ನಿರಾಶೆ ಬದಿಗೊತ್ತಿರುವ ಸಿಟಿ ರವಿ ಮನೆಯಲ್ಲಿ ಮಧ್ಯಾಹ್ನದ ಭೋಜನ ಸವಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಇವತ್ತು ವಿಜಯೇಂದ್ರ ಚಿಕ್ಕಮಗಳೂರಿಗೆ ಪ್ರವಾಸ ಬೆಳೆಸಿ ಬಸವನಹಳ್ಳಿ ರಸ್ತೆಯಲ್ಲಿರುವ ರವಿಯವರ ಮನೆಗೆ ಭೇಟಿ ನೀಡಿದರು. ಯಡಿಯೂರಪ್ಪರ ಮಗನನ್ನು ರವಿ ಮತ್ತು ಮನೆಯವರು ಬಹಳ ಆತ್ಮೀಯವಾಗಿ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಮಧ್ಯಾಹ್ನದ ಊಟವನ್ನು ರವಿ ಮನೆಯಲ್ಲೇ ಏರ್ಪಡಿಸಲಾಗಿತ್ತು.

Follow us
|

Updated on: Jan 31, 2024 | 5:49 PM

ಚಿಕ್ಕಮಗಳೂರು: ನಿಮಗೆ ನೆನಪಿರಬಹುದು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹೈಕಮಾಂಡ್ ಬಿವೈ ವಿಜಯೇಂದ್ರರನ್ನು (BY Vijayendra) ನೇಮಕ ಮಾಡಿದಾಗ ರಾಜಕೀಯದಲ್ಲಿ ಅವರಿಗಿಂತ ಹಿರಿಯರಾಗಿರುವ ಮಾಜಿ ಶಾಸಕ ಸಿಟಿ ರವಿಗೆ (CT Ravi) ನಿರಾಶರಾಗಿದ್ದರು. ಅವರ ಮಾತಿನಲ್ಲಿ ಅಗ ಬೇಸರ ಸ್ಪಷ್ಟವಾಗಿ ಕಾಣುತಿತ್ತು ಮತ್ತು ಒಂದೆರಡು ಬಾರಿ ಅವರು ವೈರಾಗ್ಯದ ಮಾತುಗಳನ್ನೂ ಆಡಿದ್ದರು. ಅದರೆ, ಈಗ ಅದೆಲ್ಲ ಮಾಯವಾದಂತಿದೆ. ಇವತ್ತು ವಿಜಯೇಂದ್ರ ಚಿಕ್ಕಮಗಳೂರಿಗೆ (Chikmagalur) ಪ್ರವಾಸ ಬೆಳೆಸಿ ಬಸವನಹಳ್ಳಿ ರಸ್ತೆಯಲ್ಲಿರುವ ರವಿಯವರ ಮನೆಗೆ ಭೇಟಿ ನೀಡಿದರು. ಯಡಿಯೂರಪ್ಪರ ಮಗನನ್ನು ರವಿ ಮತ್ತು ಮನೆಯವರು ಬಹಳ ಆತ್ಮೀಯವಾಗಿ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಂಡರು. ಮಧ್ಯಾಹ್ನದ ಊಟವನ್ನು ರವಿ ಮನೆಯಲ್ಲೇ ಏರ್ಪಡಿಸಲಾಗಿತ್ತು. ವಿಜೆಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ರವಿ ಮತ್ತು ಕೆಲ ಸ್ಥಳೀಯ ಬಿಜೆಪಿ ನಾಯಕರು ಒಟ್ಟಿಗೆ ಕೂತು ಊಟ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮನೆಯ ಹೆಣ್ಣಮಕ್ಕಳು ಲವಲವಿಕೆಯಿಂದ ಓಡಾಡುತ್ತಾ ಅತಿಥಿಗಳಿಗೆ ಊಟ ಬಡಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ