಟ್ಟರಂಗಶೆಟ್ಟಿ ಹೇಳಿದರು. ಬಿಜೆಪಿಯ ಯಾವುದಾದರೂ ನಾಯಕ ಮುಂಬಾಗಿಲಿಂದ ಬಂದ ಮುಖ್ಯಮಂತ್ರಿಯಾಗಿರುವ ನಿದರ್ಶನವಿದೆಯೇ? ಎಲ್ಲರೂ ಹಿಂಬಾಗಿಲಿನಿಂದ ಬಂದು ರಾಜ್ಯದ ಚುಕ್ಕಾಣಿ ಹಿಡಿದವರು ಎಂದು ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ:  ಮುಸ್ಲಿಮರ ಓಲೈಕೆ, ಹಿಂದೂ ಕಡೆಗಣನೆ ನೋಡಿ ಶೆಟ್ಟರ್ ವಾಪಸ್​ -ಇದು ಆಪರೇಷನ್ ಕಮಲ ಅಲ್ಲ ಎಂದ ಆರ್. ಅಶೋಕ